World Cup: ಹ್ಯಾಟ್ರಿಕ್‌ ಹಾದಿಯಲ್ಲಿ ಹರಿಣಗಳ ಓಟ


Team Udayavani, Oct 17, 2023, 6:45 AM IST

1-wwq-ewqe

ಧರ್ಮಶಾಲಾ: ಈ ವಿಶ್ವಕಪ್‌ನಲ್ಲಿ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್‌ ಗೆಲುವಿನ ಗುರಿಯೊಂದಿಗೆ ಮಂಗಳವಾರ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಸುಂದರ ಗಿರಿಧಾಮ ಧರ್ಮಶಾಲಾದಲ್ಲಿ ಈ ಮುಖಾಮುಖಿ ಏರ್ಪಡಲಿದ್ದು, ಟೆಂಬ ಬವುಮ ಪಡೆ ತುಂಬು ಉತ್ಸಾಹದಲ್ಲಿದೆ. ಆದರೆ ಈ ಉತ್ಸಾಹಕ್ಕೆ ಮಳೆ ತಣ್ಣೀರೆರಚುವ ಸಾಧ್ಯತೆಯೂ ಇದೆ.

ಇನ್ನೊಂದೆಡೆ ಸ್ಕಾಟ್‌ ಎಡ್ವರ್ಡ್ಸ್‌ ನೇತೃತ್ವದ ನೆದರ್ಲೆಂಡ್ಸ್‌ ಎರಡರಲ್ಲೂ ಸೋಲನುಭವಿಸಿದೆ. ಸೋಮವಾರದ ಪಂದ್ಯಕ್ಕೂ ಮೊದಲು ಅಂಕಪಟ್ಟಿಯಲ್ಲಿ 5 ಬಾರಿಯ ಚಾಂಪಿಯನ್ಸ್‌ ಆಸ್ಟ್ರೇಲಿಯಕ್ಕಿಂತ ಮೇಲಿತ್ತು! ಅಫ್ಘಾನಿಸ್ಥಾನ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಹೊಡೆದುರುಳಿಸಿದಂತೆ ಡಚ್ಚರ ಪಡೆ ಹರಿಣಗಳನ್ನು ಬೆಚ್ಚಿಬೀಳಿಸೀತೇ ಎಂಬುದೊಂದು ದೂರದ ನಿರೀಕ್ಷೆ.

ಎರಡು ದೊಡ್ಡ ಗೆಲುವು
ಸದಾ “ಚೋಕರ್’ ಹಣೆಪಟ್ಟಿಯನ್ನು ಅಂಟಿಸಿಕೊಂಡೇ ಇರುವ ದಕ್ಷಿಣ ಆಫ್ರಿಕಾ ಈ ಬಾರಿ ಇದನ್ನು ಕಿತ್ತೆಸೆಯಲು ಪಣತೊಟ್ಟಂತಿದೆ. ಹರಿಣಗಳ ಆರಂಭವೇ ಅತ್ಯಂತ ಅಬ್ಬರದಿಂದ ಕೂಡಿತ್ತು. ಹೊಸದಿಲ್ಲಿಯಲ್ಲಿ ಆಡಲಾದ ಶ್ರೀಲಂಕಾ ಎದುರಿನ ಮೊದಲ ಮುಖಾಮುಖೀಯಲ್ಲಿ ದಕ್ಷಿಣ ಆಫ್ರಿಕಾ ಪೇರಿಸಿದ ರನ್‌ ಅಷ್ಟಿಷ್ಟಲ್ಲ, 5 ವಿಕೆಟಿಗೆ 428. ಇದು ವಿಶ್ವಕಪ್‌ ಇತಿಹಾಸದ ಗರಿಷ್ಠ ಮೊತ್ತವಾಗಿ ದಾಖಲಾಯಿತು. ಲಂಕಾ ಸುಲಭದಲ್ಲೇನೂ ಶರಣಾಗಲಿಲ್ಲ. ಮುನ್ನೂರರ ಗಡಿ ದಾಟಿ ಬಂದ ಲಂಕೆಯ ಸೋಲಿನ ಅಂತರ 102 ರನ್‌.

ದಕ್ಷಿಣ ಆಫ್ರಿಕಾದ ಈ ಅಬ್ಬರ ಇಲ್ಲಿಗೇ ನಿಲ್ಲಲಿಲ್ಲ. 5 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯವನ್ನೂ ಅಟ್ಟಾಡಿಸಿ ಸೋಲಿಸಿತು. ಅಂತರ ಇನ್ನೂ ಹೆಚ್ಚು, 134 ರನ್‌. ಹೀಗಿರುವಾಗ ದಕ್ಷಿಣ ಆಫ್ರಿಕಾಕ್ಕೆ ನೆದರ್ಲೆಂಡ್ಸ್‌ ಯಾವ ಲೆಕ್ಕ! ಆದರೆ ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು ಎಂಬ ಮುನ್ನೆಚ್ಚರಿಕೆ ಅಗತ್ಯ. ರವಿವಾರ ಅಫ್ಘಾನ್‌ ಪಡೆ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಹೊಡೆದು ಉರುಳಿಸಲಿಲ್ಲವೇ?! ಈ ಫ‌ಲಿತಾಂಶ ಕೂಟದ ಎಲ್ಲ ಬಲಿಷ್ಠ ತಂಡಗಳಿಗೊಂದು ಎಚ್ಚರಿಕೆಯ ಗಂಟೆ.

ಡಿ ಕಾಕ್‌ ಸತತ ಶತಕ
ಈ ಕೂಟದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಅತ್ಯಂತ ಬಲಿಷ್ಠವಾಗಿ ಗೋಚರಿಸುತ್ತದೆ. ವಿಶ್ವಕಪ್‌ ಬಳಿಕ ವಿದಾಯ ಘೋಷಿಸಲಿರುವ ಆರಂಭಕಾರ ಕ್ವಿಂಟನ್‌ ಡಿ ಕಾಕ್‌ ಅವರಂತೂ ಸತತ 2 ಶತಕ ಬಾರಿಸಿ ಸಿಂಹಸ್ವಪ್ನರಾಗಿ ಗೋಚರಿಸಿದ್ದಾರೆ. ಲಂಕಾ ವಿರುದ್ಧ 100, ಆಸ್ಟ್ರೇಲಿಯ ವಿರುದ್ಧ 109 ರನ್‌ ಹೊಡೆದ ಹೆಗ್ಗಳಿಕೆ ಈ ಆರಂಭಿಕನದ್ದು. ನೆದರ್ಲೆಂಡ್ಸ್‌ ವಿರುದ್ಧ ಶತಕಗಳ ಹ್ಯಾಟ್ರಿಕ್‌ ಸಾಧಿಸಿದರೂ ಅಚ್ಚರಿ ಇಲ್ಲ!

ಶ್ರೀಲಂಕಾ ವಿರುದ್ಧ ರಸ್ಸಿ ವಾನ್‌ ಡರ್‌ ಡುಸೆನ್‌ (108), ಐಡನ್‌ ಮಾರ್ಕ್‌ರಮ್‌ (54 ಎಸೆತಗಳಿಂದ 106) ಕೂಡ ಸೆಂಚುರಿ ಸಿಡಿಸಿದ್ದರು. ಟೆಂಬ ಬವುಮ, ಹೆನ್ರಿಕ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌ ಕೂಡ ಅಪಾಯಕಾರಿ ಬ್ಯಾಟರ್. ಬಹುಶಃ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಲಭಿಸಿದರೆ ದಕ್ಷಿಣ ಆಫ್ರಿಕಾದಿಂದ ಇನ್ನೊಂದು ಪ್ರಚಂಡ ಪ್ರದರ್ಶನವನ್ನು ನಿರೀಕ್ಷಿಸಲಡ್ಡಿಯಿಲ್ಲ.

ದಕ್ಷಿಣ ಆಫ್ರಿಕಾದ ಬೌಲಿಂಗ್‌ ಕೂಡ ಅತ್ಯಂತ ಘಾತಕ. ಶ್ರೀಲಂಕಾವೇನೋ ಎದುರಿಸಿ ನಿಂತಿತು, ಆದರೆ ಆಸ್ಟ್ರೇಲಿಯ ಸಂಪೂರ್ಣ ನೆಲಕಚ್ಚಿತು. 40.5 ಓವರ್‌ಗಳಲ್ಲಿ 177ಕ್ಕೆ ಆಲೌಟ್‌ ಆಯಿತು. ರಬಾಡ, ಎನ್‌ಗಿಡಿ, ಜಾನ್ಸೆನ್‌, ಕೇಶವ್‌ ಮಹಾರಾಜ್‌, ಶಮ್ಸಿ ಅವರನ್ನು ಎದುರಿಸಿ ನಿಲ್ಲುವುದು ನೆದರ್ಲೆಂಡ್ಸ್‌ಗೆ ಸುಲಭವಲ್ಲ.

ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ಮುಗ್ಗರಿಸಿರುವ ನೆದರ್ಲೆಂಡ್ಸ್‌ ಬಳಿಯೂ ಉತ್ತಮ ಆಟಗಾರರಿದ್ದಾರೆ. ಬಾಸ್‌ ಡಿ ಲೀಡ್‌, ಮ್ಯಾಕ್ಸ್‌ ಓ’ಡೌಡ್‌, ವಿಕ್ರಮ್‌ಜೀತ್‌ ಸಿಂಗ್‌ ಇವರಲ್ಲಿ ಪ್ರಮುಖರು. ನೋಡೋಣ… ಇವರೆಲ್ಲ ದಕ್ಷಿಣ ಆಫ್ರಿಕಾದ ಪ್ರಬಲ ಸವಾಲನ್ನು ಹೇಗೆ ಎದುರಿಸಿ ನಿಲ್ಲುತ್ತಾರೆ ಎಂದು!

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.