ಧೋನಿ ಕಾರಿಗೆ ಅಡ್ಡ ಬಂದ ಹುಡುಗಿ!
Team Udayavani, Mar 13, 2017, 11:38 AM IST
ರಾಂಚಿ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಆಡುವುದಕ್ಕಾಗಿ ಪುಣೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹೇಂದ್ರ ಸಿಂಗ್ ಧೋನಿ ಸ್ವತಃ ಎಸ್ಯುವಿ ಕಾರು ಚಲಾಯಿಸಿ ಮನೆಯತ್ತ ಹೊರಟ್ಟಿದ್ದ ವೇಳೆ ಯುವತಿಯೊಬ್ಬಳು ಕಾರಿಗೆ ಅಡ್ಡ ಬಂದು ಸ್ವಲ್ಪದರಲ್ಲೇ ಬಚಾವ್ ಆದ ಘಟನೆ ನಡೆದಿದೆ. ಧೋನಿ ಕೂಡಲೇ ಬ್ರೇಕ್ ಹಾಕಿ ಸಮಯಪ್ರಜ್ಞೆ ತೋರಿದ್ದರಿಂದ ಸಂಭಾವ್ಯ ದುರಂತವೊಂದು ತಪ್ಪಿದೆ.
ಏನಿದು ಘಟನೆ?
ಧೋನಿ ವಿಮಾನ ನಿಲ್ದಾಣ ದಿಂದ ಹೊರಕ್ಕೆ ಬರುತ್ತಿದ್ದಂತೆ ರಾಂಚಿಯ ಅಭಿಮಾನಿಗಳು ಸುತ್ತುವರಿದರು. ಆಟೋಗ್ರಾಫ್, ಸೆಲ್ಫಿಗಾಗಿ ಮುಗಿಬಿದ್ದರು. ಲಗು ಬಗೆಯಿಂದ ನಡೆದ ಧೋನಿ ಅಲ್ಲೇ ಇದ್ದ ಎಸ್ಯುವಿ ಕಾರನ್ನು ಏರಿದ್ದಾರೆ. ಈ ವೇಳೆ ಧೋನಿ ಕಾರಿನ ಪಕ್ಕವೇ ಅಭಿಮಾನಿ ಯುವತಿಯೊಬ್ಬಳು ನಿಂತಿದ್ದಳು. ಧೋನಿ ಜತೆಗೆ ಮಾತನಾಡಲು ಮುಂದುವರಿದಿದ್ದಾಳೆ. ಕೂಡಲೇ ಭದ್ರತಾ ಸಿಬಂದಿಗಳು ಯುವತಿ ಯನ್ನು ತಡೆದಿದ್ದಾರೆ.
ಈ ವೇಳೆ ಯುವತಿ ಕೈಯಲ್ಲಿದ್ದ ಬ್ಯಾಗ್ ಕೆಳಕ್ಕೆ ಬಿದ್ದಿದೆ. ಆಗ ಭದ್ರತಾ ಸಿಬಂದಿಗಳ ಕೈಯಿಂದ ಬಿಡಿಸಿಕೊಂಡು ಹುಡುಗಿ ಕಾರಿಗೆ ಅಡ್ಡ ಬಂದಿದ್ದಾಳೆ. ಇದೇ ಸಮಯಕ್ಕೆ ಸರಿಯಾಗಿ ಧೋನಿ ಕಾರು ಚಲಾಯಿಸಲು ಆರಂಭಿಸಿದ್ದರು. ಅಷ್ಟರಲ್ಲಿ ಈ ಹುಡುಗಿ ಅಡ್ಡಬಂದುದನ್ನು ಕಂಡು ಬ್ರೇಕ್ ಒತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ