ಬೆಂಗಳೂರಿಗೆ 5ನೇ ಸೋಲು
Team Udayavani, Aug 19, 2017, 12:25 PM IST
ಲಕ್ನೋ: ಜಸ್ವೀರ್ ಸಿಂಗ್ ಚುರುಕಿನ ರೈಡಿಂಗ್ (10 ಅಂಕ) ಹಾಗೂ ಮಂಜಿತ್ ಚಿಲ್ಲಾರ್ (8 ಅಂಕ) ಅಮೋಘ ಕ್ಯಾಚಿಂಗ್ನಿಂದಾಗಿ ಬೆಂಗಳೂರು ಬುಲ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ ರೋಚಕ 30-28 ಅಂತರದ ಜಯ ಸಾಧಿಸಿದೆ. ಸೋಲುಂಡ ಬೆಂಗಳೂರು ಬುಲ್ಸ್ ಕೂಟದಲ್ಲಿ
ಒಟ್ಟಾರೆ 5ನೇ ಮುಖಭಂಗ ಅನುಭವಿಸಿತು.
ಕೊನೆ 2 ನಿಮಿಷದಲ್ಲಿ ಬುಲ್ಸ್ಗೆ ಸೋಲು: ಬಾಬು ಬನಾರಸಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯ ರೋಚಕವಾಗಿತ್ತು. ಕೊನೆ 5 ನಿಮಿಷದವರೆಗೆ ಬೆಂಗಳೂರು ಹಾಗೂ ಜೈಪುರ ಸಮಬಲ ಕಾಯ್ದುಕೊಂಡಿದ್ದವು. ಆದರೆ ಪಂದ್ಯ ಮುಗಿಯಲು ಇನ್ನೇನು 2 ನಿಮಿಷವಷ್ಟೇ ಇದ್ದಾಗ
ಜೈಪುರ ಮಿಂಚಿನ ಆಟ ಪ್ರದರ್ಶಿಸಿತು. ಏಕಾಏಕಿ ದಾಳಿಯಿಂದ ಬುಲ್ಸ್ ಕುಸಿಯಿತು. ಒಟ್ಟಾರೆ 22 ರೈಡಿಂಗ್ ಮಾಡಿದ್ದ ಜಸ್ವೀರ್ 10 ಅಂಕ ತಂದರು. ಟ್ಯಾಕ್ಲಿಂಗ್ ಮೂಲಕ ಮಂಜಿತ್ ಚಿಲ್ಲಾರ್ ಜೈಪುರ ತಂಡಕ್ಕೆ ನೆರವಾದರು.
ನಡೆಯಲಿಲ್ಲ ರೋಹಿತ್ ಜಾದೂ: ಬುಲ್ಸ್ ಪರ ನಾಯಕ ರೋಹಿತ್ ಕುಮಾರ್ (10 ಅಂಕ) ಏಕಾಂಗಿ ಹೋರಾಟ ನಡೆಸಿದರು. ತಂಡವನ್ನು ಗೆಲ್ಲಿಸಲು ಗರಿಷ್ಠ ಪ್ರಯತ್ನ ನಡೆಸಿದರು. ಆದರೆ ರೋಹಿತ್ಗೆ ತಂಡದ ಉಳಿದ ಆಟಗಾರರಿಂದ ಉತ್ತಮ ಬೆಂಬಲ ಸಿಗದ ಕಾರಣ ಪಂದ್ಯ
ಕಳೆದುಕೊಳ್ಳಬೇಕಾಯಿತು.
ಹರ್ಷವರ್ಧನ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು