ವನಿತಾ ಕೋಚ್‌ ಹುದ್ದೆಗೆ ಹ್ಯುನ್‌ ರಾಜೀನಾಮೆ

ಸಿಂಧು ವಿಶ್ವ ಪ್ರಶಸ್ತಿ ಗೆಲ್ಲಲು ಪ್ರೇರಣಾ ಶಕ್ತಿ

Team Udayavani, Sep 25, 2019, 5:00 AM IST

r-31

ಹೊಸದಿಲ್ಲಿ: ಭರವಸೆಯ ಶಟ್ಲರ್‌ ಪಿವಿ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್‌ ಪಂದ್ಯಾಟದ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ದಕ್ಷಿಣ ಕೊರಿಯ ಮೂಲದ ಕಿಮ್‌ ಜಿ ಹ್ಯುನ್‌ ಅವರು ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ವನಿತಾ ಸಿಂಗಲ್ಸ್‌ ಕೋಚ್‌ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಹ್ಯುನ್‌ ಅವರ ಹಠಾತ್‌ ನಿರ್ಗಮನದಿಂದಾಗಿ ಸಿಂಧು ಅವರ ಟೋಕಿಯೊ ಒಲಿಂಪಿಕ್ಸ್‌ ಸಿದ್ಧತೆಗೆ ಹೊಡೆತ ಬೀಳುವ ಸಾಧ್ಯತೆಯಿದೆ.

45ರ ಹರೆಯದ ಬುಸಾನ್‌ ಮೂಲದ ಹ್ಯುನ್‌ ಅವರು ತನ್ನ ಪತಿ ರಿಚೀ ಮಾರ್ರ ಅವರನ್ನು ನೋಡಿಕೊಳ್ಳಲು ನ್ಯೂಜಿಲ್ಯಾಂಡಿಗೆ ಧಾವಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಾರ್ರ ಅವರಿಗೆ ನರಕ್ಕೆ ಸಂಬಂಧಿಸಿ ಸ್ಟ್ರೋಕ್‌ ಆಗಿದೆ.

ಈ ವರ್ಷದ ಆರಂಭದಲ್ಲಿ ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಹ್ಯುನ್‌ ಅವರನ್ನು ಕೋಚ್‌ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಹ್ಯುನ್‌ ಅವರ ಸಮರ್ಥ ಮಾರ್ಗದರ್ಶನದಿಂದ ಸಿಂಧು ತನ್ನ ಆಟದಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಂಡರಲ್ಲದೇ ಇನ್ನಷ್ಟು ಬಲಿಷ್ಠರಾಗತೊಡಗಿದರು. ಅವರ ಉಪಸ್ಥಿತಿ, ಸಲಹೆ, ಮಾರ್ಗದರ್ಶನದ ಫ‌ಲವಾಗಿ ಸಿಂಧು ಕಳೆದ ತಿಂಗಳು ಬಾಸೆಲ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

“ಇದು ನಿಜ. ಪತಿಯ ಅನಾರೋಗ್ಯ ದಿಂದಾಗಿ ಕಿಮ್‌ ರಾಜೀನಾಮೆ ನೀಡ ಬೇಕಾಯಿತು. ವಿಶ್ವ ಪಂದ್ಯಾಟದ ವೇಳೆ ಅವರಿಗೆ ಸ್ಟ್ರೋಕ್‌ ಆಗಿತ್ತು. ಹಾಗಾಗಿ ಹ್ಯುನ್‌ ತವರಿಗೆ ಧಾವಿಸಬೇಕಾಯಿತು. ಸ್ಟ್ರೋಕ್‌ನಿಂದ ಚೇತರಿಸಿಕೊಳ್ಳಲು 4ರಿಂದ 6 ತಿಂಗಳು ಬೇಕಾಗಬಹುದು ಎಂದು ಭಾರತ ತಂಡದ ಮುಖ್ಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಹೇಳಿದ್ದಾರೆ.

ಮೂರನೇ ಕೋಚ್‌
ಆಶ್ಚರ್ಯವೆಂಬಂತೆ ಹ್ಯುನ್‌ ಅವರು ಅವಧಿ ಮುಗಿಯದೇ ರಾಜೀನಾಮೆ ನೀಡಿದ ಭಾರತದ ಮೂರನೇ ವಿದೇಶಿ ಕೋಚ್‌ ಆಗಿದ್ದಾರೆ. ಈ ಮೊದಲು ಇಂಡೋನೇಶ್ಯದ ಮುಲೊ ಹ್ಯಾಂಡೊಯೊ ಮತ್ತು ಮಲೇಶ್ಯದ ತಾನ್‌ ಕಿಮ್‌ ಹರ್‌ ಅವರು ರಾಜೀನಾಮೆ ನೀಡಿದ್ದರು.

ಪತ್ರ ಕೈಗೆ ಸಿಕ್ಕಿಲ್ಲ
ಕಿಮ್‌ ಹ್ಯುನ್‌ ಅವರಿಂದ ಇಷ್ಟರವರೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಅಥವಾ ಅಸೋಸಿಯೇಶನ್‌ನ ಆಡಳಿತ ಮಂಡಳಿಗೆ ರಾಜೀನಾಮೆ ಪತ್ರ ಬಂದಿಲ್ಲ ಎಂದು ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಅಜಯ್‌ ಸಿಂಘಾನಿಯ ಹೇಳಿದ್ದಾರೆ. ಕಿಮ್‌ ಅವರ ಪತಿಗೆ ಹುಷಾರಿಲ್ಲವೆಂದು ಗೊತ್ತಿದೆ. ಆದರೆ ಅವರಿಂದ ನಾವು ರಾಜೀನಾಮೆ ಪತ್ರ ಬಂದಿಲ್ಲ. ಎಂದವರು ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ ಇನ್ನು 10 ತಿಂಗಳಲ್ಲಿ ಮತ್ತು ಒಲಿಂಪಿಕ್ಸ್‌ ಅರ್ಹತಾ ಸುತ್ತು ಕೂಡ ಸದ್ಯ ನಡೆಯುತ್ತಿರುವ ಕಾರಣ ನಾವು ತತ್‌ಕ್ಷಣ ಹ್ಯುನ್‌ ಬದಲಿಗೆ ಬೇರೆ ಕೋಚ್‌ ಒಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಹ್ಯುನ್‌ ಅವರಿಗೆ ಸರಿಹೊಂದುವಂತಹ ಕೋಚ್‌ಗಾಗಿ ಹುಡುಕಾಟದಲ್ಲಿದ್ದೇವೆ.
-ಪುಲ್ಲೇಲ ಗೋಪಿಚಂದ್‌, ಭಾರತೀಯ ತಂಡದ ಮುಖ್ಯ ಕೋಚ್‌

ಕಿಮ್‌ ಅವರು ಈ ಹಂತದಲ್ಲಿ ನಿರ್ಗಮಿಸುತ್ತಿರುವುದು ದುರದೃಷ್ಟಕರ. ಅವರ ಪತಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರೊಂದಿಗೆ ನನ್ನ ಕ್ರಿಡಾ ಸಂಬಂಧ ಉತ್ತಮವಾಗಿತ್ತು. ಅವರ ವಿಶೇಷ ಆಸಕ್ತಿ, ಸಲಹೆಯಿಂದ ಉತ್ತಮ ಸಾಧನೆ ಮಾಡುವಂತಾಯಿತು.
-ಪಿವಿ ಸಿಂಧು, ಶಟ್ಲರ್‌

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.