ಫೈನಲ್‌ಗೆ ನೆಗೆದ ಮುಂಬೈ ಇಂಡಿಯನ್ಸ್‌: ಐಸಿ ವೋಂಗ್‌ ಹ್ಯಾಟ್ರಿಕ್‌

ಯುಪಿಗೆ 72 ರನ್‌ ಸೋಲು: ರವಿವಾರ ಫೈನಲ್‌

Team Udayavani, Mar 25, 2023, 6:47 AM IST

MUMBAI WPL

ಮುಂಬಯಿ: ಎಲಿಮಿನೇಟರ್‌ ಪಂದ್ಯದಲ್ಲಿ ಯುಪಿ ವಾರಿಯರ್ ತಂಡವನ್ನು 72 ರನ್ನುಗಳಿಂದ ಬಗ್ಗುಬಡಿದ ಮುಂಬೈ ಇಂಡಿಯನ್ಸ್‌ ವನಿತಾ ಪ್ರೀಮಿಯರ್‌ ಲೀಗ್‌ ಫೈನಲ್‌ಗೆ ಲಗ್ಗೆ ಹಾಕಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ.

ಟಾಸ್‌ ಗೆದ್ದ ಯುಪಿ ಬ್ಯಾಟಿಂಗ್‌ ಬಿಟ್ಟುಕೊಟ್ಟು ಕೈ ಸುಟ್ಟುಕೊಂಡಿತು. ಮುಂಬೈ 4 ವಿಕೆಟಿಗೆ 182 ರನ್‌ ರಾಶಿ ಹಾಕಿತು. ಯುಪಿ 17.4 ಓವರ್‌ಗಳಲ್ಲಿ 110ಕ್ಕೆ ಕುಸಿಯಿತು.

ನಥಾಲಿ ಸ್ಕಿವರ್‌ ಬ್ರಂಟ್‌ ಅವರ ಪ್ರಚಂಡ ಆಟ, ಮಧ್ಯಮ ವೇಗಿ ಐಸಿ ವೋಂಗ್‌ ಅವರ ಹ್ಯಾಟ್ರಿಕ್‌ ಮುಂಬೈ ಗೆಲುವಿನ ಆಕರ್ಷಣೆಯನ್ನು ಹೆಚ್ಚಿಸಿತು. ವೋಂಗ್‌ ಸತತ ಎಸೆತಗಳಲ್ಲಿ ಕಿರಣ್‌ ನವಿಗಿರೆ, ಸಿಮ್ರಾನ್‌ ಶೇಖ್‌ ಹಾಗೂ ಸೋಫಿ ಎಕ್ಲ್‌ಸ್ಟೋನ್‌ ವಿಕೆಟ್‌ ಹಾರಿಸಿದರು. ಇದು ಈ ಕೂಟದ ಮೊದಲ ಹ್ಯಾಟ್ರಿಕ್‌ ಆಗಿದೆ.

6 ರನ್‌ ಆಗಿದ್ದಾಗ ಎಕ್ಲ್‌ಸ್ಟೋನ್‌ ಅವರಿಂದ ಜೀವದಾನ ಪಡೆದ ನಥಾಲಿ ಸ್ಕಿವರ್‌ ಬ್ರಂಟ್‌ ಇದರ ಭರಪೂರ ಲಾಭವೆತ್ತಿದರು. ವನ್‌ಡೌನ್‌ನಲ್ಲಿ ಬಂದು ಕೊನೆಯ ತನಕ ಬ್ಯಾಟಿಂಗ್‌ ವಿಸ್ತರಿಸಿ ಅಜೇಯ 72 ರನ್‌ ಬಾರಿಸಿದರು. ಇದು ಕೇವಲ 38 ಎಸೆತಗಳಿಂದ ಬಂತು. ಸಿಡಿಸಿದ್ದು 9 ಬೌಂಡರಿ, 2 ಸಿಕ್ಸರ್‌.

ಯಾಸ್ತಿಕಾ ಭಾಟಿಯಾ (21) ಮತ್ತು ಹ್ಯಾಲಿ ಮ್ಯಾಥ್ಯೂಸ್‌ (26) ಎಚ್ಚರಿಕೆಯ ಆರಂಭ ನೀಡಿದರು. ಆರಂಭಿಕ ವಿಕೆಟಿಗೆ 4.2 ಓವರ್‌ಗಳಿಂದ 31 ರನ್‌ ಒಟ್ಟುಗೂಡಿತು. ಅಂಜಲಿ ಸರ್ವಾಣಿ ಈ ಜೋಡಿಯನ್ನು ಬೇರ್ಪಡಿಸಿ ಯುಪಿಗೆ ಮೊದಲ ಯಶಸ್ಸು ತಂದಿತ್ತರು. ಹ್ಯಾಲಿ ಮ್ಯಾಥ್ಯೂಸ್‌ 10ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡರು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಯಶಸ್ಸು ಕಾಣಲಿಲ್ಲ. 14 ರನ್‌ ಮಾಡಿ ಎಕ್ಲ್‌ಸ್ಟೋನ್‌ ಎಸೆತದಲ್ಲಿ ಬೌಲ್ಡ್‌ ಆದರು.
ಬ್ರಂಟ್‌ ಅವರಿಗೆ ಮೆಲಿ ಕೆರ್‌ ಉತ್ತಮ ಬೆಂಬಲ ನೀಡಿದರು. 6.1 ಓವರ್‌ಗಳಲ್ಲಿ 60 ರನ್‌ ಒಟ್ಟುಗೂಡಿತು. ಕೆರ್‌ ಕೊಡುಗೆ 19 ಎಸೆತಗಳಿಂದ 29 ರನ್‌ (5 ಬೌಂಡರಿ). ಕೊನೆಯಲ್ಲಿ ಪೂಜಾ ವಸ್ತ್ರಾಕರ್‌ ನಾಲ್ಕೇ ಎಸೆತಗಳಿಂದ ಅಜೇಯ 11 ರನ್‌ ಬಾರಿಸಿದರು (1 ಬೌಂಡರಿ, 1 ಸಿಕ್ಸರ್‌).

ಆರಂಭಿಕ ಕುಸಿತ
ಬೃಹತ್‌ ಮೊತ್ತವನ್ನು ಬೆನ್ನಟ್ಟ ಲಾರಂಭಿಸಿದ ಯುಪಿ ಆರಂಭದಲ್ಲೇ ಕುಸಿತಕ್ಕೆ ಒಳಗಾಯಿತು. ಶ್ವೇತಾ ಸೆಹ್ರಾವತ್‌ (1), ನಾಯಕಿ ಅಲಿಸ್ಸಾ ಹೀಲಿ (11), ಟಹ್ಲಿಯಾ ಮೆಕ್‌ಗ್ರಾತ್‌ (7), ಗ್ರೇಸ್‌ ಹ್ಯಾರಿಸ್‌ (14) ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಕಿರಣ್‌ ನವಿಗಿರೆ ಸ್ಫೋಟಕ ಆಟವಾಡಿದರೂ ಪ್ರಯೋ ಜನವಾಗಲಿಲ್ಲ. ಅವರು 27 ಎಸೆತ ಗಳಿಂದ 43 ರನ್‌ ಹೊಡೆದರು (4 ಬೌಂಡರಿ, 3 ಸಿಕ್ಸರ್‌). ಕೊನೆಯಲ್ಲಿ ವೋಂಗ್‌ ಹ್ಯಾಟ್ರಿಕ್‌ ಮ್ಯಾಜಿಕ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌-4 ವಿಕೆಟಿಗೆ 182 (ಬ್ರಂಟ್‌ ಔಟಾಗದೆ 72, ಕೆರ್‌ 29, ಮ್ಯಾಥ್ಯೂಸ್‌ 26, ಯಾಸ್ತಿಕಾ 21, ಎಕ್ಲ್‌ಸ್ಟೋನ್‌ 39ಕ್ಕೆ 2). ಯುಪಿ ವಾರಿಯರ್-17.4 ಓವರ್‌ಗಳಲ್ಲಿ 110 (ನವಿಗಿರೆ 43, ದೀಪ್ತಿ 16, ವೋಂಗ್‌ 15ಕ್ಕೆ 4, ಸೈಕಾ 24ಕ್ಕೆ 2).

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.