ವನಿತಾ ವಿಶ್ವ ಬಾಕ್ಸಿಂಗ್: ನಿಖತ್, ಲವ್ಲಿನಾ ಮೇಲೆ ನಿರೀಕ್ಷೆ
Team Udayavani, Mar 16, 2023, 6:20 AM IST
ಹೊಸದಿಲ್ಲಿ: ಬಹು ನಿರೀಕ್ಷೆಯ ವನಿತಾ ವಿಶ್ವ ಬಾಕ್ಸಿಂಗ್ ಪಂದ್ಯಾವಳಿ ಗುರುವಾರ ಹೊಸದಿಲ್ಲಿಯಲ್ಲಿ ಆರಂಭವಾಗಲಿದೆ. ಆತಿಥೇಯ ನಾಡಿನ ಸ್ಟಾರ್ ಬಾಕ್ಸರ್ಗಳಾದ, ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಒಲಿಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್ ಮೇಲೆ ಎಲ್ಲರೂ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದಾರೆ.
ಈ ನಡುವೆ 6 ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಗೈರು ಎದ್ದು ಕಾಣುತ್ತಿದೆ. ಅವ ರಿನ್ನೂ ಎಡ ಮೊಣಕಾಲಿನ ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿಲ್ಲ.
ನೂತನ ತೂಕ ವಿಭಾಗ
ನಿಖತ್ ಜರೀನ್ ಮತ್ತು ಲವ್ಲಿನಾ ಬೊರ್ಗೊಹೇನ್ ಇಬ್ಬರೂ ಇಲ್ಲಿ ನೂತನ ತೂಕ ವಿಭಾಗದಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ಇರುವುದರಿಂದ ಈ ತೂಕ ವಿಭಾಗದ ಸ್ಪರ್ಧೆ ಇವರಿಬ್ಬರಿಗೂ ಮಹತ್ವದ್ದಾಗಿದೆ. ವಿಶ್ವದ ನಂ.4 ಆಟಗಾರ್ತಿ ನಿಖತ್ ಜರೀನ್ 52 ಕೆಜಿಯಿಂದ 50 ಕೆಜಿ ವಿಭಾಗಕ್ಕೆ ಇಳಿದಿದ್ದಾರೆ. ಲವ್ಲಿನಾ 69 ಕೆಜಿ ವೆಲ್ಟರ್ವೆಟ್ನಿಂದ 75 ಕೆಜಿ ಮಿಡ್ಲ್ ವೇಟ್ಗೆ ಸ್ಪರ್ಧೆಯನ್ನು ಬದಲಿಸಿಕೊಂಡಿದ್ದಾರೆ. ಇವರ ಹಿಂದಿನ ತೂಕ ವಿಭಾಗದ ಸ್ಪರ್ಧೆಗಳೆರಡನ್ನೂ ಪ್ಯಾರಿಸ್ ಒಲಿಂಪಿಕ್ಸ್ನಿಂದ ಕೈಬಿಡಲಾಗಿದೆ.
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ನೀತು ಗಂಘಾಸ್ (48 ಕೆಜಿ), ಕಳೆದ ಸಲದ ಕಂಚಿನ ಪದಕ ವಿಜೇತೆ ಮನೀಷಾ ಮೌನ್ (57 ಕೆಜಿ), ಸಾಕ್ಷಿ ಚೌಧರಿ (52 ಕೆಜಿ), ಪ್ರೀತಿ (54 ಕೆಜಿ), ಶಶಿ ಚೋಪ್ರಾ (63 ಕೆಜಿ), ಸನಮಚಾ ಚಾನು (70 ಕೆಜಿ) ಅವರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಸ್ಪರ್ಧೆ ಭಾರತದಲ್ಲೇ ನಡೆಯುವುದಾದರೂ ಕೆಲವು ಬಲಿಷ್ಠ ಬಾಕ್ಸರ್ಗಳ ಸವಾಲನ್ನು ನಮ್ಮವರು ಎದುರಿಸಬೇಕಿದೆ.
ಭಾರತ ವಿಶ್ವ ಚಾಂಪಿಯನ್ಶಿಪ್ ಕೂಟವನ್ನು ಆಯೋಜಿಸುತ್ತಿರುವುದು ಇದು 3ನೇ ಸಲ. ಆದರೆ ಸಾಕಷ್ಟು ವಿವಾದಗಳಿಂದಾಗಿ ಯುಎಸ್ಎ, ಬ್ರಿಟನ್, ಐರ್ಲೆಂಡ್ ತಂಡಗಳು ಈ ಕೂಟದಿಂದ ಹಿಂದೆ ಸರಿದಿವೆ. ರಷ್ಯಾದ ಉಮರ್ ಕ್ರೆಮ್ಲೆವ್ ಅಧ್ಯಕ್ಷತೆಯನ್ನು ಹೊಂದಿರುವ ಅಂತಾರಾಷ್ಟ್ರೀಯ ಬಾಕ್ಸಿಂಗ್ ಮಂಡಳಿ (ಐಬಿಎ), ತಮ್ಮದೇ ಧ್ವಜದ ಅಡಿಯಲ್ಲಿ ರಷ್ಯಾ ಮತ್ತು ಬೆಲರೂಸ್ ಬಾಕ್ಸರ್ಗಳಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದೇ ಇದಕ್ಕೆ ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ
IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್ಗಳ ಜಯ
IPL: ಪ್ಲೇ ಆಫ್ ರೇಸ್ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್ ಬೌಲರ್
RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ
ICC ಚಾಂಪಿಯನ್ಸ್ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್ನ ರಶೀದ್ ಲತೀಫ್
MUST WATCH
ಹೊಸ ಸೇರ್ಪಡೆ
IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ
Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು
Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು
Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ
Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್ಪಾರ್ಕ್ ಸುರಕ್ಷಿತ