ಐಪಿಎಲ್ ತಂಡಗಳಿಗೆ ಗೆಲುವಿನ ಮಂತ್ರ ಹೇಳಿಕೊಟ್ಟ ರಾಹುಲ್ ದ್ರಾವಿಡ್
Team Udayavani, Nov 29, 2019, 1:11 PM IST
ಬೆಂಗಳೂರು: ಕಲರ್ ಫುಲ್ ಲೀಗ್ ಐಪಿಎಲ್ ಇನ್ನೇನು ಹತ್ತಿರ ಬಂತು. ಫ್ರಾಂಚೈಸಿಗಳು ತಂಡ ಕಟ್ಟುವ ಕೆಲಸದಲ್ಲಿ ಬ್ಯುಸಿಯಾಗಿವೆ. ಕನ್ನಡಿಗ ರಾಹುಲ್ ದ್ರಾವಿಡ್ ಐಪಿಎಲ್ ನ ತಂಡಗಳಿಗೆ ಗೆಲುವಿನ ಮಂತ್ರ ಹೇಳಿಕೊಟ್ಟಿದ್ದಾರೆ.
ಐಪಿಎಲ್ ತಂಡಗಳು ತಂಡಕ್ಕೆ ತರಬೇತುದಾರರನ್ನು (ಕೋಚ್) ಆಯ್ಕೆ ಮಾಡುವಾಗ ಭಾರತೀಯರಿಗೆ ಅವಕಾಶ ನೀಡಬೇಕು. ಭಾರತೀಯರಿಗೆ ಸ್ಥಳಿಯ ಪ್ರತಿಭೆಗಳ ಬಗ್ಗೆ ಹೆಚ್ಚು ಪರಿಚಯವಿರುತ್ತದೆ ಎಂದು ದ್ರಾವಿಡ್ ಹೇಳಿದ್ದಾರೆ.
ಮುಖ್ಯ ಕೋಚ್ ಅಲ್ಲದಿದ್ದರೆ ಸಹಾಯಕ ಕೋಚ್ ಆದರೂ ಭಾರತೀಯರಿರಬೇಕು. ಕೂಟದಲ್ಲಿ ಹೆಚ್ಚು ಭಾರತೀಯ ಆಟಗಾರರು ಆಡುವುರಿಂದ ಸ್ಥಳೀಯ ಕೋಚ್ ಗಳು ಈ ಆಟಗಾರರ ಕೌಶಲದ ಬಗ್ಗೆ ತಿಳಿದಿರುತ್ತಾರೆ. ಅವರಿಗೆ ಅವಕಾಶ ಕೊಡಬೇಕಿದೆ ಎಂದು ‘ವಾಲ್’ ಅಭಿಪ್ರಾಯಪಟ್ಟಿದ್ದಾರೆ.