ಗೆಲುವಿನಿಂದ ಹೆಚ್ಚಿದ ಆತ್ಮವಿಶ್ವಾಸ: ರೋಹಿತ್
Team Udayavani, Apr 30, 2018, 6:55 AM IST
ಪುಣೆ: ಬಲಿಷ್ಠ ಚೆನ್ನೈ ವಿರುದ್ಧ 8 ವಿಕೆಟ್ಗಳ ಗೆಲುವಿನಿಂದ ತಂಡದ ಆತ್ಮವಿಶ್ವಾಸವು ಹೆಚ್ಚಿದೆ. ಇದರಿಂದ ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಆಡಲು ಸಾಧ್ಯವಿದೆ ಎಂದು ಮುಂಬೈ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ.
ನಾವಿಂದು ಉತ್ತಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ್ದೇವೆ. ಫೀಲ್ಡಿಂಗ್ ಕೂಡ ಉತ್ತಮವಾಗಿತ್ತು. ಈ ಹಿಂದಿನ ಪಂದ್ಯಗಳನ್ನು ಗಮನಿಸಿದರೆ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ನಾವು 190 ಪ್ಲಸ್ ರನ್ ಗಳಿಸಿದ್ದೆವು. ಹೈದರಾಬಾದ್ ವಿರುದ್ಧ ನಮ್ಮ ಬ್ಯಾಟಿಂಗ್ ಅತ್ಯಂತ ಕಳಪೆಯಾಗಿತ್ತು ಎಂದು ರೋಹಿತ್ ತಿಳಿಸಿದರು.ಗೆಲುವು ನಮಗೆ ಅನಿವಾರ್ಯವಾಗಿತ್ತು. ಹಾಗಾಗಿ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನ ನಡೆಸಿದ್ದೆವು. ಎಲ್ಲವೂ ನಾವು ಎಣಿಸಿದಂತೆ ಸಾಗಿತು ಎಂದು ರೋಹಿತ ಹೇಳಿದರು.
ಪೋಲಾರ್ಡ್ ಅವರನ್ನು ಕೈಬಿಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೋಹತ್ ಅವರನ್ನು ಕೈಬಿಡುವ ನಿರ್ಧಾರ ಕಠಿನವಾಗಿತ್ತು. ಅವರು ಈ ಹಿಂದೆ ನಮ್ಮ ತಂಡದ ಗೆಲುವಿಗೆ ಮಹತ್ತರ ಕೊಡುಗೆ ನೀಡಿದ್ದರು ಎಂದರು. ಮುಂದಿನ ಪಂದ್ಯಗಳನ್ನು ಗಮನಿಸಿದರೆ ಅವರನ್ನು ಪೂರ್ತಿಯಾಗಿ ಕಡೆಗಣಿಸುವ ಹಾಗಿಲ್ಲ. ಅವರೊಬ್ಬ ಇನ್ನೂ ನಮ್ಮ ಮ್ಯಾಚ್ ವಿನ್ನರ್ ಎಂದು ಹೇಳಿದರು.