ಗುವಾಹಾಟಿ ಟಿ20 ಪಂದ್ಯಕ್ಕೆ ಯಾವುದೇ ಅಡ್ಡಿ ಇಲ್ಲ: ಎಸಿಎ
Team Udayavani, Jan 3, 2020, 10:50 PM IST
ಗುವಾಹಾಟಿ: ಪೌರತ್ವ ಕಾಯ್ದೆ ವಿರೋಧಿ ಗಲಭೆಯಿಂದ ಕರ್ಫ್ಯೂಗೆ ತುತ್ತಾಗಿದ್ದ ಅಸ್ಸಾಮ್ ರಾಜಧಾನಿ ಗುವಾಹಾಟಿಯಲ್ಲಿ ಭಾರತ-ಶ್ರೀಲಂಕಾ ನಡುವಿನ ಟಿ20 ಪಂದ್ಯಕ್ಕೇನೂ ಅಡ್ಡಿ ಇಲ್ಲ, ಇದು ನಿಗದಿತ ವೇಳಾಪಟ್ಟಿಯಂತೆ ರವಿವಾರ ನಡೆಯಲಿದೆ ಎಂಬುದಾಗಿ ಅಸ್ಸಾಮ್ ಕ್ರಿಕೆಟ್ ಮಂಡಳಿಯ (ಎಸಿಎ) ಅಧ್ಯಕ್ಷ ರೊಮೇನ್ ದತ್ತ ಸ್ಪಷ್ಟಪಡಿಸಿದ್ದಾರೆ.
“ಭಾರತ-ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ನಿಗದಿತ ವೇಳಾಪಟ್ಟಿಯಂತೆ ರವಿವಾರ ಇಲ್ಲಿನ ಬರ್ಸಾಪಾರ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಪಂದ್ಯಕ್ಕೆ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಶ್ರೀಲಂಕಾ ತಂಡ ಗುರುವಾರವೇ ಆಗಮಿಸಿದ್ದು, ಪಂದ್ಯಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂಬುದಾಗಿ ರೊಮೇನ್ ದತ್ತ ಅವರು ಹೇಳಿದ್ದಾರೆ.