ಕೊರೊನಾ ವೈರಸ್ ಕಾಟ: ವಿಶ್ವಕಪ್ ಶೂಟಿಂಗ್ನಿಂದ 6 ರಾಷ್ಟ್ರಗಳು ಹೊರಕ್ಕೆ
Team Udayavani, Feb 27, 2020, 9:49 AM IST
ನವದೆಹಲಿ: ವಿಶ್ವದಾದ್ಯಂತ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಭೀತಿಯಿಂದಾಗಿ ನವದೆಹಲಿ ಆತಿಥ್ಯದಲ್ಲಿ ಮುಂದಿನ ತಿಂಗಳು ನಡೆಯಬೇಕಿರುವ ವಿಶ್ವಕಪ್ ಶೂಟಿಂಗ್ ಕೂಟದಿಂದ ಚೀನಾ ಸೇರಿದಂತೆ ಒಟ್ಟು 6 ರಾಷ್ಟ್ರಗಳು ಹೊರಬಿದ್ದಿವೆ.
ಈ ಬಗ್ಗೆ ಭಾರತೀಯ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್ಆರ್ಎಐ) ಅಧ್ಯಕ್ಷ ರಣಿಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,” ಚೀನಾ ಶೂಟಿಂಗ್ ಕೂಟಕ್ಕೆ ಆಗಮಿಸುವುದರಿಂದ ತಾನಾಗಿಯೇ ಹಿಂದಕ್ಕೆ ಸರಿಯಿತು. ಈಗ ತೈವಾನ್, ಹಾಂಕಾಂಗ್, ಮಕಾವ್, ಉತ್ತರ ಕೊರಿಯಾ ಹಾಗೂ ತುರ್ಕ್ ಮೆನಿಸ್ತಾನ ರಾಷ್ಟ್ರಗಳು ಕೂಡ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿವೆ.
ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ಸರ್ಕಾರಗಳು ಕೊರೊನಾ ವೈರಸ್ ಭೀತಿಯಿಂದಾಗಿ ವಿದೇಶಿ ಪ್ರಯಾಣಕ್ಕೆ ಕಡಿವಾಣ ಹಾಕಿದೆ. ರಾಷ್ಟ್ರೀಯ ನಿಯಮದಡಿ ನಿರ್ಧಾರ ತೆಗೆದುಕೊಳ್ಳ ಲಾಗಿದೆ ಎಂದು ತಿಳಿಸಿದರು.
ಪಾಕ್ ಕೂಡ ಪಾಲ್ಗೊಳ್ಳಲ್ಲ: ಕೊರೊನಾ ವೈರಸ್ನಿಂದಾಗಿ 6 ರಾಷ್ಟ್ರಗಳು ಕೂಟದಿಂದ ಹಿಂದೆ ಸರಿದಿದ್ದರೆ ಪಾಕಿಸ್ತಾನ ಮಾತ್ರ ತಾನಾಗಿಯೇ ಕೂಟದಿಂದ ಹಿಂದಕ್ಕೆ ಸರಿದಿದೆ. ಮುಂಬರುವ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಅಭ್ಯಾಸ ನಡೆಸುವುದಕ್ಕಾಗಿ ಅದು ಜರ್ಮನಿಗೆ ತೆರಳಿದೆ. ಹೀಗಾಗಿ ಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ಶೂಟಿಂಗ್ ಸಂಸ್ಥೆ ಹೇಳಿಕೊಂಡಿತ್ತು.
ಕಳೆದ ವರ್ಷದ ಶೂಟಿಂಗ್ ವೇಳೆ ಪಾಕ್ಗೆ ಭಾರತದ ವೀಸಾ ನಿರಾಕರಿಸಲಾಗಿತ್ತು. ಹೀಗಾಗಿ ಮತ್ತೂಮ್ಮೆ ಭಾರತ ವೀಸಾ ನಿರಾಕರಿಸಿತೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಣಿಂದರ್ ಸಿಂಗ್, “ಕಳೆದ ವರ್ಷಕ್ಕೂ ಈ ಸಲಕ್ಕೂ ಹೋಲಿಕೆ ಬೇಡ. ಪಾಕಿಸ್ತಾನದ ಇಬ್ಬರು ಶೂಟರ್ಗಳು ಒಲಿಂಪಿಕ್ಸ್ಗೆ ಅರ್ಹತೆ ಪಡೆದು ಕೊಂಡಿದ್ದಾರೆ. ಹೀಗಾಗಿ ಈ ಕೂಟಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ಮಾ.15ರಿಂದ 25ರ ತನಕ ಕರ್ಣಿ ಸಿಂಗ್ ಶೂಟಿಂಗ್ ರೇಂಜ್ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ