ರೋಹಿತ್ ಮತ್ತೆ ಗಾಯಾಳು: ದೇವಧರ್ನಿಂದ ಹೊರಕ್ಕೆ
Team Udayavani, Mar 25, 2017, 10:54 AM IST
ನವದೆಹಲಿ: ಗಾಯದ ಸಮಸ್ಯೆ ರೋಹಿತ್ ಶರ್ಮ ಅವರನ್ನು ಬಿಟ್ಟು ಹೋಗುವಂತೆ ಕಾಣಿಸುತ್ತಿಲ್ಲ. ಮಂಡಿನೋವಿಗೆ ಸಿಲುಕಿರುವ ಅವರೀಗ ದೇವಧರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಿಂದಲೂ ಹೊರಬಿದ್ದಿದ್ದಾರೆ.
ಕೇದಾರ್ ಜಾಧವ್ ಕೂಡ ಇವರ ಹಾದಿಯನ್ನೇ ಹಿಡಿದಿದ್ದಾರೆ. ಒಮ್ಮೆ ಗಾಯದ ಸಮಸ್ಯೆಯಿಂದ ಮುಕ್ತರಾದಂತೆ ಕಂಡುಬಂದುದರಿಂದ ರೋಹಿತ್ ಶರ್ಮ ಅವರನ್ನು ದೇವಧರ್ ಟ್ರೋಫಿ ಪಂದ್ಯಾವಳಿಗಾಗಿ ಇಂಡಿಯಾ ಬ್ಲೂ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು.