ವೀಕ್ಷಕರ ಬೆಂಬಲವೇ ನಮಗೆ ಶ್ರೀರಕ್ಷೆ: ಸ್ಟಾಲಿನ್‌


Team Udayavani, Oct 4, 2017, 10:35 AM IST

04-ANNA-4.jpg

ಹೊಸದಿಲ್ಲಿ: ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ನಮಗೆ ತವರಿನ ವೀಕ್ಷಕರ ಬೆಂಬಲ ಅತ್ಯಗತ್ಯ, ಗ್ರೂಪ್‌ ಹಂತ ದಾಟುವುದು ನಮ್ಮ ಮೊದಲ ಗುರಿ ಎಂದಿದ್ದಾರೆ ಭರವಸೆಯ ಡಿಫೆನ್ಸ್‌ ಆಟಗಾರ ಸಂಜೀವ್‌ ಸ್ಟಾಲಿನ್‌. 

“ನಮಗೀಗ ಆತ್ಮವಿಶ್ವಾಸ ಮೂಡಿದೆ. ಆದರೆ ಇದು ಅತಿಯಾದ ಆತ್ಮವಿಶ್ವಾಸವಲ್ಲ. ದೊಡ್ಡದೊಂದು ಸಮರಕ್ಕೆ ನಾವು ಸಜ್ಜಾಗಿದ್ದೇವೆ. ವಿಶ್ವಕಪ್‌ನಲ್ಲಿ ಗ್ರೂಪ್‌ ಹಂತ ದಾಟುವ ಯೋಜನೆಯೊಂದಿಗೆ ನಾವು ಕಣಕ್ಕಿಳಿಯಲಿದ್ದೇವೆ’ ಎಂದು ಸ್ಟಾಲಿನ್‌ ಹೇಳಿದರು. ಭಾರತದ ಸೀನಿಯರ್‌ ಫ‌ುಟ್ಬಾಲಿಗರೇ ಮಾಧ್ಯಮಗಳ ಮುಂದೆ ಮಾತಾಡಲು ಹಿಂದೇಟು ಹಾಕುತ್ತಿರುವಂಥ ಸಂದರ್ಭದಲ್ಲಿ ಕಿರಿಯ ಡಿಫೆಂಡರ್‌ ಸ್ಟಾಲಿನ್‌ ಅಭ್ಯಾಸದ ವೇಳೆ ತಮಗೆ ಅನಿಸಿದ್ದನ್ನೆಲ್ಲ ಹೇಳಿಕೊಂಡದ್ದು ವಿಶೇಷವಾಗಿತ್ತು. ಅ. 6ರಿಂದ ಈ ಕಾಲ್ಚೆಂಡಿನ ಕಾಳಗ ಭಾರತದ ಆತಿಥ್ಯದಲ್ಲಿ ರಂಗೇರಿಸಿಕೊಳ್ಳಲಿದೆ.

“ಭಾರತದ ಅಂಡರ್‌-17 ತಂಡ ವಿಶ್ವಕಪ್‌ಗೆ ಸಂಪೂರ್ಣವಾಗಿ ಅಣಿಯಾಗಿದೆ. 2015ರಿಂದ 14 ದೇಶಗಳಲ್ಲಿ ನಮ್ಮ ತಂಡ ಪ್ರವಾಸಗೈದು ಸಾಕಷ್ಟು ಪಂದ್ಯಗಳನ್ನಾಡಿದೆ. ಜರ್ಮನಿ, ರಶ್ಯ, ಸ್ಪೇನ್‌, ಮೆಕ್ಸಿಕೊ, ದಕ್ಷಿಣ ಆಫ್ರಿಕಾ ಮತ್ತು ಯುಎಇಗೆ ತೆರಳಿದೆ. ಇದರಿಂದ ಈಗ ಲಾಭವಾಗಬಹುದೇ ಎಂದು ಕೇಳಬಹುದು. ಆದರೆ ಈ ಪ್ರವಾಸಗಳಿಂದ ನಾನೋರ್ವ ಆಟಗಾರನಾಗಿ ಹಾಗೂ ಓರ್ವ ವ್ಯಕ್ತಿಯಾಗಿ ಸಾಕಷ್ಟು ಬೆಳೆದಿದ್ದೇನೆ’ ಎಂದು ಸ್ಟಾಲಿನ್‌ ಆತ್ಮವಿಶ್ವಾಸದಿಂದ ಹೇಳಿದರು.

ದೊಡ್ಡ ಪಂದ್ಯಾವಳಿಯ ಒತ್ತಡ ತಂಡದ ಮೇಲಿರಬೇಕಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್‌, “ಒತ್ತಡ ಎನ್ನುವುದು ಬದುಕಿನ ಅವಿಭಾಜ್ಯ ಅಂಗ. ಇದು ದೊಡ್ಡ ಟೂರ್ನಿಯಾದ್ದರಿಂದ ನಮ್ಮೆಲ್ಲರ ಮೇಲೂ ಒತ್ತಡ ಇದ್ದೇ ಇದೆ. ಆದರೆ ಇದು ಉತ್ತಮ ರೀತಿಯ ಒತ್ತಡ. ಆ್ಯತ್ಲೀಟ್‌ಗಳಾಗಿ ನಾವು ಇದನ್ನೆಲ್ಲ ನಿಭಾಯಿಸುವುದು ಮುಖ್ಯ’ ಎಂದರು.

“ಉತ್ತಮ ರೀತಿಯ ಒತ್ತಡ’ವನ್ನು ವ್ಯಾಖ್ಯಾನಿಸಿದ ಸ್ಟಾಲಿನ್‌, “ಇದರಿಂದ ನಮಗೆ ಆಗುವ ಲಾಭ ಅಧಿಕ. ಯಾವ ಒತ್ತಡ ನಮ್ಮಿಂದ ಉತ್ತಮ ಹಾಗೂ ಸಾಮರ್ಥ್ಯಕ್ಕೂ ಮಿಗಿಲಾದ ಸಾಧನೆಯನ್ನು ಹೊರಗೆಡವುತ್ತದೋ ಅದೇ ಉತ್ತಮ ರೀತಿಯ ಒತ್ತಡ’ ಎಂದರು.
 
“12ನೇ ಆಟಗಾರರ ಪ್ರೋತ್ಸಾಹವಿರಲಿ’
“ಭಾರತದ ಫ‌ುಟ್‌ಬಾಲ್‌ ಪಾಲಿಗೆ ಇದೊಂದು ಚಾರಿತ್ರಿಕ ಗಳಿಗೆ. ನಮಗೆ 12ನೇ ಆಟಗಾರರ, ಅಂದರೆ ವೀಕ್ಷಕರ ಸಂಪೂರ್ಣ ಬೆಂಬಲದ ಅಗತ್ಯವಿದೆ. ಮುಖ್ಯವಾಗಿ ಅಮೆರಿಕ ವಿರುದ್ಧ ಮೊದಲ ಪಂದ್ಯವಾಡುವಾಗ ಈ ಬೆಂಬಲ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿರಬೇಕು. ಇದು ಕೇವಲ “ಫಿಫಾ’ದ ವಿಶ್ವಕಪ್‌ ಅಲ್ಲ. ಪ್ರತಿಯೊಬ್ಬ ಭಾರತೀಯನಿಗೂ ಅನ್ವಯಿಸುವ ವಿಶ್ವಕಪ್‌. ಭಾರತೀಯರೆಲ್ಲರೂ ಈ ಪಂದ್ಯಾವಳಿಯ ಭಾಗವಾಗಿದ್ದಾರೆ’ ಎಂದ ಸಂಜೀವ್‌ ಸ್ಟಾಲಿನ್‌, ಬಲಿಷ್ಠವೆಂದೇ ಗುರುತಿಸಲ್ಪಡುವ “ಎ’ ವಿಭಾಗದಲ್ಲಿ ಭಾರತ “ಅಂಡರ್‌ ಡಾಗ್‌’ ಆಗಿದೆ ಎಂದರು.

“ಕೊನೆಯ ಪಂದ್ಯವೆಂದೇ ಆಡಿ’
ಈ ಸಂದರ್ಭದಲ್ಲಿ ಮಾತಾಡಿದ ತಂಡದ ಮತ್ತೂಬ್ಬ ಆಟಗಾರ ಕೋಮಲ್‌ ಥಾಟಲ್‌, “ನಾವು ಎಲ್ಲ ವಿಭಾಗಗಳಲ್ಲೂ ಸುಧಾರಣೆಗೊಂಡಿದ್ದೇವೆ. ಈ ಪ್ರವಾಸಗಳಿಂದ ವಿಶ್ವದ ದೊಡ್ಡ ತಂಡಗಳನ್ನೆದುರಿಸುವ ಆತ್ಮವಿಶ್ವಾಸ ಮೂಡಿದೆ. ನನ್ನ ಡ್ರಿಬ್ಲಿಂಗ್‌ ಹಾಗೂ ಪಾಸಿಂಗ್‌ನಲ್ಲಿ ಪ್ರಗತಿ ಕಂಡುಬಂದಿದೆ’ ಎಂದರು.

“ಎಲ್ಲ ಪಂದ್ಯವನ್ನೂ ಆನಂದಿಸಿ, ಆದರೆ ಒಮ್ಮೆ ಒಂದು ಪಂದ್ಯದ ಮೇಲಷ್ಟೇ ಗಮನವಿರಲಿ. ಇದು ನಿಮ್ಮ ಕೊನೆಯ ಫ‌ುಟ್‌ಬಾಲ್‌ ಪಂದ್ಯ ಎಂದು ಭಾವಿಸಿಕೊಂಡು ಆಡಿ. ನೂರು ಪ್ರತಿಶತ ಸಾಮರ್ಥ್ಯ ತೋರಿಸಿ ಎಂಬುದು ನಮ್ಮ ಕೋಚ್‌ ನೀಡಿದ ಸಲಹೆ. ಇದನ್ನು ನಾವು ಪಾಲಿಸಬೇಕಿದೆ’ ಎಂದು ಥಾಟಲ್‌ ಹೇಳಿದರು.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwewq-ew

IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

1-wwwqewq

RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.