ವಿಜಯ್‌ ಹಜಾರೆ: ಬಂಗಾಲಕ್ಕೆ ಶರಣಾದರೂ ಮುನ್ನಡೆದ ಕರ್ನಾಟಕ


Team Udayavani, Dec 15, 2021, 5:50 AM IST

ವಿಜಯ್‌ ಹಜಾರೆ: ಬಂಗಾಲಕ್ಕೆ ಶರಣಾದರೂ ಮುನ್ನಡೆದ ಕರ್ನಾಟಕ

ತಿರುವನಂತಪುರ: ಬಂಗಾಲ ವಿರುದ್ಧದ ಅಂತಿಮ ಲೀಗ್‌ ಪಂದ್ಯದಲ್ಲಿ ಪರಾಭವಗೊಂಡ ಹೊರತಾಗಿಯೂ ಕರ್ನಾಟಕ ತಂಡ “ವಿಜಯ್‌ ಹಜಾರೆ ಟ್ರೋಫಿ’ ಕ್ರಿಕೆಟ್‌ ಪಂದ್ಯಾವಳಿಯ ನಾಕೌಟ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

“ಬಿ’ ವಿಭಾಗದ ಸ್ಪರ್ಧೆಯಲ್ಲಿ 4 ತಂಡಗಳು ತಲಾ 12 ಅಂಕ ಸಾಧಿಸಿದ್ದು, ಅಗ್ರಸ್ಥಾನದಲ್ಲಿದ್ದ ತಮಿಳುನಾಡು (+1.047) ನೇರವಾಗಿ ಕ್ವಾರ್ಟರ್‌ ಫೈನಲ್‌ ಟಿಕೆಟ್‌ ಪಡೆಯಿತು. ದ್ವಿತೀಯ ಸ್ಥಾನಿ ಕರ್ನಾಟಕ (+0.784) ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಬಂಗಾಲ ಮತ್ತು ಪುದುಚೇರಿ ಕೂಡ 12 ಅಂಕ ಹೊಂದಿದ್ದರೂ ಎರಡೂ ತಂಡಗಳ ರನ್‌ರೇಟ್‌ ಮೈನಸ್‌ನಲ್ಲಿತ್ತು. ಕೊನೆಯ ಪಂದ್ಯದಲ್ಲಿ ಪುದುಚೇರಿಗೆ ಶರಣಾದ ಮುಂಬಯಿ “ಬಿ’ ವಿಭಾಗದ ಕೊನೆಯ ಸ್ಥಾನದ ಅವಮಾನಕ್ಕೆ ಸಿಲುಕಿತು.

ಪಾಂಡೆ ಕಪ್ತಾನನ ಆಟ
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕರ್ನಾಟಕ 8 ವಿಕೆಟಿಗೆ 252 ರನ್‌ ಗಳಿಸಿದರೆ, ಬಂಗಾಲ 48.3 ಓವರ್‌ಗಳಲ್ಲಿ 6 ವಿಕೆಟಿಗೆ 253 ರನ್‌ ಬಾರಿಸಿತು.

ಕರ್ನಾಟಕ ಪರ ನಾಯಕ ಮನೀಷ್‌ ಪಾಂಡೆ 90 ರನ್‌ ಹೊಡೆದರು. ಆಕ್ರಮಣಕಾರಿ ಆಟವಾಡಿದ ಪಾಂಡೆ 85 ಎಸೆತ ಎದುರಿಸಿ, 4 ಸಿಕ್ಸರ್‌ ಹಾಗೂ 4 ಬೌಂಡರಿ ಬಾರಿಸಿ ಮಿಂಚಿದರು. ಆರಂಭಕಾರ ರೋಹನ್‌ ಕದಂ ಮತ್ತು ಪ್ರವೀಣ್‌ ದುಬೆ ತಲಾ 47 ರನ್‌ ಮಾಡಿದರು. ಎಡಗೈ ಸ್ಪಿನ್ನರ್‌ ಪ್ರದೀಪ್‌ ಪ್ರಾಮಾಣಿಕ್‌ 4 ವಿಕೆಟ್‌ ಕೀಳುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-8 ವಿಕೆಟಿಗೆ 252 (ಪಾಂಡೆ 90, ಕದಂ 47, ದುಬೆ ಔಟಾಗದೆ 47, ಪ್ರಾಮಾಣಿಕ್‌ 48ಕ್ಕೆ 4, ರಿತಿಕ್‌ ಚಟರ್ಜಿ 51ಕ್ಕೆ 2). ಬಂಗಾಲ-48.3 ಓವರ್‌ಗಳಲ್ಲಿ 6 ವಿಕೆಟಿಗೆ 253 (ಸುದೀಪ್‌ ಚಟರ್ಜಿ 63, ಅಭಿಷೇಕ್‌ ದಾಸ್‌ 58, ರಿತಿಕ್‌ ಚೌಧರಿ 49, ಜೈನ್‌ 56ಕ್ಕೆ 3).

ಇದನ್ನೂ ಓದಿ:ಪ್ರವಾಹ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ: ಸಿದ್ದರಾಮಯ್ಯ

ಪುದುಚೇರಿಗೆ ಶರಣಾದ ಮುಂಬಯಿ!
ಕೂಟದುದ್ದಕ್ಕೂ ತೀರಾ ಕಳಪೆ ಪ್ರದರ್ಶನ ನೀಡಿದ ಮುಂಬಯಿ, ಮಂಗಳವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಪುದುಚೇರಿಗೆ 18 ರನ್ನುಗಳಿಂದ ಶರಣಾಗಿ ತೀವ್ರ ಮುಖಭಂಗ ಆನುಭವಿಸಿತು. ಪುದುಚೇರಿ ಮೊದಲು ಬ್ಯಾಟಿಂಗ್‌ ನಡೆಸಿ 157 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿದರೂ ಮುಂಬಯಿಗೆ ಈ ಮೊತ್ತವನ್ನು ಹಿಂದಿಕ್ಕಲಾಗಲಿಲ್ಲ. ಫಾಬಿದ್‌ ಅಬಿದ್‌ (16ಕ್ಕೆ 4), ಸಾಗರ್‌ ಉದೇಶಿ, ಸಾಗರ್‌ ತ್ರಿವೇದಿ ಮತ್ತು ಭರತ್‌ ಶರ್ಮ (ತಲಾ 2 ವಿಕೆಟ್‌) ದಾಳಿಗೆ ತತ್ತರಿಸಿದ ಮುಂಬಯಿ 48.1 ಓವರ್‌ಗಳಲ್ಲಿ 139ಕ್ಕೆ ಆಲೌಟ್‌ ಆಯಿತು.

ನಾಕೌಟ್‌ ಪಂದ್ಯಗಳು
ತಮಿಳುನಾಡು, ಹಿಮಾಚಲ ಪ್ರದೇಶ, ಸೌರಾಷ್ಟ್ರ ಕೇರಳ ಮತ್ತು ಸರ್ವೀಸಸ್‌ ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ. ಕರ್ನಾಟಕ-ರಾಜಸ್ಥಾನ, ವಿದರ್ಭ-ತ್ರಿಪುರ, ಉತ್ತರಪ್ರದೇಶ-ಮಧ್ಯಪ್ರದೇಶ ತಂಡಗಳು ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿ ಆಗಲಿವೆ. ಈ ಮೂರೂ ಪಂದ್ಯಗಳು ರವಿವಾರ ಜೈಪುರದಲ್ಲಿ ನಡೆಯಲಿವೆ.

ಗಾಯಕ್ವಾಡ್‌ 4ನೇ ಶತಕ!
ಪ್ರಚಂಡ ಫಾರ್ಮ್ ಮುಂದುವರಿಸಿದ ಮಹಾರಾಷ್ಟ್ರದ ಆರಂಭಕಾರ ಹಾಗೂ ನಾಯಕ ಋತುರಾಜ್‌ ಗಾಯಕ್ವಾಡ್‌ ಕೂಟದ 4ನೇ ಶತಕ ಬಾರಿಸಿ ಮೆರೆದಾಡಿದರು. ಛತ್ತೀಸ್‌ಗಢ ವಿರುದ್ಧ 309 ರನ್‌ ಚೇಸ್‌ ಮಾಡುವ ಹಾದಿಯಲ್ಲಿ ಗಾಯಕ್ವಾಡ್‌ 132 ಎಸೆತಗಳಿಂದ 168 ರನ್‌ ಸೂರೆಗೈದರು (12 ಬೌಂಡರಿ, 6 ಸಿಕ್ಸರ್‌).

ಗಾಯಕ್ವಾಡ್‌ ವಿಜಯ್‌ ಹಜಾರೆ ಟ್ರೋಫಿ ಸರಣಿಯೊಂದರಲ್ಲಿ 4 ಶತಕ ಬಾರಿಸಿದ 4ನೇ ಆಟಗಾರ. ಉಳಿದವರೆಂದರೆ ವಿರಾಟ್‌ ಕೊಹ್ಲಿ, ಪೃಥ್ವಿ ಶಾ ಮತ್ತು ದೇವದತ್ತ ಪಡಿಕ್ಕಲ್‌.

ಗಾಯಕ್ವಾಡ್‌ ಈ ಕೂಟದಲ್ಲಿ 600 ರನ್‌ ಪೇರಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೂ ಪಾತ್ರರಾದರು. ಅವರು 150.75 ಸರಾಸರಿಯಲ್ಲಿ 603 ರನ್‌ ಪೇರಿಸಿದ್ದಾರೆ. ಕ್ರಮವಾಗಿ 136, ಅಜೇಯ 154, 124, 21 ಮತ್ತು 168 ರನ್‌ ಬಾರಿಸಿದ ಸಾಧನೆ ಗಾಯಕ್ವಾಡ್‌ ಅವರದು.

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.