ಆ್ಯಶಸ್ನಲ್ಲಿ ಸ್ಪಾಟ್ ಫಿಕ್ಸಿಂಗ್ ? ಭಾರತೀಯ ಬುಕ್ಕಿ ಶಾಮೀಲು ?
Team Udayavani, Dec 14, 2017, 11:20 AM IST
ಪರ್ತ್, ಆಸ್ಟ್ರೇಲಿಯ : ಇಂಗ್ಲಂಡ್ – ಆಸ್ಟ್ರೇಲಿಯ ನಡುವಿನ 3ನೇ ಪರ್ತ್ ಟೆಸ್ಟ್ಗೆ ಇದೀಗ ಸ್ಪಾಟ್ ಫಿಕ್ಸಿಂಗ್ ಕಳಂಕ ತಟ್ಟಿದೆ. ಈ ಹಗರಣದಲ್ಲಿ ಓರ್ವ ಭಾರತೀಯ ಬುಕ್ಕಿ ಶಾಮೀಲಾಗಿರುವುದನ್ನು ಶಂಕಿಸಲಾಗಿದೆ.
ಬ್ರಿಟಿಷ್ ಸುದ್ದಿ ಪತ್ರಿಕೆಯೊಂದು ಈ ಗಂಭೀರ ಹಾಗೂ ಕಳವಳಕಾರಿ ವಿಷಯದ ಬಗ್ಗೆ ಬಾಂಬ್ ಸಿಡಿಸಿದೆ. ಉಭಯ ದೇಶಗಳ ಕ್ರಿಕೆಟ್ ಮುಖ್ಯಸ್ಥರು ಈ ಬೆಳವಣಿಗೆಯ ಬಗ್ಗೆ ಖೇದ, ಆಘಾತ, ಆಶ್ಚರ್ಯ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ “ಮಿಸ್ಟರ್ ಬಿಗ್’ ಸೇರಿದಂತೆ ಇಬ್ಬರು ಬುಕ್ಕಿಗಳು ಪರ್ತ್ ಟೆಸ್ಟ್ನ ಯಾವೆಲ್ಲ ಸೆಶನ್ಸ್ನ ಆಟಗಳು ಯಾವ ರೀತಿಯಲ್ಲಿ ಇರುತ್ತವೆ ಎಂಬ ಮಾಹಿತಿಗಳನ್ನು ಮಾರುವ ಕೊಡುಗೆಯನ್ನು ಬೆಟ್ಟಿಗರಿಗೆ ನೀಡುವ ಲಾಲಸೆ, ಆಮಿಷವನ್ನು ತೋರಿರುವುದಾಗಿ ವರದಿಯಾಗಿದೆ. ಇದರಿಂದಾಗಿ ಭಾರಿ ಪ್ರಮಾಣದ ಬೆಟ್ಟಿಂಗ್ ನಡೆದಿರುವುದಾಗಿ ವರದಿಯಾಗಿದೆ.
ವಿಶ್ವ ಕಪ್ ವಿಜೇತ ತಂಡದ ಓರ್ವ ಆಲ್ ರೌಂಡರ್ ಸಹಿತವಾಗಿ ಮಾಜಿ ಮತ್ತು ಹಾಲಿ ಅಂತಾರಾಷ್ಟ್ರೀಯ ಆಟಗಾರರು ಈ “ಸ್ಪಾಟ್ ಫಿಕ್ಸಿಂಗ್’ ಹಗರಣದಲ್ಲಿ ಕೆಲಸ ಮಾಡಿರುವುದಾಗಿ ಇಬ್ಬರಲ್ಲಿ ಒಬ್ಬ ಬುಕ್ಕಿ ಹೇಳಿಕೊಂಡಿದ್ದಾನೆ.
ಆಸ್ಟ್ರೇಲಿಯನ್ ಕ್ರಿಕೆಟ್ನಲ್ಲಿ “ಸೈಲೆಂಟ್ ಮ್ಯಾನ್’ ಎಂದೇ ಖ್ಯಾತನಾಗಿರುವ “ಫಿಕ್ಸರ್’ ಜತೆಗೆ ತಾವು ಸಂಪರ್ಕದಲ್ಲಿರುವುದಾಗಿ ಆ ಬುಕ್ಕಿ ಹೇಳಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಆದರೆ ಈ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಯಾವುದೇ ಆಸೀಸ್ ಮತ್ತು ಇಂಗ್ಲಂಡ್ ಕ್ರಿಕೆಟಿಗರು ಶಾಮೀಲಾಗಿರುವುದನ್ನು ಹೆಸರಿಸಲಾಗಿಲ್ಲ.
ಒಂದು ಓವರ್ನಲ್ಲಿ ಖಚಿತವಾಗಿ ಎಷ್ಟು ರನ್ ಹೊಡೆಯಲ್ಪಡುತ್ತದೆ ಮುಂತಾದ ಅನೂಹ್ಯ ವಿಷಯಗಳ ಬಗ್ಗೆಯೂ ಸುಮಾರು 1,40,000 ಪೌಂಡ್ (1,87,000 ಡಾಲರ್ ಅಥವಾ 1,58,000 ಯೂರೋ) ಪ್ರಮಾಣದಲ್ಲಿ ಮಾರುಕಟ್ಟೆ ಸ್ಪಾಟ್ ಫಿಕ್ಸ್ ಆಗಿರುತ್ತದೆ ಎಂದು ರಹಸ್ಯ ಮಾಹಿತಿಗಳನ್ನು ಉಲ್ಲೇಖೀಸಿ ಟ್ಯಾಬ್ಲಾಯ್ಡ ವರದಿ ಮಾಡಿದೆ.
ಈ ವರ್ಷ ಫೆಬ್ರವರಿಯಲ್ಲಿ ಯುಎಇ ಯಲ್ಲಿ ನಡೆದಿದ್ದ ಟಿ-20 ಲೀಗ್ಗೆ ಸ್ಪಾಟ್ ಫಿಕ್ಸಿಂಗ್ ಕಳಂಕ ತಟ್ಟಿತ್ತು. ಇಬ್ಬರು ಪಾಕ್ ಆಟಗಾರರಾದ ಶಾರ್ಜಿಲ ಖಾನ್ ಮತ್ತು ಖಲೀದ್ ಲತೀಫ್ ಅವರು ಸಿಕ್ಕಿಬಿದ್ದಿದ್ದರು. ಕೊನೆಗೂ ಇವರಿಬ್ಬರಿಗೂ ಐದು ವರ್ಷಗಳ ನಿಷೇಧ ಹೇರಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ