ಒಂದು ವಿಕೆಟ್‌ನಿಂದ ಗೆದ್ದ ಶ್ರೀಲಂಕಾ

ವಿಂಡೀಸ್‌ ಎದುರಿನ ಮೊದಲ ಏಕದಿನ ಪಂದ್ಯ , ಹೋಪ್‌ ಶತಕ ವ್ಯರ್ಥ (115)

Team Udayavani, Feb 22, 2020, 11:06 PM IST

sa

ಕೊಲಂಬೊ: ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಚೇಸಿಂಗ್‌ ನಡೆಸಿದ ಶ್ರೀಲಂಕಾ ಒಂದು ವಿಕೆಟ್‌ ಅಂತರದ ರೋಚಕ ಜಯ ದಾಖಲಿಸಿದೆ.

ಶನಿವಾರ “ಕೊಲಂಬೋದ ಸಿಂಹಳೀಸ್‌ ನ್ಪೋರ್ಟ್ಸ್ ಕ್ಲಬ್‌’ನಲ್ಲಿ ನಡೆದ ಈ ಬ್ಯಾಟಿಂಗ್‌ ಮೇಲಾಟದಲ್ಲಿ ವೆಸ್ಟ್‌ ಇಂಡೀಸ್‌ 7 ವಿಕೆಟಿಗೆ 289 ರನ್‌ ಪೇರಿಸಿ ಸವಾಲೊಡ್ಡಿತು. ಆರಂಭಕಾರ ಶೈ ಹೋಪ್‌ 115 ರನ್‌ ಬಾರಿಸಿ ಮೆರೆದರು. ಜವಾಬಿತ್ತ ಶ್ರೀಲಂಕಾ ಕೊನೆಯ ಹಂತದ ಆತಂಕದಿಂದ ಪಾರಾಗಿ 49.1 ಓವರ್‌ಗಳಲ್ಲಿ 9 ವಿಕೆಟಿಗೆ 290 ರನ್‌ ಬಾರಿಸಿ ಗೆದ್ದು ಬಂದಿತು.

ಲಂಕೆಯ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಅಮೋಘ ಮಟ್ಟದಲ್ಲಿತ್ತು. ಆರಂಭಿಕರಾದ ಆವಿಷ್ಕ ಫೆರ್ನಾಂಡೊ (50)-ದಿಮುತ್‌ ಕರುಣರತ್ನೆ (52) ಭರ್ತಿ 18 ಓವರ್‌ ನಿಭಾಯಿಸಿ 111 ರನ್‌ ಪೇರಿಸಿದರು. ಇವರಿಬ್ಬರು 10 ರನ್‌ ಅಂತರದಲ್ಲಿ ಔಟಾದರೂ ಕುಸಲ್‌ ಪೆರೆರ (42), ಕುಸಲ್‌ ಮೆಂಡಿಸ್‌ (20) ಹೋರಾಟ ಮುಂದುವರಿಸಿದರು.

38ನೇ ಓವರಿನಲ್ಲಿ 215ಕ್ಕೆ 6 ವಿಕೆಟ್‌ ಬಿದ್ದಾಗ ವಿಂಡೀಸಿಗೆ ಗೆಲುವಿನ ಉಜ್ವಲ ಅವಕಾಶವಿತ್ತು. ಆದರೆ ತಿಸರ ಪೆರೆರ (32), ವನಿಂದು ಹಸರಂಗ (ಅಜೇಯ 42) ಸೇರಿಕೊಂಡು ವಿಂಡೀಸ್‌ ಮೇಲೆರಗಿದರು. ಕೀಮೊ ಪೌಲ್‌ ಪಾಲಾದ ಕೊನೆಯ ಓವರಿನಲ್ಲಿ ಲಂಕಾ 2 ವಿಕೆಟ್‌ಗಳಿಂದ ಒಂದು ರನ್‌ ಮಾಡಬೇಕಿತ್ತು. ಮೊದಲ ಎಸೆತದಲ್ಲೇ ಸಂದಕನ್‌ ರನೌಟಾದರು. ಮುಂದಿನ ಎಸೆತ ನೋಬಾಲ್‌ ಆಯಿತು!

ಶೈ ಹೋಪ್‌ ಶತಕ
ವಿಂಡೀಸ್‌ ಸರದಿಯಲ್ಲಿ ಓಪನರ್‌ ಶೈ ಹೋಪ್‌ 9ನೇ ಶತಕದೊಂದಿಗೆ ಮೆರೆದರು. 46ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿ 115 ರನ್‌ ಹೊಡೆದರು (140 ಎಸೆತ, 10 ಬೌಂಡರಿ). ಆದರೆ ಇದು ವ್ಯರ್ಥವಾಯಿತು.

ಸಂಕ್ಷಿಪ್ತ ಸ್ಕೋರ್‌
ವೆಸ್ಟ್‌ ಇಂಡೀಸ್‌-7 ವಿಕೆಟಿಗೆ 289 (ಹೋಪ್‌ 115, ಚೇಸ್‌ 41, ಡ್ಯಾರನ್‌ ಬ್ರಾವೊ 39, ಪೌಲ್‌ ಔಟಾಗದೆ 32, ಉದಾನ 82ಕ್ಕೆ 3). ಶ್ರೀಲಂಕಾ-49.1 ಓವರ್‌ಗಳಲ್ಲಿ 9 ವಿಕೆಟಿಗೆ 290 (ಕರುಣರತ್ನೆ 52, ಫೆರ್ನಾಂಡೊ 50, ಪೆರೆರ 42, ಹಸರಂಗ ಔಟಾಗದೆ 42, ಜೋಸೆಫ್ 42ಕ್ಕೆ 3, ವಾಲ್ಶ್ 38ಕ್ಕೆ 2, ಪೌಲ್‌ 48ಕ್ಕೆ 2).
ಪಂದ್ಯಶ್ರೇಷ್ಠ: ವನಿಂದು ಹಸರಂಗ.

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.