ಕಶ್ಯಪ್, ಸಮೀರ್ ಕ್ವಾರ್ಟರ್ಫೈನಲಿಗೆ
Team Udayavani, Jul 22, 2017, 10:30 AM IST
ಅನಾಹೇಮ್ (ಅಮೆರಿಕ): ಭಾರತದ ಪಾರುಪಳ್ಳಿ ಕಶ್ಯಪ್, ಸಮೀರ್ ವರ್ಮ ಮತ್ತು ಎಚ್ಎಸ್ ಪ್ರಣಯ್ ಅವರು ಯುಎಸ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಕೂಟದ ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ಫೈನಲ್ ಹಂತಕ್ಕೇರಿದ್ದಾರೆ.
ಪಂದ್ಯದ ನಡುವೆ ಗಾಯದ ಸಮಸ್ಯೆ ಯಿಂದ ಹಂಗೇರಿಯ ಗಾಗ್ಲೆ ಕ್ರಾಝ್ ಪಂದ್ಯ ತ್ಯಜಿಸಿದ್ದರಿಂದ ಕಶ್ಯಪ್ ಮುಂದಿನ ಸುತ್ತಿಗೇರಿದರು. ಕ್ರಾಝ್ ಪಂದ್ಯ ತ್ಯಜಿಸಿದ ವೇಳೆ ಕಶ್ಯಪ್ 21-18, 17-6 ಗೇಮ್ಗಳಿಂದ ಮುನ್ನಡೆಯಲ್ಲಿದ್ದರು. ಆಬಳಿಕ ನಡೆದ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕಶ್ಯಪ್ 16ನೇ ಶ್ರೇಯಾಂಕದ ಶ್ರೀಲಂಕಾದ ನಿಲುಕ ಕರುಣ ರತ್ನೆ ಅವರನ್ನು 21-19, 21-10 ಗೇಮ್ಗಳಿಂದ ಸೋಲಿಸಿ ಕ್ವಾರ್ಟರ್ಫೈನಲಿಗೇರಿದರು. ಅಲ್ಲಿ ಅವರು ತನ್ನ ದೇಶದವರೇ ಆದ ಸಮೀರ್ ವರ್ಮ ಅವರನ್ನು ಎದುರಿಸಲಿದ್ದಾರೆ. ಸಮೀರ್ ದಿನದ ಎರಡು ಪಂದ್ಯಗಳಲ್ಲಿ ಕ್ರೊವೇಶಿಯದ ಚ್ವೊನಿಮಿರ್ ದುರ್ಗಿಜಾಕ್ ಮತ್ತು ಬ್ರಝಿಲ್ನ
ಕೊಹಿಲೊ ಅವರನ್ನು ಸೋಲಿಸಿದ್ದರು.
ಪ್ರಣಯ್ ಕ್ವಾರ್ಟರ್ಫೈನಲಿಗೆ
ದ್ವಿತೀಯ ಶ್ರೇಯಾಂಕದ ಪ್ರಣಯ್ ಅಯರ್ಲ್ಯಾಂಡಿನ ಜೋಶುವ ಮಾಗಿ ಅವರನ್ನು 21-13, 21-17 ಹಾಗೂ ಹಾಲೆಂಡಿನ ಮಾರ್ಕ್ ಕಾಲೊj ಅವರನ್ನು 21-8, 14-21, 21-16 ಗೇಮ್ಗಳಿಂದ ಉರುಳಿಸಿ ಕ್ವಾರ್ಟರ್ಫೈನಲ್ ತಲುಪಿ ದರು. ಅವರು ಕ್ವಾರ್ಟರ್ಫೈನಲ್ನಲ್ಲಿ ಜಪಾನಿನ ಕಾಂತ ಸುನೆಯಾಮ ಅವರನ್ನು ಎದುರಿಸಲಿದ್ದಾರೆ. ಮೂರನೇ ಶ್ರೇಯಾಂಕದ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಅವರು ಇಂಡೋ ನೇಶ್ಯದ ಹೆಂಡ್ರ ಟಾಂಡ್ಯಜ ಮತ್ತು ಆ್ಯಂಡ್ರೊ ಯುನಾಂಟೊ ಅವರನ್ನು 21-16, 21-9 ಗೇಮ್ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ಹಿರೋಕಿ ಒಕಾಮುರ ಮತ್ತು ಮಸಾಯುಕಿ ಒನೊಡೆರ ಅವರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಫ್ರಾನ್ಸಿಸ್ ಅಲ್ವಿನ್ ಮತ್ತು ತರುಣ್ ಕೋನ ಅವರು ಪ್ರಬಲ ಹೋರಾಟ ನಡೆಸಿ 19-21, 21-9, 14-21 ಗೇಮ್ಗಳಿಂದ ಏಳನೇ ಶ್ರೇಯಾಂಕದ ಹಿರೋಕಿ ಒಕಾಮುರ ಮತ್ತು ಮಸಾಯುಕಿ ಒನೊಡೆರ ಅವರಿಗೆ ಶರಣಾದರು. ವನಿತೆ ಯರ ಡಬಲ್ಸ್ನಲ್ಲೂ ಭಾರತದ ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ರಾಮ್ ಅವರು ಏಳನೇ ಶ್ರೇಯಾಂಕದ ಜಪಾನಿನ ಮಾಯು ಮಾಟ್ಸುಮೊಟೊ ಮತ್ತು ವಕಾನಾ ನಾಗಹರ ಅವರಿಗೆ 18-21, 9-21 ಗೇಮ್ಗಳಿಂದ ಶರಣಾದರು.
ಮಿಕ್ಸೆಡ್ ಡಬಲ್ಸ್ನಲ್ಲಿಯೂ ಮನು ಮತ್ತು ಮನೀಷಾ ಅವರು ನಾಲ್ಕನೇ ಶ್ರೇಯಾಂಕದ ಮಲೇಶ್ಯದ ಗೋಹ್ ಸೂನ್ ಹುವಾಟ್ ಮತ್ತು ಶೆವೋನ್ ಜೆಮಿ ಲೈ ವಿರುದ್ಧ 16-21, 12-21 ಗೇಮ್ಗಳಿಂದ ಸೋತು ಹೊರಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ