ಬ್ಯಾಡ್ಮಿಂಟನ್‌: ಪ್ರಮೋದ್‌ ಭಗತ್‌ ಸೆಮಿಫೈನಲ್‌ ಪ್ರವೇಶ


Team Udayavani, Sep 2, 2021, 9:22 PM IST

ಬ್ಯಾಡ್ಮಿಂಟನ್‌: ಪ್ರಮೋದ್‌ ಭಗತ್‌ ಸೆಮಿಫೈನಲ್‌ ಪ್ರವೇಶ

ಟೋಕ್ಯೊ: ಪ್ಯಾರಾಲಿಂಪಿಕ್ಸ್‌ ಪುರುಷರ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ವಿಶ್ವದ ನಂ.1 ಆಟಗಾರ ಪ್ರಮೋದ್‌ ಭಗತ್‌ ಸೆಮಿಫೈನಲ್‌ ಪ್ರವೇಶಿಸಿರುವುದು ಶುಭ ಸಮಾಚಾರ. ಹಾಗೆಯೇ ಸುಹಾಸ್‌ ಯತಿರಾಜ್‌, ತರುಣ್‌ ಧಿಲ್ಲೋನ್‌, ಕೃಷ್ಣ ನಗರ್‌ ಗೆಲುವಿನ ಆರಂಭ ಕಾಣುವಲ್ಲಿ ಯಶಸ್ವಿಯಾಗಿದ್ದಾರೆ.

33 ವರ್ಷದ, ಹಾಲಿ ವಿಶ್ವ ಚಾಂಪಿಯನ್‌ ಕೂಡ ಆಗಿರುವ ಪ್ರಮೋದ್‌ ಭಗತ್‌ ಉಕ್ರೇನಿನ ಅಲೆಕ್ಸಾಂಡರ್‌ ಶಿರ್ಕೋವ್‌ ವಿರುದ್ಧ 26 ನಿಮಿಷಗಳಲ್ಲಿ 21-12, 21-9 ಅಂತರದ ಗೆಲುವು ಸಾಧಿಸಿದರು; ಗುಂಪಿನ ಅಗ್ರಸ್ಥಾನಿಯಾಗಿ ಎಸ್‌ಎಲ್‌3 ವಿಭಾಗದ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು. ನನ್ನ ಇಂದಿನ ಪ್ರದರ್ಶನ ತೃಪ್ತಿ ನೀಡಿದೆ. ಶಿರ್ಕೋವ್‌ ಕೂಡ ಉತ್ತಮ ಆಟಗಾರ. ಅವರ ಕೆಲವು ಸ್ಟ್ರೋಕ್‌ಗಳು ಅತ್ಯುತ್ತಮವಾಗಿದ್ದವು. ಸೆಮಿಫೈನಲ್‌ ತಲುಪಿರುವುದಕ್ಕೆ ಖುಷಿಯಾಗಿದೆ’ ಎಂದು ಪ್ರಮೋದ್‌ ಭಗತ್‌ ಪ್ರತಿಕ್ರಿಯಿಸಿದ್ದಾರೆ.

“ಎ’ ವಿಭಾಗದ ಪಂದ್ಯದಲ್ಲಿ ಸುಹಾಸ್‌ ಯತಿರಾಜ್‌ ಕೇವಲ 19 ನಿಮಿಷಗಳಲ್ಲಿ ಜರ್ಮನಿಯ ಜಾನ್‌ ನಿಕ್ಲಾಸ್‌ ಪಾಟ್‌ ಅವರನ್ನು 21-9, 21-3 ಅಂತರದಿಂದ ಸುಲಭದಲ್ಲಿ ಸೋಲಿಸಿದರು. “ಬಿ’ ವಿಭಾಗದ ಮುಖಾಮುಖೀಯಲ್ಲಿ ತರುಣ್‌ ಧಿಲ್ಲೋನ್‌ ಥಾಯ್ಲೆಂಡಿನ ಸಿರಿಪಾಂಗ್‌ ಟೀಮರೋಮ್‌ ವಿರುದ್ಧ 21-7, 21-13 ಅಂತರದ ಜಯ ಸಾಧಿಸಿದರು. ಕೃಷ್ಣ ನಗರ್‌ ಮಲೇಷ್ಯಾದ ಟೆರೆಸೋಹ್‌ ದಿಡಿನ್‌ ಅವರನ್ನು 22-20, 21-10 ಅಂತರದಿಂದ ಮಣಿಸಿದರು.

ವನಿತೆಯರಿಗೆ ಮಿಶ್ರಫ‌ಲ: ವನಿತೆಯರ ಎಸ್‌ಯು5 ವಿಭಾಗದ ದ್ವಿತೀಯ ಸಿಂಗಲ್ಸ್‌ನಲ್ಲಿ ಪಲಕ್‌ ಕೊಹ್ಲಿ ಟರ್ಕಿಯ ಜೆಹ್ರಾ ಬಾಗ್ಲಾರ್‌ ವಿರುದ್ಧ 21-12, 21-18 ಅಂಕಗಳ ಮೇಲುಗೈ ಸಾಧಿಸಿದರು. ಆದರೆ ಪಾರುಲ್‌ ಪರ್ಮಾರ್‌ ಚೀನಾದ ಚೆಂಗ್‌ ಹೆಫಾಂಗ್‌ ವಿರುದ್ಧ 8-21, 2-21 ಅಂತರದಿಂದ ಪರಾಭವಗೊಂಡರು. ಜರ್ಮನಿಯ ಕ್ಯಾಟ್ರಿನಾ ಸೀಬರ್ಟ್‌ ವಿರುದ್ಧದ ಮುಂದಿನ ಪಂದ್ಯದಲ್ಲೂ ಪಾರುಲ್‌ ಪರಾಭವಗೊಂಡು ನಾಕೌಟ್‌ ರೇಸ್‌ನಿಂದ ಹೊರಬಿದ್ದರು. ಸೀಬರ್ಟ್‌ ಗೆಲುವಿನ ಅಂತರ 23-21, 19-21, 21-15.

ವನಿತಾ ಡಬಲ್ಸ್‌ನಲ್ಲಿ ಪಲಕ್‌ ಕೊಹ್ಲಿ-ಪಾರುಲ್‌ ಪರ್ಮಾರ್‌ ಅವರನ್ನು ಚೀನಾದ ದ್ವಿತೀಯ ಶ್ರೇಯಾಂಕದ ಚೆಂಗ್‌ ಹೆಫಾಂಗ್‌-ಮಾ ಹುಯಿಹುಯಿ 21-7, 21-5 ಅಂತರದಿಂದ ಮಣಿಸಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.