ಮುಂಬೈ:ರೈಲು ನಿಲ್ದಾಣದ ಪ್ಲಾಟ್ಫಾರ್ಮಿಗೆ ಕಾರು ನುಗ್ಗಿಸಿದ ಕ್ರಿಕೆಟಿಗ
Team Udayavani, Feb 20, 2017, 3:19 PM IST
ಮುಂಬಯಿ: 19ರ ಕೆಳ ಹರೆಯದವರ ಕ್ರಿಕೆಟ್ ತಂಡದ ಆಟಗಾರನಾಗಿರುವ ಹರ್ಪ್ರೀತ್ ಸಿಂಗ್ ಕುಡಿದ ಮತ್ತಿನಲ್ಲಿ ಅಂಧೇರಿಯ ರೈಲು ನಿಲ್ದಾಣದ ಫ್ಲಾಟ್ಫಾರ್ಮಿಗೆ ಕಾರು ನುಗ್ಗಿಸಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇಂದು ನಡೆಯಿತು.
ಹರ್ಪ್ರೀತ್ ಅವರು ಇಂದು ಸೋಮವಾರ ಬೆಳಗ್ಗೆ ಬಾಂದ್ರಾದಿಂದ ಕಾರಿನಲ್ಲಿ ಹೊರಟಿದ್ದರು. ಜನದಟ್ಟನೆಯಿಂದ ಕೂಡಿದ್ದ ಅಂಧೇರಿ ರೈಲು ನಿಲ್ದಾಣದ ಒಂದನೇ ಪ್ಲಾಟ್ಫಾರ್ಮಿಗೆ ಅವರು ವೇಗವಾಗಿ ಕಾರನ್ನು ಓಡಿಸಿದರು. ಇದನ್ನು ಕಂಡು ಜನರು ಕಂಗಾಲಾದರು. ಗೊಂದಲದ ನಡುವೆ ಸ್ಥಳದಲ್ಲಿ ಗಲಾಟೆಯೂ ನಡೆಯಿತು.
ಹರ್ಪ್ರೀತ್ ಸಿಂಗ್ ಅವರು ತಮ್ಮ ಕಾರನ್ನು ವಿಕಲಾಂಗರ ಗಾಲಿ ಕುರ್ಚಿ ಒಯ್ಯಲು ಕಲ್ಪಿಸಲಾಗಿದ್ದ ಇಳಿಜಾರು ಮಾರ್ಗದ ಮೇಲೆ ಒಯ್ದಿದ್ದರು. ದಿಕ್ಕು ತಿಳಿಯದೆ ತಾನು ಹೀಗೆ ಮಾಡಿದೆ ಎಂದು ಹೇಳಿಕೊಂಡ ಹರ್ಪ್ರೀತ್ ಕುಡಿದ ಮತ್ತಿನಲ್ಲಿ ಹೀಗೆ ಮಾಡಿರುವುದು ಪೊಲೀಸರಿಗೆ ಗೊತ್ತಾಯಿತು. ಅಂತೆಯೇ ಅವರು ಹರ್ಪ್ರೀತ್ ವಿರುದ್ಧ ಕೇಸು ದಾಖಲಿಸಿಕೊಂಡರು.
ಹರ್ಪ್ರೀತ್ ರನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಾಗ ಆತ ಮದ್ಯ ಸೇವಿಸಿರುವುದು ಖಚಿತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ