ಇಂಟರ್‌ನ್ಯಾಶನಲ್‌ ಕುಸ್ತಿ: ಭಜರಂಗ್‌, ಪಿಂಕಿ ಬಂಗಾರದ ಮೆರುಗು


Team Udayavani, Jul 30, 2018, 3:06 PM IST

merugu.png

ಹೊಸದಿಲ್ಲಿ: ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ “ಯಾಸರ್‌ ಡೋಗು ಇಂಟರ್‌ನ್ಯಾಶನಲ್‌ ರೆಸ್ಲಿಂಗ್‌ ಚಾಂಪಿಯನ್‌ಶಿಪ್‌’ನಲ್ಲಿ ಭಾರತ ಒಟ್ಟು 10 ಪದಕಗಳ ಸಾಧನೆಗೈದಿದೆ. ರವಿವಾರ 70 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಭಜರಂಗ್‌ ಪೂನಿಯ ಚಿನ್ನದ ಪದಕ ಗೆದ್ದು ಮೆರೆದರು. ವನಿತೆಯರ 55 ಕೆಜಿ ವಿಭಾಗದಲ್ಲಿ ಪಿಂಕಿ ಕೂಡ ಚಿನ್ನಕ್ಕೆ ಕೊರಳೊಡ್ಡಿದರು.

ಭಾರತದ 10 ಪದಕಗಳಲ್ಲಿ 3 ಪುರುಷರ ವಿಭಾಗದಲ್ಲಿ, ಉಳಿದ 7 ವನಿತಾ ವಿಭಾಗದಲ್ಲಿ ಒಲಿದು ಬಂತು. ಆದರೆ ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ನಿರಾಸೆ ಮೂಡಿಸಿದರು.

ಭಜರಂಗ್‌ಗೆ ಸತತ 2 ಬಂಗಾರ
ಈ ಸಾಧನೆಯೊಂದಿಗೆ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಭಜರಂಗ್‌ ಪೂನಿಯ ಸತತ 2 ವಿಶ್ವ ಮಟ್ಟದ ಕೂಟಗಳಲ್ಲಿ ಚಿನ್ನದ ಪದಕ ಜಯಿಸಿದಂತಾಯಿತು. ಈ ತಿಂಗಳ ಆರಂಭದಲ್ಲಿ ಜಾರ್ಜಿಯಾದಲ್ಲಿ ನಡೆದ ಟಿಬಿಲಿಸಿ ಗ್ರ್ಯಾನ್‌ಪ್ರಿ ಚಾಂಪಿಯನ್‌ಶಿಪ್‌ನಲ್ಲೂ ಅವರು ಸ್ವರ್ಣ ಸಾಧನೆಗೈದಿದ್ದರು. 

ಟರ್ಕಿ ಕೂಟದಲ್ಲಿ ಭಜರಂಗ್‌ ಅಖಾಡಕ್ಕಿಳಿಯದೆ ಬಂಗಾರದ ಪದಕವನ್ನು ಒಲಿಸಿಕೊಂಡರು. ಉಕ್ರೇನಿನ ಎದುರಾಳಿ ಆ್ಯಂಡ್ರಿ ಕ್ಯಾಟ್ಕೊàವ್‌ಸ್ಕಿ ಗಾಯಾಳಾಗಿ ಹಿಂದೆ ಸರಿದುದರಿಂದ ಭಾರತೀಯನಿಗೆ ಸುಲಭದಲ್ಲಿ ಚಿನ್ನ ಸಿಕ್ಕಿತು. 

61 ಕೆಜಿ ವಿಭಾಗದಲ್ಲಿ ಸಂದೀಪ್‌ ತೋಮರ್‌ಕೂಡ ಭರವಸೆ ಮೂಡಿಸಿದ್ದರು. ಆದರೆ ಫೈನಲ್‌ನಲ್ಲಿ ಅವರು ಇರಾನ್‌ನ ಮೊಹಮ್ಮದಾºಗರ್‌ ಯಾಕೇಶಿ ವಿರುದ್ಧ 2-8ರಿಂದ ಸೋತು ಬೆಳ್ಳಿಗೆ ಸಮಾಧಾನಪಡಬೇಕಾಯಿತು. ಶನಿವಾರ 57 ಕೆಜಿ ವಿಭಾಗದಲ್ಲಿ ವಿಕ್ಕಿ ಕಂಚಿನ ಪದಕ ಗೆದ್ದಿದ್ದರು. ಆದರೆ ಅಮಿತ್‌ (65 ಕೆಜಿ), ಜೀತೆಂದ್ರ (74 ಕೆಜಿ), ಪವನ್‌ (86 ಕೆಜಿ), ದೀಪಕ್‌ (92 ಕೆಜಿ), ಜಶ್ಕವಾರ್‌ ಸಿಂಗ್‌ (97 ಮತ್ತು 125 ಕೆಜಿ) ಪದಕ ಸುತ್ತು ತಲುಪುವಲ್ಲಿ ವಿಫ‌ಲರಾದರು.

ಸಾಕ್ಷಿ ವಿಫ‌ಲ
ರಿಯೋ ಸಾಧನೆಯ ಬಳಿಕ ಮೊದಲ ಸಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದ ಸಾಕ್ಷಿ ಮಲಿಕ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು. 

ಸಂಗೀತಾ ಪೋಗಟ್‌ (59 ಕೆಜಿ) ಮತ್ತು ಗೀತಾ (65 ಕೆಜಿ) ಕಂಚಿನ ಪದಕ ಗೆದ್ದರು. ಪೂಜಾ ಮತ್ತು ಪಿಂಕಿ ಭಾರತದ ಏಶ್ಯಾಡ್‌ ಕುಸ್ತಿ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಸಾಕ್ಷಿ ಮತ್ತು ಕಿರಣ್‌ ಕೂಡ ಈ ತಂಡದಲ್ಲಿದ್ದಾರೆ.

ಕೈಜಾರಿದ ಅವಳಿ ಚಿನ್ನ
ರವಿವಾರ ವನಿತೆಯರ ವಿಭಾಗದಲ್ಲಿ ಭಾರತಕ್ಕೆ ಇನ್ನೂ 2 ಚಿನ್ನದ ಪದಕಗಳ ಅವಕಾಶ ತೆರೆದಿತ್ತು. ಆದರೆ 53 ಕೆಜಿ ಹಾಗೂ 57 ಕೆಜಿ ವಿಭಾಗಗಳಲ್ಲಿ ಸೀಮಾ ಮತ್ತು ಕಾಮನ್ವೆಲ್ತ್‌ ಗೇಮ್ಸ್‌ ರಜತ ಪದಕ ವಿಜೇತೆ ಪೂಜಾ ದಂಡಾ ಫೈನಲ್‌ನಲ್ಲಿ ಎಡವಿದರು. 62 ಕೆಜಿ ವಿಭಾಗದಲ್ಲಿ  ಸರಿತಾ ಕಂಚಿನ ಪದಕ ಜಯಿಸಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.