ಪ್ರೊ ಕಬಡ್ಡಿ: ಜೈಪುರ ಪಿಂಕ್ ಪ್ಯಾಂಥರ್ಸ್, ಬೆಂಗಾಳ್ ವಾರಿಯರ್ಸ್ ಗೆ ಅಮೋಘ ಗೆಲುವು
35-30 ಅಂತರದಲ್ಲಿ ಪಾಟ್ನಾ ವಿರುದ್ಧ ಗೆದ್ದ ಜೈಪುರ ಪಿಂಕ್ ಪ್ಯಾಂಥರ್ಸ್
Team Udayavani, Oct 9, 2022, 9:59 PM IST
ಬೆಂಗಳೂರು: ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರೊಕಬಡ್ಡಿಯ 7ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು, ಪಾಟ್ನಾ ಪೈರೇಟ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸಿದೆ.
ಜೈಪುರವು, ಪಾಟ್ನಾವನ್ನು 35-30 ಅಂಕಗಳ ಅಂತರದಲ್ಲಿ ಸೋಲಿಸಿದೆ. ಜೈಪುರ ಪರ ರೈಡರ್ ಅರ್ಜುನ ದೇಶ್ವಾಲ್ ಅವರು 17 ಅಂಕ ಗಳಿಸಿ ಗೆಲುವಿಗೆ ನೆರವಾದರು. ಇವರನ್ನು ಬಿಟ್ಟರೆ ವಿ. ಅಜಿತ್ 5, ಅಂಕುಶ್ 4, ಸುನೀಲ್ಕುಮಾರ್ 3 ಅಂಕ ಗಳಿಸಿದರು.
ವಿಶೇಷವೆಂದರೆ, ಪಂದ್ಯದ 13ನೇ ನಿಮಿಷದ ವರೆಗೂ ಪಾಟ್ನಾ ಪೈರೇಟ್ಸ್ ತಂಡವೇ ಮುನ್ನಡೆಯಲ್ಲಿತ್ತು. ಆದರೆ, ನಂತರದಲ್ಲಿ ಸಾವರಿಸಿಕೊಂಡು ಕಣಕ್ಕಿಳಿಸಿದ ಜೈಪುರ ತಂಡ ಪಾಟ್ನಾ ಮೇಲೆ ಅಮೋಘವಾಗಿ ದಾಳಿ ನಡೆಸಿತು. ಹಾಗೆಯೇ, 15 ನಿಮಿಷದ ನಂತರ, ಜೈಪುರ ತಂಡ ಮತ್ತೆ ಹಿನ್ನಡೆ ಅನುಭವಿಸಲೇ ಇಲ್ಲ.
ಮೊದಲಾರ್ಧದ ವೇಳೆಗೆ ಜೈಪುರ ಮುನ್ನಡೆಯಲ್ಲೇ ಇತ್ತು. ನಂತರ ಅಂಕಗಳ ಅಂತರವನ್ನು ಹಿಗ್ಗಿಸಿಕೊಳ್ಳುತ್ತಾ ಸಾಗಿತು. ಪಂದ್ಯದ ಕೊನೆಯಲ್ಲಿ ಪಾಟ್ನಾ ಮತ್ತೆ ತಿರುಗಿಬಿದ್ದಿತಾದರೂ, ಜಯ ಗಳಿಸುವಲ್ಲಿ ವಿಫಲವಾಯಿತು.
ಬೆಂಗಾಳ್ಗೆ ಗೆಲುವು
ಶನಿವಾರವಷ್ಟೇ ಹರ್ಯಾಣ ವಿರುದ್ಧ ಸೋತಿದ್ದ ಬೆಂಗಾಳ್ ವಾರಿಯರ್ಸ್ ತಂಡವು, ಭಾನುವಾರ ನಡೆದ 8ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 45-25 ಅಂಕಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಶನಿವಾರದ ಸೋಲಿನ ನೋವನ್ನು ಕೊಂಚ ಕಡಿಮೆ ಮಾಡಿಕೊಂಡಿದೆ. ಬೆಂಗಾಳ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ 11, ದೀಪಕ್ ಹೂಡಾ 11, ಶ್ರೀಕಾಂತ್ ಜಾಧವ್ 7 ಅಂಕ ಗಳಿಸಿ ಗೆಲುವಿಗೆ ನೆರವಾದರು. ಆರಂಭದಲ್ಲೇ ಯಶಸ್ವಿ ರೈಡ್ ಮೂಲಕ ಮುನ್ನಡೆಯಲ್ಲಿದ್ದ ಬೆಂಗಾಳ್ಗೆ 5 ನಿಮಿಷಗಳಾಗುವಷ್ಟರಲ್ಲಿ ತೆಲುಗು ಟೈಟಾನ್ಸ್ ಕೂಡ ಪ್ರತಿಸ್ಪರ್ಧೆ ನೀಡಿತು. ಆದರೆ, ನಂತರದಲ್ಲಿ ತನ್ನ ಅಂಕಗಳನ್ನು ಹಿಗ್ಗಿಸುತ್ತಾ ಸಾಗಿದ ವಾರಿಯರ್ಸ್ ಕಡೆಗೆ 20 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಗುಜರಾತ್-ತಮಿಳ್ ತಲೈವಾಸ್ ಡ್ರಾ
ಶನಿವಾರ ರಾತ್ರಿ ಗುಜರಾತ್ ಜೈಂಟ್ಸ್ ಮತ್ತು ತಮಿಳ್ ತಲೈವಾಸ್ ನಡುವೆ ನಡೆದ 5ನೇ ಪಂದ್ಯವೂ ಡ್ರಾ ಆಯಿತು. ಇತ್ತಂಡಗಳೂ ತಲಾ 31 ಅಂಕ ಗಳಿಸಿದವು. ಗುಜರಾತ್ ಪರ ರಾಕೇಶ್ 13 ಅಂಕ, ತಮಿಳು ತಲೈವಾಸ್ ಪರ ನರೇಂದರ್ 10 ಅಂಕ ಗಳಿಸಿ ಅಗ್ರಸ್ಥಾನಿಗಳಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ