ದಹಿಯಾ ಬಂಗಾರ ವಿಜಯ; ಭಜರಂಗ್‌, ಸತ್ಯವ್ರತ್‌, ಗೌರವ್‌ಗೆ ಬೆಳ್ಳಿ

ಏಶ್ಯನ್‌ ಕುಸ್ತಿಯಲ್ಲಿ ಮೊದಲ ಚಿನ್ನ ಗೆದ್ದ ವಿಜಯ್‌ ದಹಿಯಾ ; ಫೈನಲ್‌ನಲ್ಲಿ ಎಡವಿದ ಮೂವರು

Team Udayavani, Feb 22, 2020, 11:11 PM IST

PTI2_22_2020_000181B

ಹೊಸದಿಲ್ಲಿ: ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಶನಿವಾರದ ಸ್ಪರ್ಧೆ ಯಲ್ಲಿ ಭಾರತದ ಪುರುಷರು ಗಮನಾರ್ಹ ಪ್ರದರ್ಶನ ನೀಡಿದರು. ವಿವಿಧ ವಿಭಾಗಗಳ 4 ಫೈನಲ್‌ ಸ್ಪರ್ಧೆಗಳಲ್ಲಿ ಭಾರತ ಒಂದು ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಗೆದ್ದಿತು.

ಬಂಗಾರ ಪದಕಕ್ಕೆ ಕೊರಳೊಡ್ಡಿದ ಹಿರಿಮೆ ವಿಜಯ್‌ ಕುಮಾರ್‌ ದಹಿಯಾ ಅವರ ದಾಯಿತು. “ಕೆ.ಡಿ. ಜಾಧವ್‌ ರೆಸ್ಲಿಂಗ್‌ ಹಾಲ್‌’ನಲ್ಲಿ ನಡೆದ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದಹಿಯಾ ತಜಿಕಿಸ್ಥಾನದ ಹಿಕ್ಮತುಲ್ಲೊ ವೊಹಿದೋವ್‌ ವಿರುದ್ಧ 10-0 ಅಂತರದ ಭರ್ಜರಿ ಗೆಲುವು ಸಾಧಿಸಿದರು.

ಇದು ಏಶ್ಯನ್‌ ಕೂಟದಲ್ಲಿ ದಹಿಯಾ ಗೆದ್ದ ಮೊದಲ ಬಂಗಾರ. ಪ್ರಶಸ್ತಿಯ ಹಾದಿಯಲ್ಲಿ ಅವರು ಜಪಾನಿನ ವಿಶ್ವ ಚಾಂಪಿಯನ್‌ ಯುಕಿ ಟಕಹಾಶಿ ಹಾಗೂ 2 ಬಾರಿಯ ವಿಶ್ವ ಚಾಂಪಿಯನ್‌ ನುರಿಸ್ಲಾಮ್‌ ಸನಯೇವ್‌ ಅವರನ್ನು ಮಣಿಸಿ ಮುನ್ನಡೆದಿದ್ದರು.

ಭಜರಂಗ್‌ ಬೆಳ್ಳಿಗೆ ತೃಪ್ತಿ
65 ಕೆ.ಜಿ. ವಿಭಾಗದಲ್ಲಿ ಭಜರಂಗ್‌ ಪುನಿಯ ಬೆಳ್ಳಿ ಪದಕಕ್ಕೆ ಸಮಾಧಾನಪಡಬೇಕಾಯಿತು. ಅವರು 2-10 ಅಂತರದಿಂದ ಜಪಾನಿನ ಟಕುಟೊ ಒಟುಗುರೊ ವಿರುದ್ಧ ಸೋಲನುಭವಿಸಿದರು. ಇದು 2018ರ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನ ರೀ-ಮ್ಯಾಚ್‌ ಆಗಿತ್ತಾದರೂ ಭಜರಂಗ್‌ ಸೇಡು ತೀರಿಸಿಕೊಳ್ಳುವಲ್ಲಿ ವಿಫ‌ಲರಾದರು. ಆದರೆ ಭಜರಂಗ್‌ ಅವರ ಫೈನಲ್‌ ಹಾದಿಯ ಪಯಣ ಅಮೋಘವಾಗಿತ್ತು. ತಜಿಕಿಸ್ಥಾನದ ಜಮ್ಶೆಡ್‌ ಶರಿಫೋವ್‌ ಅವರನ್ನು 11-0 ಅಂತರದಿಂದ, ಉಜ್ಬೆಕಿಸ್ಥಾನದ ಅಬ್ಬೊàಸ್‌ ರಕೊ¾ನೋವ್‌ ಅವರನ್ನು 12-2ರಿಂದ ಹಾಗೂ ಇರಾನಿನ ಜೂನಿಯರ್‌ ವಿಶ್ವ ಚಾಂಪಿಯನ್‌ ಅಮೀರ್‌ಹೊಸೇನ್‌ ಮಗ್‌ಶೌದಿ ಅವರನ್ನು 10-0 ಭರ್ಜರಿ ಅಂತರದಿಂದ ಚಿತ್‌ ಮಾಡಿದ್ದರು.

ಸತ್ಯವೃತ್‌, ಗೌರವ್‌ಗೆ ಬೆಳ್ಳಿ
ಮೊದಲು ನಡೆದ 97 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸತ್ಯವೃತ್‌ ಕಾದಿಯಾನ್‌ ಇರಾನ್‌ನ ಮೊಜ¤ಬ ಮೊಹಮ್ಮದ್‌ ಶಫಿ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲರಾದರು. 0-10 ಭಾರೀ ಅಂತರದಿಂದ ಸೋಲು ಕಾಣಬೇಕಾಯಿತು. ಪಂದ್ಯದುದ್ದಕ್ಕೂ ಪಟ್ಟು ಸಡಿಲಿಸದ ಶಫಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ಅನಂತರ ನಡೆದ 79 ಕೆ.ಜಿ. ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ ಗೌರವ್‌ ಬಲಿಯಾನ್‌ ಕಿರ್ಗಿಸ್ಥಾನದ ಅರ್ಸಾಲನ್‌ ಬುಡಝಪೋವ್‌ ವಿರುದ್ಧ ಅಮೋಘ ಹೋರಾಟ ತೋರ್ಪಡಿಸಿದರೂ ಚಿನ್ನದಿಂದ ದೂರವೇ ಉಳಿದರು. ಈ ಪಂದ್ಯದಲ್ಲಿ ಗೌರವ್‌ 5-7 ಅಂತರದ ಸೋಲು ಕಾಣಬೇಕಾಯಿತು. ಗೌರವ್‌ ಇದೇ ಮೊದಲ ಸಲ ಏಶ್ಯನ್‌ ಕುಸ್ತಿಯಲ್ಲಿ ಅಖಾಡಕ್ಕಿಳಿದಿದ್ದರು.

70 ಕೆ.ಜಿ. ವಿಭಾಗದ ಕಂಚಿನ ಪದಕದ ಸ್ಪರ್ಧೆಯಲ್ಲಿ ನವೀನ್‌ ಉಜ್ಬೆಕಿಸ್ಥಾನದ ಮಿರ್ಜಾನ್‌ ಅಶಿರೋವ್‌ ವಿರುದ್ಧ 1-12 ಅಂತರದ ಸೋಲುಂಡರು.

ಟಾಪ್ ನ್ಯೂಸ್

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.