ಪಾಂಡೆ-ಪಠಾಣ್‌ ಪವರ್‌ ಡೆಲ್ಲಿಯನ್ನು ಕೆಡವಿದ ಕೆಕೆಆರ್‌


Team Udayavani, Apr 18, 2017, 10:20 AM IST

18-SPORTS-3.jpg

ಹೊಸದಿಲ್ಲಿ: ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಆಲ್‌ರೌಂಡರ್‌ ಯೂಸುಫ್ ಪಠಾಣ್‌ ಅವರ ಪವರ್‌ಫ‌ುಲ್‌ ಬ್ಯಾಟಿಂಗ್‌ ಸಾಹಸದಿಂದ ಕೋಲ್ಕತಾ ನೈಟ್‌ರೈಡರ್ ತಂಡ ಡೆಲ್ಲಿಯನ್ನು ಕೋಟ್ಲಾ ಅಂಗಳದಲ್ಲೇ ಮಣಿಸಿ ಮೆರೆದಿದೆ. 5 ಪಂದ್ಯಗಳಿಂದ 4ನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 7 ವಿಕೆಟಿಗೆ 168 ರನ್‌ ಪೇರಿಸಿದರೆ, ಕೆಕೆಆರ್‌ 19.5 ಓವರ್‌ಗಳಲ್ಲಿ 6 ವಿಕೆಟಿಗೆ 169 ರನ್‌ ಬಾರಿಸಿ ಗೆದ್ದುಬಂದಿತು. ಆಗ ಗೆಲುವಿನ ರೂವಾರಿ ಮನೀಷ್‌ ಪಾಂಡೆ 69 ರನ್‌ ಗಳಿಸಿ ಔಟಾಗದೆ ಉಳಿದಿದ್ದರು. ಅವರ ಈ 49 ಎಸೆತಗಳ ಪಂದ್ಯಶ್ರೇಷ್ಠ ಆಟದ ವೇಳೆ 3 ಸಿಕ್ಸರ್‌, 4 ಬೌಂಡರಿ ಸಿಡಿಯಲ್ಪಟ್ಟಿತು. ಇದು ಈ ಪಂದ್ಯಾವಳಿಯಲ್ಲಿ ಪಾಂಡೆ ಬಾರಿಸಿದ 2ನೇ ಅರ್ಧ ಶತಕ. ಇದಕ್ಕೂ ಮುನ್ನ ಮುಂಬೈ ವಿರುದ್ಧ ಅಜೇಯ 81 ರನ್‌ ಮಾಡಿದ್ದರು.

ಯೂಸುಫ್ ಪಠಾಣ್‌ ಎಂದಿನ ಬಿರುಸಿನ ಗತಿಯ ಬ್ಯಾಟಿಂಗ್‌ ನಡೆಸಿ 39 ಎಸೆತಗಳಿಂದ 59 ರನ್‌ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 6 ಫೋರ್‌ ಹಾಗೂ 2 ಸಿಕ್ಸ್‌. 3 ಓವರ್‌ಗಳೊಳಗೆ ಗ್ರ್ಯಾಂಡ್‌ಹೋಮ್‌, ಉತ್ತಪ್ಪ ಮತ್ತು ಗಂಭೀರ್‌ ಅವರನ್ನು 21 ರನ್ನಿಗೆ ಕಳೆದುಕೊಂಡು ಸಂಕಟದಲ್ಲಿದ್ದ ಕೋಲ್ಕತಾ ತಂಡಕ್ಕೆ ಪಾಂಡೆ-ಪಠಾಣ್‌ ರಕ್ಷಣೆ ಒದಗಿಸಿದರು. ಇವರು ಭರ್ತಿ 12 ಓವರ್‌ ನಿಭಾಯಿಸಿ 4ನೇ ವಿಕೆಟಿಗೆ 110 ರನ್‌ ಸಂಗ್ರಹಿಸಿ ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿದರು.

ಅಮಿತ್‌ ಮಿಶ್ರಾ ಪಾಲಾದ ಅಂತಿಮ ಓವರಿನಲ್ಲಿ ಕೆಕೆಆರ್‌ ಜಯಕ್ಕೆ 9 ರನ್‌ ಅಗತ್ಯವಿತ್ತು. ಮೊದಲೆರಡು ಎಸೆತಗಳಲ್ಲಿ ರನ್‌ ಬರಲಿಲ್ಲ. ಜತೆಗೆ ವೋಕ್ಸ್‌ ವಿಕೆಟ್‌ ಕೂಡ ಬಿತ್ತು. 3ನೇ ಎಸೆತದಲ್ಲಿ ಸುನೀಲ್‌ ನಾರಾಯಣ್‌ ಒಂಟಿ ರನ್‌ ತೆಗೆದರು. ಬಳಿಕ ಪಾಂಡೆ ಸಿಕ್ಸರ್‌ ಹಾಗೂ ಅವಳಿ ಓಟಗಳ ಮೂಲಕ ಕೆಕೆಆರ್‌ ಜಯಭೇರಿ ಮೊಳಗಿಸಿದರು. ಡೆಲ್ಲಿ 4ನೇ ಪಂದ್ಯದಲ್ಲಿ 2ನೇ ಸೋಲನುಭವಿಸಿತು.

ಕೋಲ್ಟರ್‌ ನೈಲ್‌ ಕಡಿವಾಣ
ಭರವಸೆಯ ಆರಂಭ ಕಂಡುಕೊಂಡ ಡೆಲ್ಲಿಗೆ ಆಸ್ಟ್ರೇಲಿಯದ ವೇಗಿ ನಥನ್‌ ಕೋಲ್ಟರ್‌ ನೈಲ್‌ ಮತ್ತು ವೆಸ್ಟ್‌ ಇಂಡೀಸಿನ ಮಿಸ್ಟರಿ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಸೇರಿಕೊಂಡು ಕಡಿವಾಣ ಹಾಲುವಲ್ಲಿ ಯಶಸ್ವಿಯಾದರು. ಕೋಲ್ಟರ್‌ ನೈಲ್‌ ಸಾಧನೆ 22 ರನ್ನಿಗೆ 3 ವಿಕೆಟ್‌. ನಾರಾಯಣ್‌ ಒಂದೇ ವಿಕೆಟ್‌ ಉರುಳಿಸಿದರೂ 4 ಓವರ್‌ಗಳಿಂದ ಕೇವಲ 20 ರನ್‌ ನೀಡಿ ಬ್ರೇಕ್‌ ಹಾಕಿದರು.

ಆದರೆ ಉಮೇಶ್‌ ಯಾದವ್‌ ಇಲ್ಲಿ ಭಾರೀ ವೈಫ‌ಲ್ಯ ಅನುಭವಿಸಿದರು. ಅವರ 4 ಓವರ್‌ಗಳಿಂದ 53 ರನ್‌ ಸೋರಿಹೋಯಿತು. ಇದ ರೊಂದಿಗೆ ಐಪಿಎಲ್‌ನಲ್ಲಿ ಅತೀ ಹೆಚ್ಚು 4 ಸಲ 50 ಪ್ಲಸ್‌ ರನ್‌ ಕೊಟ್ಟ 2ನೇ ಬೌಲರ್‌ ಎನಿಸಿದರು. ಅಶೋಕ್‌ ದಿಂಡ ಮೊದಲಿಗ. ಯಾದವ್‌ ಪಾಲಾದ ಪಂದ್ಯದ 17ನೇ ಓವರಿನಲ್ಲಿ ಡೆಲ್ಲಿ 26 ರನ್‌ ದೋಚಿತು.

ಭಾರತದ ಯುವ ಆಟಗಾರರಿಂದಲೇ ಕೂಡಿದ್ದ ಡೆಲ್ಲಿ ಬ್ಯಾಟಿಂಗ್‌ ಸರದಿಯಲ್ಲಿ ಸಂಜು ಸ್ಯಾಮ್ಸನ್‌ ಸರ್ವಾಧಿಕ 39 ರನ್‌ ಬಾರಿಸಿದರು (25 ಎಸೆತ, 7 ಬೌಂಡರಿ). ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಂತ ರಿಷಬ್‌ ಪಂತ್‌ 38 ರನ್‌ ಸೂರೆಗೈದರು. 16 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್‌, 2 ಬೌಂಡರಿ ಸಿಡಿಯಲ್ಪಟ್ಟಿತು. ಶ್ರೇಯಸ್‌ ಅಯ್ಯರ್‌ 26 ರನ್‌, ಕರುಣ್‌ ನಾಯರ್‌ ಮತ್ತು ಆರಂಭಕಾರ ಸ್ಯಾಮ್‌ ಬಿಲ್ಲಿಂಗ್ಸ್‌ ತಲಾ 21 ರನ್‌ ಮಾಡಿ ನಿರ್ಗಮಿಸಿದರು.

ಸ್ಯಾಮ್ಸನ್‌-ಬಿಲ್ಲಿಂಗ್ಸ್‌ 6.1 ಓವರ್‌ಗಳಿಂದ ಮೊದಲ ವಿಕೆಟಿಗೆ 53 ರನ್‌ ಪೇರಿಸಿದರು. ಈ ಜೋಡಿಯನ್ನು ಕೋಲ್ಟರ್‌ ನೈಲ್‌ ಬೇರ್ಪಡಿಸಿದ ಬಳಿಕ ಕೋಲ್ಕತಾ ಬೌಲಿಂಗ್‌ ಲಯ ಕಂಡುಕೊಂಡಿತು.

ಸ್ಕೋರ್‌ ಪಟ್ಟಿ
ಡೆಲ್ಲಿ ಡೇರ್‌ಡೆವಿಲ್ಸ್‌

ಸಂಜು ಸ್ಯಾಮ್ಸನ್‌    ಸಿ ಉತ್ತಪ್ಪ ಬಿ ಯಾದವ್‌    39
ಸ್ಯಾಮ್‌ ಬಿಲ್ಲಿಂಗ್ಸ್‌    ಸಿ ಉತ್ತಪ್ಪ ಬಿ ನೈಲ್‌    21
ಕರುಣ್‌ ನಾಯರ್‌    ಬಿ ನೈಲ್‌    21
ಶ್ರೇಯಸ್‌ ಅಯ್ಯರ್‌    ರನೌಟ್‌    26
ರಿಷಬ್‌ ಪಂತ್‌    ಸಿ ಗಂಭೀರ್‌ ಬಿ ನೈಲ್‌    38
ಏಂಜೆಲೊ ಮ್ಯಾಥ್ಯೂಸ್‌    ಬಿ ನಾರಾಯಣ್‌    1
ಕ್ರಿಸ್‌ ಮಾರಿಸ್‌    ಸಿ ಯಾದವ್‌ ಬಿ ವೋಕ್ಸ್‌    16
ಪ್ಯಾಟ್‌ ಕಮಿನ್ಸ್‌    ಔಟಾಗದೆ    3
ಮೊಹಮ್ಮದ್‌ ಶಮಿ    ಔಟಾಗದೆ    0

ಇತರ        3
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    168
ವಿಕೆಟ್‌ ಪತನ: 1-53, 2-63, 3-106, 4-110, 5-145, 6-153, 7-167.

ಬೌಲಿಂಗ್‌:
ನಥನ್‌ ಕೋಲ್ಟರ್‌ ನೈಲ್‌        4-0-22-3
ಕ್ರಿಸ್‌ ವೋಕ್ಸ್‌        4-0-31-1
ಉಮೇಶ್‌ ಯಾದವ್‌        4-0-53-1
ಸುನೀಲ್‌ ನಾರಾಯಣ್‌        4-0-20-1
ಕುಲದೀಪ್‌ ಯಾದವ್‌        3-0-29-0
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    1-0-12-0

ಕೋಲ್ಕತಾ ನೈಟ್‌ರೈಡರ್

ಗೌತಮ್‌ ಗಂಭೀರ್‌    ಸಿ ಮ್ಯಾಥ್ಯೂಸ್‌ ಬಿ ಜಹೀರ್‌    14
ಗ್ರ್ಯಾಂಡ್‌ಹೋಮ್‌    ಸಿ ಬಿಲ್ಲಿಂಗ್ಸ್‌ ಬಿ ಜಹೀರ್‌    1
ರಾಬಿನ್‌ ಉತ್ತಪ್ಪ    ಸಿ ಪಂತ್‌ ಬಿ ಕಮಿನ್ಸ್‌    4
ಮನೀಷ್‌ ಪಾಂಡೆ    ಔಟಾಗದೆ    69
ಯೂಸುಫ್ ಪಠಾಣ್‌    ಸಿ ಮತ್ತು ಬಿ  ಮಾರಿಸ್‌    59
ಸೂರ್ಯಕುಮಾರ್‌ ಯಾದವ್‌    ಸಿ ಜಹೀರ್‌ ಬಿ ಕಮಿನ್ಸ್‌    7
ಕ್ರಿಸ್‌ ವೋಕ್ಸ್‌    ಸ್ಟಂಪ್ಡ್ ಪಂತ್‌ ಬಿ ಮಿಶ್ರಾ    3
ಸುನೀಲ್‌ ನಾರಾಯಣ್‌    ಔಟಾಗದೆ    1

ಇತರ        11
ಒಟ್ಟು  (19.5 ಓವರ್‌ಗಳಲ್ಲಿ 6 ವಿಕೆಟಿಗೆ)    169
ವಿಕೆಟ್‌ ಪತನ: 1-5, 2-19, 3-21, 4-131, 5-152, 6-160.

ಬೌಲಿಂಗ್‌:
ಜಹೀರ್‌ ಖಾನ್‌        4-0-28-2
ಪ್ಯಾಟ್‌ ಕಮಿನ್ಸ್‌        4-0-39-2
ಕ್ರಿಸ್‌ ಮಾರಿಸ್‌        4-0-30-1
ಅಮಿತ್‌ ಮಿಶ್ರಾ        2.5-0-26-1
ಮೊಹಮ್ಮದ್‌ ಶಮಿ        3-0-28-0
ಏಂಜೆಲೊ ಮ್ಯಾಥ್ಯೂಸ್‌        2-0-15-0

ಪಂದ್ಯಶ್ರೇಷ್ಠ: ಮನೀಷ್‌ ಪಾಂಡೆ

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.