ಮೆಲ್ಟ್ ವಾಟರ್ ಚೆಸ್ : ಪ್ರಗ್ನಾನಂದ ಪ್ರಯತ್ನ ವಿಫಲ
Team Udayavani, May 28, 2022, 1:24 AM IST
ಹೊಸದಿಲ್ಲಿ: ಭಾರತದ ಯಂಗ್ ಗ್ರ್ಯಾನ್ಮಾಸ್ಟರ್ ಆರ್. ಪ್ರಗ್ನಾನಂದ ಅವರು “ಮೆಲ್ಟ್ ವಾಟರ್ ಚೆಸ್ ಚಾಂಪಿಯನ್ಶಿಪ್’ನಲ್ಲಿ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ವಿಶ್ವದ ನಂ.2 ಖ್ಯಾತಿಯ ಚೀನದ ಡಿಂಗ್ ಲಿರೆನ್ ವಿರುದ್ಧ ವೀರೋಚಿತ ಸೋಲನುಭವಿಸಿ ರನ್ನರ್ ಅಪ್ಗೆ ತೃಪ್ತಿಪಟ್ಟರು.
ಶುಕ್ರವಾರ ನಡೆದ ಆನ್ಲೈನ್ ಫೈನಲ್ನಲ್ಲಿ ಇಂಡಿಯನ್ ಜಿಎಂ ಪ್ರಗ್ನಾನಂದ ಮೊದಲ ಸೆಟ್ನಲ್ಲಿ 1.5-2.5 ಅಂತರದ ಸೋಲನುಭವಿಸಿದರು. ಆದರೆ ಬಳಿಕ ಲಿರೆನ್ಗೆ ತಿರುಗೇಟು ನೀಡಿ 2.5-1.5 ಮೇಲುಗೈ ಸಾಧಿಸಿದರು. ಹೀಗಾಗಿ ಬ್ಲಿಟ್ಜ್ ಟೈಬ್ರೇಕರ್ನತ್ತ ಮುಖ ಮಾಡಬೇಕಾಯಿತು. ಮೊದಲ ಬ್ಲಿಟ್ಜ್ ಸಮನಾದ ಬಳಿಕ ಅನುಭವಿ ಡಿಂಗ್ ಲಿರೆನ್ ಮುಂದಿನ 49 ನಡೆಗಳಲ್ಲಿ ಜಾಣ ಆಟ ಪ್ರದರ್ಶಿಸಿದರು.
ಪ್ರಗ್ನಾನಂದ ಅವರ ಕನಸು ಭಗ್ನಗೊಂಡಿತು. ಆದರೆ ಮೆಲ್ಟ್ ವಾಟರ್ ಕೂಟದ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಚೆಸ್ಪಟು ಎಂಬ ಹೆಗ್ಗಳಿಕೆ ಪ್ರಗ್ನಾನಂದ ಅವರದಾಯಿತು.
ಕ್ವಾರ್ಟರ್ ಫೈನಲ್ನಲ್ಲಿ ಚೀನದ ವೈ ಯಿ ವಿರುದ್ಧ, ಸೆಮಿಫೈನಲ್ನಲ್ಲಿ ಅನೀಶ್ ಗಿರಿ ವಿರುದ್ಧ ಗೆದ್ದು ಬಂದ ಹಿರಿಮೆ ಭಾರತದ ಈ ಚೆಸ್ಪೋರನದ್ದು. ಕೂಟದ ಆರಂಭದಲ್ಲಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ಗೆ ಸೋಲುಣಿಸಿದ ಸಾಧನೆಯೂ ಪ್ರಗ್ನಾನಂದ ಅವರದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ