WPL ; ರೋಚಕ ಗೆಲುವಿನ ಮೂಲಕ ಫೈನಲ್ ಗೆ ಲಗ್ಗೆ ಇಟ್ಟ ಆರ್ ಸಿಬಿ

ರವಿವಾರದ ಪ್ರಶಸ್ತಿ ಕಾಳಗ: ಡೆಲ್ಲಿ-ಆರ್‌ಸಿಬಿ ಮುಖಾಮುಖಿ

Team Udayavani, Mar 15, 2024, 11:09 PM IST

1-wwewqewq

ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿಗೆ ಫೈನಲ್‌ ಲಕ್‌ ಒಲಿದಿದೆ. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು 5 ರನ್ನುಗಳಿಂದ ರೋಚಕವಾಗಿ ಮಣಿಸಿದ ಮಂಧನಾ ಪಡೆ ವನಿತಾ ಪ್ರೀಮಿಯರ್‌ ಲೀಗ್‌ ಪ್ರಶಸ್ತಿ ಸುತ್ತಿಗೆ ನೆಗೆದಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಡೆಲ್ಲಿ-ಆರ್‌ಸಿಬಿ ಮುಖಾಮುಖಿ ಆಗಲಿವೆ.

ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 6 ವಿಕೆಟಿಗೆ 135 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಮುಂಬೈ 6 ವಿಕೆಟಿಗೆ 130 ರನ್‌ ಗಳಿಸಿ ಶರಣಾಯಿತು.

ಮತ್ತೆ ಪೆರ್ರಿ ರಕ್ಷಣೆ
ಬ್ಯಾಟಿಂಗ್‌ ಆಯ್ದುಕೊಂಡ ಆರ್‌ಸಿಬಿ ನಿರ್ಧಾರ ಫ‌ಲ ಕೊಡಲಿಲ್ಲ. ಪವರ್‌ ಪ್ಲೇ ಮುಗಿಯುವುದರೊಳಗೆ 3 ವಿಕೆಟ್‌ ಉರುಳಿತು. ಸೋಫಿ ಡಿವೈನ್‌ (10), ನಾಯಕಿ ಸ್ಮತಿ ಮಂಧನಾ (10) ಮತ್ತು ದಿಶಾ ಕಸಟ್‌ (0) ಪೆವಿಲಿಯನ್‌ ಸೇರಿಕೊಂಡರು. ಆರ್‌ಸಿಬಿಯ ಸವಾಲಿನ ಮೊತ್ತದ ಯೋಜನೆ ಆಗಲೇ ಕೈಕೊಟ್ಟಿತು.

ಇಂಥ ಹತಾಶ ಸನ್ನಿವೇಶದಲ್ಲಿ ಮತ್ತೆ ಆರ್‌ಸಿಬಿ ಪಾಲಿಗೆ ಆಪತಾºಂಧವರಾಗಿ ಪರಿಣಮಿಸಿದವರು ಎಲ್ಲಿಸ್‌ ಪೆರ್ರಿ. ವನ್‌ಡೌನ್‌ನಲ್ಲಿ ಕ್ರೀಸ್‌ ಇಳಿದ ಆಸ್ಟ್ರೇಲಿಯದ ಸವ್ಯಸಾಚಿ ಮುಂಬೈ ಬೌಲಿಂಗ್‌ ಆಕ್ರಮಣವನ್ನು ದಿಟ್ಟ ರೀತಿಯಲ್ಲಿ ಎದುರಿಸಿ ರನ್‌ ಪೇರಿಸುತ್ತ ಹೋದರು. ಈ ನಡುವೆ ರಿಚಾ ಘೋಷ್‌ ವಿಕೆಟ್‌ ಉರುಳಿದಾಗ ಆರ್‌ಸಿಬಿ ಮತ್ತೆ ಆತಂಕಕ್ಕೆ ಸಿಲುಕಿತು. ರಿಚಾ ಗಳಿಕೆ ಕೇವಲ 14 ರನ್‌. ಆಗ ಸ್ಕೋರ್‌ ಕೇವಲ 49 ರನ್‌ ಆಗಿತ್ತು. 10ನೇ ಓವರ್‌ ಜಾರಿಯಲ್ಲಿತ್ತು.

ಎಲ್ಲಿಸ್‌ ಪೆರ್ರಿ 19ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ನಿಂತರು. ಡೆತ್‌ ಓವರ್‌ಗಳಲ್ಲಿ ಜಬರ್ದಸ್ತ್ ಆಟವಾಡಿದರು. ಭರ್ತಿ 50 ಎಸೆತ ಎದುರಿಸಿದ ಅವರು 8 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 66 ರನ್‌ ಬಾರಿಸಿದರು. ಒಂದೆಡೆ ಪೆರ್ರಿ ಬೀಸುತ್ತಿದ್ದಾಗ ಇನ್ನೊಂದೆಡೆ ಸೋಫಿ ಮೊಲಿನಾಕ್ಸ್‌ (11) ವಿಕೆಟ್‌ ಬಿತ್ತು. ಜಾರ್ಜಿಯಾ ವೇರ್‌ಹ್ಯಾಮ್‌ 10 ಎಸೆತ ಎದುರಿಸಿ ಅಜೇಯ 18 ರನ್‌ ಮಾಡಿದರು (1 ಬೌಂಡರಿ, 1 ಸಿಕ್ಸರ್‌). 12 ಓವರ್‌ಗಳಲ್ಲಿ 4ಕ್ಕೆ 57 ರನ್‌ ಮಾಡಿ ಕುಂಟುತ್ತಿದ್ದ ಆರ್‌ಸಿಬಿ, ಕೊನೆಯ 8 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 78 ರನ್‌ ಪೇರಿಸಲು ಯಶಸ್ವಿಯಾಯಿತು. ಮುಂಬೈ ಪರ ಹ್ಯಾಲಿ ಮ್ಯಾಥ್ಯೂಸ್‌, ನ್ಯಾಟ್‌ ಸ್ಕಿವರ್‌ ಬ್ರಂಟ್‌, ಸೈಕಾ ಇಶಾಖ್‌ ತಲಾ 2 ವಿಕೆಟ್‌ ಉರುಳಿಸಿದರು.

ಮುಂಬೈ ಚೇಸಿಂಗ್‌
ಚೇಸಿಂಗ್‌ಗೆ ಇಳಿದ ಮುಂಬೈ ಕೂಡ ನಿಧಾನ ಗತಿಯ ಆಟವಾಡಿತು. 50 ರನ್ನಿಗೆ ಭರ್ತಿ 8 ಓವರ್‌ ತೆಗೆದುಕೊಂಡಿತು. ಆಗ ಆರಂಭಿಕರಾದ ಹ್ಯಾಲಿ ಮ್ಯಾಥ್ಯೂಸ್‌ (15) ಮತ್ತು ಯಾಸ್ತಿಕಾ ಭಾಟಿಯ (19) ವಿಕೆಟ್‌ ಉರುಳಿತ್ತು. ಅರ್ಧ ಹಾದಿ ಕ್ರಮಿಸುವಾಗ ಮುಂಬೈ 2ಕ್ಕೆ 60 ರನ್‌ ಮಾಡಿತ್ತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತು ನ್ಯಾಟ್‌ ಸ್ಕಿವರ್‌ ಬ್ರಂಟ್‌ ಕ್ರೀಸ್‌ನಲ್ಲಿದ್ದರು. ಕೊನೆಯ 5 ಓವರ್‌ಗಳಲ್ಲಿ 43 ರನ್‌ ಗಳಿಸುವ ಗುರಿ ಮುಂಬೈ ಮುಂದಿತ್ತು.
ಗೆಲುವಿಗೆ 16 ರನ್‌ ಆಗತ್ಯವಿದ್ದಾಗ ಕೌರ್‌ ವಿಕೆಟ್‌ ಬಿತ್ತು. ನಾಯಕಿಯ ಗಳಿಕೆ 30 ಎಸೆತಗಳಿಂದ 33 ರನ್‌ (4 ಬೌಂಡರಿ). ಕೊನೆಯ ಓವರ್‌ನಲ್ಲಿ 12 ರನ್‌ ಅಗತ್ಯವಿತ್ತು.

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.