ವಾರ್ನರ್ ಟು ರಬಾಡ: ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ ಆಟಗಾರರು
Team Udayavani, Feb 11, 2022, 3:01 PM IST
ಬೆಂಗಳೂರು: 15ನೇ ಆವೃತ್ತಿಯ ಐಪಿಎಲ್ ನ ತಯಾರಿ ಜೋರಾಗುತ್ತಿದೆ. ಮೆಗಾ ಹರಾಜಿಗೆ ಸಿದ್ದತೆ ನಡೆಯುತ್ತಿದೆ. ಶನಿವಾರ- ಭಾನುವಾರ ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ತಮ್ಮ ಆಯ್ಕೆಯ ಆಟಗಾರರನ್ನು ಖರೀದಿ ಮಾಡಲು ಹತ್ತು ತಂಡಗಳು ತಯಾರಿ ನಡೆಸುತ್ತಿದೆ.
ಈ ಬಾರಿಯ ಹರಾಜಿನಲ್ಲಿ ಕೆಲವು ವಿದೇಶಿ ಆಟಗಾರರು ಮಿಂಚುವ ಸಾಧ್ಯತೆಯಿದೆ. ಹಲವು ಸೂಪರ್ ಸ್ಟಾರ್ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆಯಿದೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.
ಕಗಿಸೋ ರಬಾಡ: ದಕ್ಷಿಣ ಆಫ್ರಿಕಾದ ಈ ವೇಗಿ ಇದುವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಿದ್ದರು. ಇದೀಗ ಹರಾಜಿಗೆ ಬಂದಿದ್ದು, ರಬಾಡ ಖರೀದಿಗೆ ತಂಡಗಳು ಮುಗಿಬೀಳಲಿದೆ. 2 ಕೋಟಿ ರೂ. ಮೂಲಬೆಲೆ ಹೊಂದಿರುವ ರಬಾಡಾ ಉತ್ತಮ ಬೆಲೆಗೆ ಬಿಕರಿಯಾಗಬಹುದು.
ಇದನ್ನೂ ಓದಿ:ಅಂತಿಮ ಏಕದಿನ: ಟಾಸ್ ಗೆದ್ದ ಭಾರತ; ತಂಡದಲ್ಲಿ 4 ಬದಲಾವಣೆ ಮಾಡಿದ ರೋಹಿತ್
ಡೇವಿಡ್ ವಾರ್ನರ್: ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ, ಆಸೀಸ್ ಆಟಗಾರ ಡೇವಿಡ್ ವಾರ್ನರ್ ಅವರು ಈ ಬಾರಿಯ ಹರಾಜಿನ ಅತ್ಯಂತ ಬೇಡಿಕೆಯ ಆಟಗಾರನಾಗಿದ್ದಾರೆ. ಆರಂಭಿಕ ಆಟಗಾರ, ನಾಯಕತ್ವದ ಅರ್ಹತೆ, ಉತ್ತಮ ಫೀಲ್ಡರ್ ಆಗಿರುವ ವಾರ್ನರ್ ಮೇಲೆ ಹಲವು ತಂಡಗಳು ಕಣ್ಣಿಟ್ಟಿದೆ. ಎರಡು ಕೋಟಿ ರೂ ಮೂಲ ಬೆಲೆ ಹೊಂದಿರುವ ವಾರ್ನರ್ ಈ ಬಾರಿ ಅತೀ ಹೆಚ್ಚು ಬೆಲೆ ಪಡೆದರೂ ಅಚ್ಚರಿಯಿಲ್ಲ.
ಪ್ಯಾಟ್ ಕಮಿನ್ಸ್: 2020ರ ಹರಾಜಿನಲ್ಲಿ 15 ಕೋಟಿ ರೂ. ಬಾಚಿಕೊಂಡಿದ್ದ ಪ್ಯಾಟ್ ಕಮಿನ್ಸ್ ಕೂಡಾ 2 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಉತ್ತಮ ವೇಗಿಯಾಗಿರುವ ಆಸೀಸ್ ಟೆಸ್ಟ್ ನಾಯಕ ಕಮಿನ್ಸ್ ಯಾವುದೇ ತಂಡಕ್ಕೂ ಶಕ್ತಿ ತುಂಬಬಲ್ಲರು.
ಕ್ವಿಂಟನ್ ಡಿಕಾಕ್: ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಿದ್ದ ಕ್ವಿಂಟನ್ ಡಿಕಾಕ್ ವಿಶ್ವದರ್ಜೆಯ ಆರಂಭಿಕ ಆಟಗಾರ ಮತ್ತು ವಿಕೆಟ್ ಕೀಪರ್. ಏಕಾಂಗಿಯಾಗಿ ಪಂದ್ಯದ ಗತಿ ಬದಲಿಸಬಲ್ಲ ಶಕ್ತಿಯಿರುವ ಡಿಕಾಕ್ ಎರಡು ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಹರಾಜು ಟೇಬಲ್ ನಲ್ಲಿ ಡಿಕಾಕ್ ರನ್ನು ಖರೀದಿಸಲು ತಂಡಗಳು ಪೈಪೋಟಿ ನಡೆಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ