2 ಲಕ್ಷ ಗೋವುಗಳಿಗೆ ಬೇಕು ಗೋಶಾಲೆ!
ನಿರ್ವಹಣೆಗಾಗಿ ಆಯೋಗ ರಚನೆಗೆ ಸರಕಾರ ನಿರ್ಧಾರ
Team Udayavani, Dec 31, 2020, 6:15 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ವಾರ್ಷಿಕ 2 ಲಕ್ಷಕ್ಕೂ ಹೆಚ್ಚು ಗೋವುಗಳ ರಕ್ಷಣೆಯಾಗಲಿದೆ. ಪ್ರತೀ ತಿಂಗಳು ಮಾಂಸಕ್ಕಾಗಿ ಸುಮಾರು 20 ಸಾವಿರ ಗೋವುಗಳ ವಧೆ ತಪ್ಪಲಿದೆ.
ಗೋವುಗಳ ರಕ್ಷಣೆಗಾಗಿ ಸುಮಾರು 500 ಕೋಟಿ ರೂ. ಅಗತ್ಯವಿದ್ದು, ವಿಶೇಷ ಅನುದಾನವನ್ನು ಬಜೆಟ್ನಲ್ಲಿ ಮೀಸಲಿಡುವಂತೆ ಪಶುಸಂಗೋಪನ ಇಲಾಖೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆಯು ಈ ಸಂಬಂಧಿ ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ ದೊರೆತ ತತ್ಕ್ಷಣ ಕಾಯ್ದೆ ಜಾರಿಯಾಗಲಿದೆ. ಪ್ರಸ್ತುತದಲ್ಲಿ ಸರಕಾರ ಗೋಶಾಲೆ ನಡೆಸುತ್ತಿಲ್ಲ. ಆದರೆ ಖಾಸಗಿಯವರು ನಡೆಸುವ ಗೋಶಾಲೆಗಳಿಗೆ ಪ್ರತೀ ವರ್ಷ 4 ಕೋಟಿ ರೂ. ನೀಡುತ್ತಿದೆ.
ಪ್ರತೀ ತಿಂಗಳು 20 ಸಾವಿರ ಗೋವಧೆ
ರಾಜ್ಯದಲ್ಲಿ ಪ್ರತೀ ತಿಂಗಳು ಸುಮಾರು 20 ಸಾವಿರ ಗೋವುಗಳ ವಧೆಯಾಗುತ್ತಿದೆ. ಕಾಯ್ದೆ ಜಾರಿಯಾದ ಬಳಿಕ ಇವುಗಳ ರಕ್ಷಣೆಯ ಹೊರೆ ಸರಕಾರದ ಮೇಲೆ ಬೀಳಲಿದೆ. ಇದಕ್ಕಾಗಿ ಸೂಕ್ತ ಯೋಜನೆ ರೂಪಿಸಲು ಮುಂದಾಗಿರುವ ಸರಕಾರ, ಖಾಸಗಿ ಸಂಘ ಸಂಸ್ಥೆಗಳ ಸಹಕಾರ ಪಡೆಯುವ ಚಿಂತನೆ ನಡೆಸಿದೆ.
ನಿರಾಕರಿಸುವಂತಿಲ್ಲ
ಸರಕಾರದ ಅನುದಾನ ಪಡೆದು ನಡೆಸುವ ಗೋಶಾಲೆಗಳ ನಿರ್ವಹಣೆಗೆ ತಿದ್ದುಪಡಿ ಕಾಯ್ದೆಯ ಪ್ರಕಾರ ಕೆಲವು ನಿಯಮಗಳನ್ನು ರೂಪಿಸಲು ಪಶು ಸಂಗೋಪನ ಇಲಾಖೆ ನಿರ್ಧರಿಸಿದ್ದು, ಯಾರೇ ಗೋವುಗಳನ್ನು ತಂದು ಬಿಟ್ಟರೂ ಅವುಗಳನ್ನು ಪಡೆದುಕೊಳ್ಳಲು ನಿರಾಕರಿಸುವಂತಿಲ್ಲ ಎಂಬ ನಿಬಂಧನೆ ಹೇರಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಸೇವಾ ಆಯೋಗ ರಚನೆ
ಗೋಶಾಲೆಗಳ ನಿರ್ವಹಣೆಗಾಗಿಯೇ ಗೋಸೇವಾ ಆಯೋಗ ರಚನೆಗೆ ಸರಕಾರ ನಿರ್ಧಾರ ಮಾಡಿದೆ.
6,390 ಕೋ.ರೂ. ವಾರ್ಷಿಕ ಒಟ್ಟು ಅನುದಾನ
2.44 ಕೋ.ರೂ. ಮೀಸಲು ಅನುದಾನ
ಪ್ರತೀ ಹಸುವಿಗೆ ದಿನದ ವೆಚ್ಚ 70 ರೂ.
ಸರಕಾರದ ಅನುದಾನ 17.50 ರೂ.
1.66 ಕೋಟಿ ರೂ. ಈಗಾಗಲೇ ನೀಡಿದ್ದು
50ರಿಂದ 200 1 ಗೋಶಾಲೆಯಲ್ಲಿ ಹಸುಗಳು
3ರಿಂದ 12 ಲಕ್ಷ ರೂ. ಒಂದು ಗೋಶಾಲೆಗೆ ವಾರ್ಷಿಕ ನೆರವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್