ಕಾಮನ್ವೆಲ್ತ್ ಗೇಮ್ಸ್ ಕ್ರಿಕೆಟ್: ರಾಣಾ, ತನಿಯಾ, ಹರ್ಲೀನ್ ಆಗಮನ
Team Udayavani, Jul 12, 2022, 11:55 PM IST
ಹೊಸದಿಲ್ಲಿ: ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ವನಿತಾ ಕ್ರಿಕೆಟ್ ಪ್ರಮುಖ ಆಕರ್ಷಣೆಯಾಗಿದ್ದು, ಭಾರತದ 15 ಸದಸ್ಯರ ತಂಡವನ್ನು ಅಂತಿಮಗೊಳಿಸಲಾಗಿದೆ.
ಹರ್ಮನ್ಪ್ರೀತ್ ಕೌರ್ ನೇತೃತ್ವದ ಈ ತಂಡಕ್ಕೆ ಆಲ್ರೌಂಡರ್ ಸ್ನೇಹ್ ರಾಣಾ, ಮಧ್ಯಮ ಕ್ರಮಾಂಕದ ಬ್ಯಾಟರ್ ಹರ್ಲೀನ್ ದೇವಲ್ ಮತ್ತು ವಿಕೆಟ್ ಕೀಪರ್ ತನಿಯಾ ಭಾಟಿಯ ಅವರನ್ನು ಸೇರಿಸಿಕೊಳ್ಳಲಾಗಿದೆ.
ತಂಡದಿಂದ ಬೇರ್ಪಟ್ಟವರೆಂದರೆ ಸಿಮ್ರಾನ್ ಬಹಾದೂರ್, ರಿಚಾ ಘೋಷ್ ಮತ್ತು ಪೂನಂ ಯಾದವ್. ಈ ಮೂವರು ಇತ್ತೀಚಿನ ಶ್ರೀಲಂಕಾ ಎದುರಿನ ಸರಣಿಯ ವೇಳೆ ಭಾರತ ತಂಡದಲ್ಲಿದ್ದರು.
ಸ್ನೇಹ್ ರಾಣಾಗೆ ಶ್ರೀಲಂಕಾ ಎದುರಿನ 3 ಪಂದ್ಯಗಳ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿತ್ತು. ಹರ್ಲೀನ್ ದೇವಲ್ ಏಕದಿನ ಸರಣಿಯಲ್ಲಷ್ಟೇ ಆಡಿದ್ದರು. ತನಿಯಾ ಭಾಟಿಯ 2020ರ ಮಾರ್ಚ್ನಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ತನಿಯಾ ಸೇರ್ಪಡೆಯಿಂದ ಇಬ್ಬರು ವಿಕೆಟ್ ಕೀಪರ್ಗಳಿಗೆ ಅವಕಾಶ ಲಭಿಸಿದಂತಾಯಿತು. ಮತ್ತೋರ್ವ ಕೀಪರ್ ಯಾಸ್ತಿಕಾ ಭಾಟಿಯ.
8 ತಂಡಗಳ ಸ್ಪರ್ಧೆ
ಗೇಮ್ಸ್ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಉಳಿದ ತಂಡಗಳೆಂದರೆ ಆಸ್ಟ್ರೇಲಿಯ, ಪಾಕಿಸ್ಥಾನ ಮತ್ತು ಬಾರ್ಬಡಾಸ್. “ಬಿ’ ವಿಭಾಗದಲ್ಲಿ ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಪ್ರತಿಯೊಂದು ವಿಭಾಗದ ಅಗ್ರ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಭಾರತದ ಮೊದಲ ಎದುರಾಳಿ ಆಸ್ಟ್ರೇಲಿಯ (ಜು. 29). ಬಳಿಕ ಪಾಕಿಸ್ಥಾನ (ಜು. 31) ಮತ್ತು ಬಾರ್ಬಡಾಸ್ (ಆ. 3) ವಿರುದ್ಧ ಆಡಲಿದೆ. ಎಲ್ಲ ಪಂದ್ಯಗಳು ಎಜ್ಬಾಸ್ಟನ್ನಲ್ಲಿ ನಡೆಯಲಿವೆ.
ಭಾರತ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮ, ಎಸ್. ಮೇಘನಾ, ತನಿಯಾ ಭಾಟಿಯ, ಯಾಸ್ತಿಕಾ ಭಾಟಿಯ, ದೀಪ್ತಿ ಶರ್ಮ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಹರ್ಲೀನ್ ದೇವಲ್, ಸ್ನೇಹ್ ರಾಣಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ