ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌: ರಿಷಭ್‌ ಪಂತ್‌ ಶತಕ ವೈಭವ


Team Udayavani, Jul 1, 2022, 11:35 PM IST

ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌: ರಿಷಭ್‌ ಪಂತ್‌ ಶತಕ ವೈಭವ

ಬರ್ಮಿಂಗ್‌ಹ್ಯಾಮ್‌: ರಿಷಭ್‌ ಪಂತ್‌ ಅವರ ಅಮೋಘ ಶತಕ ಸಾಹಸದಿಂದ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ಕುಸಿತದಿಂದ ಚೇತರಿಸಿಕೊಂಡಿದೆ.

ಇಂಗ್ಲೆಂಡಿನ ಯಾವುದೇ ದಾಳಿಗೂ ಬಗ್ಗದ ಪಂತ್‌ 89 ಎಸೆತಗಳಿಂದ ತಮ್ಮ 5ನೇ ಟೆಸ್ಟ್‌ ಶತಕ ಪೂರ್ತಿಗೊಳಿಸಿದರು. ಇವರಿಗೆ ರವೀಂದ್ರ ಜಡೇಜ ಅತ್ಯುತ್ತಮ ಬೆಂಬಲವಿತ್ತರು.

ಒಂದು ಹಂತದಲ್ಲಿ 98ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತ ಮತ್ತೆ ಹಾನಿಗೊಳಗಾಗದೆ 250 ರನ್‌ ಗಳಿಸಿ ಅಂತಿಮ ಅವಧಿಯ ಬ್ಯಾಟಿಂಗ್‌ ಮುಂದುವರಿಸುತ್ತಿದೆ.

ಪಂತ್‌ 102 ರನ್‌ (15 ಬೌಂಡರಿ, 1 ಸಿಕ್ಸರ್‌), ಜಡೇಜ 50 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇವರಿಬ್ಬರು ಸೇರಿಕೊಂಡು 183 ಎಸೆತಗಳಿಂದ 6ನೇ ವಿಕೆಟಿಗೆ 152 ರನ್‌ ಪೇರಿಸಿದರು. ಇದು ಪಂತ್‌ ಅವರ 5ನೇ ಶತಕ. ವಿದೇಶದಲ್ಲಿ ದಾಖಲಾದ 4ನೇ ಸೆಂಚುರಿ.

ಆ್ಯಂಡಿ ಆರಂಭಿಕ ಆಘಾತ
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಆರಂಭಿಕ ಆಘಾತವಿಕ್ಕಿದರು. ಓಪನರ್‌ಗಳಾದ ಶುಭಮನ್‌ ಗಿಲ್‌ (17) ಮತ್ತು ಚೇತೇಶ್ವರ್‌ ಪೂಜಾರ (13) ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಆಗ ಸ್ಕೋರ್‌ ಕೇವಲ 46 ರನ್‌ ಆಗಿತ್ತು. ಮಳೆಯಿಂದಾಗಿ ಬೇಗನೇ ಲಂಚ್‌ ಬ್ರೇಕ್‌ ಪಡೆದಾಗ ಈ ಮೊತ್ತ 53ಕ್ಕೆ ಏರಿತ್ತು.
ಗಿಲ್‌ ಆಕ್ರಮಣಕಾರಿ ಮೂಡ್‌ನ‌ಲ್ಲಿದ್ದರು. 24 ಎಸೆತ ಎದುರಿಸಿ 4 ಬೌಂಡರಿ ಸಿಡಿಸಿದರು.

ಪೂಜಾರ ಕೌಂಟಿಯಲ್ಲಿ ಮಿಂಚಿದರೂ ಇಲ್ಲಿ ವಿಫ‌ಲರಾದರು. ಈ ಸರಣಿಯ ಮೊದಲ ಇನ್ನಿಂಗ್ಸ್‌ನಲ್ಲಿ ಇವರ ಗಳಿಕೆ ಹೀಗಿದೆ: 4, 9, 1, 4 ಮತ್ತು ಇದೀಗ 13 ರನ್‌. ಇದಕ್ಕೆ 46 ಎಸೆತ ತೆಗೆದುಕೊಂಡರು (2 ಬೌಂಡರಿ). ಆ್ಯಂಡರ್ಸನ್‌ಗೆ ಅತ್ಯಧಿಕ 12 ಸಲ ವಿಕೆಟ್‌ ಒಪ್ಪಿಸಿದ “ದಾಖಲೆ’ಯನ್ನೂ ಸ್ಥಾಪಿಸಿದರು.

ಭೋಜನ ವಿರಾಮದ ಬಳಿಕ ಇಂಗ್ಲೆಂಡ್‌ ಬೌಲಿಂಗ್‌ ಇನ್ನಷ್ಟು ಹರಿತಗೊಂಡಿತು. ಇಲ್ಲಿ ಮ್ಯಾಥ್ಯೂ ಪಾಟ್ಸ್‌ ಅಪಾಯಕಾರಿಯಾಗಿ ಗೋಚರಿಸಿದರು. ನಿಲ್ಲುವ ಸೂಚನೆ ನೀಡಿದ್ದ ಹನುಮ ವಿಹಾರಿ 20 ರನ್‌ ಮಾಡಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. 53 ಎಸೆತ ನಿಭಾಯಿಸಿದ ಅವರು ಒಂದೇ ಬೌಂಡರಿಗೆ ಸಮಾಧಾನಪಟ್ಟರು.

ವಿರಾಟ್‌ ಕೊಹ್ಲಿ ಅವರದು ಮತ್ತೊಂದು ಫ್ಲಾಪ್‌ ಶೋ. ಕೇವಲ 11 ರನ್‌ ಮಾಡಿ ಪಾಟ್ಸ್‌ ಎಸೆತದಲ್ಲಿ ಬೌಲ್ಡ್‌ ಆಗಿ ವಾಪಸಾದರು. ಶ್ರೇಯಸ್‌ ಅಯ್ಯರ್‌ ಬಿರುಸಿನ ಲಯದಲ್ಲಿದ್ದರೂ ಇನ್ನಿಂಗ್ಸ್‌ ಬೆಳೆಸುವಲ್ಲಿ ವಿಫ‌ಲರಾದರು. ಅವರ ಗಳಿಕೆ 11 ಎಸೆತಗಳಿಂದ 15 ರನ್‌ (3 ಬೌಂಡರಿ). ಈ ವಿಕೆಟ್‌ ಆ್ಯಂಡರ್ಸನ್‌ ಪಾಲಾಯಿತು. ನೂರರೊಳಗೆ ಭಾರತದ ಅರ್ಧದಷ್ಟು ಮಂದಿಯ ಆಟ ಮುಗಿಯಿತು. ಮುಂದಿನದು ಪಂತ್‌-ಜಡೇಜ ಜೋಡಿಯ ವೈಭವ.

ಟಾಪ್ ನ್ಯೂಸ್

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.