ಮಿಥಾಲಿ ಕೈಬಿಟ್ಟ ಕೌರ್ ವಿರುದ್ಧ ಸಿಡಿದ ವ್ಯವಸ್ಥಾಪಕಿ
Team Udayavani, Nov 25, 2018, 6:30 AM IST
ನವದೆಹಲಿ: ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುವುದರೊಂದಿಗೆ ಟ್ರೋಫಿ ಗೆಲ್ಲುವ ಮಹತ್ವದ ಕನಸೊಂದು ಭಗ್ನಗೊಂಡಿತ್ತು. ಈ ಬೆನ್ನಲ್ಲೇ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ರನ್ನು ತಂಡದಿಂದ ಹೊರಗಿಟ್ಟ ಕ್ರಮವನ್ನು ಮಿಥಾಲಿ ವ್ಯವಸ್ಥಾಪಕಿ ಅನ್ನಿಶಾ ಗುಪ್ತ ಟೀಕಿಸಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡ ಕ್ರೀಡೆಗಿಂತ ರಾಜಕೀಯಕ್ಕೆ ಹೆಚ್ಚು ಒತ್ತು ನೀಡಿದೆ. ಹರ್ಮನ್ಪ್ರೀತ್ ಶೋಷಕಿ, ಸುಳ್ಳುಗಾರ್ತಿ, ಅಪ್ರಬುದ್ಧೆ ಎಂದು ಟ್ವೀಟರ್ನಲ್ಲಿ ಗುಪ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆನ್ನಲ್ಲೇ ತಾವು ಹಾಕಿದ್ದ ಪ್ರಕಟಣೆಯನ್ನು ಅಳಿಸಿ ಹಾಕಿದ್ದಾರೆ. ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಮಿಥಾಲಿಯನ್ನು ಹೊರಗಿಡಲಾಗಿತ್ತು. ಇದಕ್ಕೆ ನಾಯಕಿ ಹರ್ಮನ್ಪ್ರೀತ್ ಕೌರ್ ಕೊಟ್ಟಿದ್ದ ಕಾರಣ ಹೀಗಿದೆ ” ಇದು ತಂಡದ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರ, ಮಿಥಾಲಿ ಅವರನ್ನು ಕೈಬಿಟ್ಟಿದ್ದು ಪ್ರಶ್ನೆಯಲ್ಲ. ಗೆಲುವಿನ ಕಾಂಬಿನೇಷನ್ ಮುಂದುವರಿಸುವ ಯೋಜನೆಯಾಗಿತ್ತು. ಮಿಥಾಲಿ ಹೊರಗಿರಿಸಿರುವುದಕ್ಕೆ ಯಾವುದೇ ವಿಷಾದವಿಲ್ಲ’ ಎಂದಿದ್ದರು. ಟಿ20 ಸರ್ವಾಧಿಕ ರನ್ ಸಾಧಕರಲ್ಲಿ ಒಬ್ಬರಾದ ಮಿಥಾಲಿಯನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಟ್ವೀಟರ್ನಲ್ಲಿ ಅಭಿಮಾನಿಗಳು ಹರ್ಮನ್ಪ್ರೀತ್ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.