ವಿಡಿಯೋ: ಕ್ರಿಕೆಟ್ ಮೈದಾನದಲ್ಲೇ ಸಹ ಆಟಗಾರನಿಗೆ ಹೊಡೆಯಲು ಹೋದ ಮುಶ್ಫೀಕರ್‌ ರಹೀಂ!


Team Udayavani, Dec 15, 2020, 10:37 AM IST

ವಿಡಿಯೋ: ಕ್ರಿಕೆಟ್ ಮೈದಾನದಲ್ಲೇ ಸಹ ಆಟಗಾರನಿಗೆ ಹೊಡೆಯಲು ಹೋದ ಮುಶ್ಫೀಕರ್‌ ರಹೀಂ!

ಢಾಕಾ: ಕ್ರಿಕೆಟ್‌ ಅತಿ ಜನಪ್ರಿಯವಾಗಿರುವ ದೇಶಗಳಲ್ಲಿ ಬಾಂಗ್ಲಾ ಕೂಡಾ ಒಂದು. ಇತ್ತೀಚೆಗಿನ ವರ್ಷಗಳಲ್ಲಿ ಬಾಂಗ್ಲಾ ತಂಡ ನಿಧಾನಕ್ಕೆ ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ. ಅಲ್ಲಿನ ದೇಶೀಯ ಕ್ರಿಕೆಟ್‌ ಗುಣಮಟ್ಟವೂ ಏರುತ್ತಿದೆ. ಹಾಗಾಗಿ ಅಲ್ಲಿ ನಡೆಯುವ ಘಟನೆಗಳೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತವೆ. ಅಂತಹದ್ದೇ ಒಂದು ಚರ್ಚಿತ ಘಟನೆ ಅಲ್ಲಿನ ಬಂಗಬಂಧು ಟಿ20 ಕಪ್‌ ನಲ್ಲಿ ನಡೆದಿದೆ.

ಸೋಮವಾರ ನಡೆದ ಟಿ20 ಪಂದ್ಯದಲ್ಲಿ ಬೆಕ್ಸಿಮ್ಕೊ ಢಾಕಾ ನಾಯಕ ಮುಶ್ಫೀಕರ್‌ ರಹೀಂ, ಸಹ ಆಟಗಾರ ನೇಸಮ್‌ ಅಹ್ಮದ್‌ಗೆ ಬಹುತೇಕ ಹೊಡೆದೇ ಬಿಟ್ಟರು ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನೇಸಮ್‌ ಅಹ್ಮದ್‌ ಭೀತಿಗೊಂಡಿದ್ದು ಎದ್ದು ಕಾಣುತ್ತಿತ್ತು. ಇದನ್ನು ಅಭಿಮಾನಿಗಳಾಗಲೀ, ಸಾಮಾಜಿಕ ತಾಣಿಗರಾಗಲೀ ಸಕಾರಾತ್ಮಕವಾಗಿ ಸ್ವೀಕರಿಸಲಿಲ್ಲ. ಮುಶ್ಫೀಕರ್‌ ರಹೀಂ ತಮ್ಮ ಮುಂಗೋಪದಿಂದಾಗಿ ಹಿಂದೆಯೂ ಬಹಳ ಸುದ್ದಿ ಮಾಡಿದ್ದಾರೆ.

ಇದನ್ನೂ ಓದಿ:ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ರೇಸ್‌: ಪಂತ್‌ಗಿಂತ ಮುಂದಿದ್ದಾರೆ ಅನುಭವಿ ಸಾಹಾ!

ಆಗಿದ್ದೇನು?: ಸೋಮವಾರ ಬೆಕ್ಸಿಮ್ಕೊ ಢಾಕಾ- ಫಾರ್ಚೂನ್‌ ಬಾರಿಶಾಲ್‌ ನಡುವೆ ನಿರ್ಗಮನ ಸುತ್ತಿನ ಪಂದ್ಯ ನಡೆಯುತ್ತಿತ್ತು. ಬಾರಿಶಾಲ್‌ಗೆ ಬಾಕಿ 19 ಎಸೆತದಲ್ಲಿ 45 ರನ್‌ ಬೇಕಿತ್ತು. ಆತಿಫ್ ಹೊಸೇನ್‌ ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದರು. 17ನೇ ಓವರ್‌ ಕೊನೆಯ ಎಸೆತದಲ್ಲಿ ಆತಿಫ್ ಕ್ಯಾಚ್‌ ನೀಡಿದರು. ಇದನ್ನು ಹಿಡಿಯಲು ಮುಶ್ಫೀಕರ್‌ ಧಾವಿಸಿದರು. ಇನ್ನೊಂದು ಕಡೆಯಿಂದ ನೇಸಮ್‌ ಬಂದರು.

ಇನ್ನೇನು ಇಬ್ಬರೂ ಡಿಕ್ಕಿಯಾಗಬೇಕು ಅಷ್ಟರಲ್ಲಿ ಮುಶ್ಫೀಕರ್‌ ಕ್ಯಾಚ್‌ ಹಿಡಿಯಲು ಯಶಸ್ವಿಯಾದರು. ತಾನು ಹಿಡಿಯುತ್ತೇನೆ, ಬಿಟ್ಟು ಬಿಡು ಎಂದು ಹೇಳುತ್ತಿದ್ದರೂ ಕೇಳಿಸಿಕೊಳ್ಳದೇ ಮುನ್ನುಗ್ಗಿದ ಸಹ ಆಟಗಾರನ ಮೇಲೆ ಮುಶ್ಫೀಕರ್‌ಗೆ ಕ್ರೋಧವುಕ್ಕಿತು. ಅದರ ಪರಿಣಾಮ ಇಷ್ಟೆಲ್ಲ ಘಟನೆ. ಅಂತೂ ಬೆಕ್ಸಿಮ್ಕೊ ಪಂದ್ಯ ಗೆಲ್ಲಲು ಯಶಸ್ವಿಯಾಯಿತು.

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.