ವಿಜಯಪುರದಲ್ಲಿ 4 ದೂರು ದಾಖಲು
Team Udayavani, Jun 17, 2019, 3:00 AM IST
ವಿಜಯಪುರ: ಬೆಂಗಳೂರಿನ ಐಎಂಎ ಸಂಸ್ಥಾಪಕ ಮಹ್ಮದ್ ಮನ್ಸೂರ ಖಾನ್ ವಿರುದ್ಧ ಜಿಲ್ಲೆಯಲ್ಲೂ ದೂರು ದಾಖಲಾಗುತ್ತಿದೆ. ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, 20 ಲಕ್ಷ ರೂ.ಹೂಡಿಕೆ ಮಾಡಿ ವಂಚನೆಗೊಳಗಾಗಿರುವ 4 ಜನರು ದೂರು ದಾಖಲಿಸಿದ್ದಾರೆ.
2 ಲಕ್ಷ ರೂ.ಹೂಡಿಕೆ ಮಾಡಿರುವ ಬಡಿಕಮಾನ್ ಪ್ರದೇಶ ನಿವಾಸಿ ಚಾಲಕ ಮೆಹಬೂಬ್ ಮುರ್ತುಜಸಾಬ್ ಕುಂಟೋಜಿ, 4 ಲಕ್ಷ ರೂ. ಹೂಡಿಕೆ ಮಾಡಿರುವ ಮುರ್ತುಜಾ ಪತ್ತನಿ ಕೌಸರಬಾನು ನರಗದ ಗಾಂಧಿಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
2017ರ ಡಿಸೆಂಬರ್ 11ರಂದು ಹೂಡಿಕೆ ಮಾಡಿದ್ದ ಹಣಕ್ಕೆ ಪ್ರತಿ ತಿಂಗಳು 4 ಸಾವಿರ ರೂ.ಲಾಭಾಂಶ ನೀಡಿದ್ದು, ಕಳೆದ ಎರಡು ತಿಂಗಳಿಂದ ಲಾಭಾಂಶ ನೀಡದೆ ವಂಚಿಸಿ ಮೋಸ ಮಾಡಲಾಗಿದೆ ಎಂದು ದೂರಿದ್ದಾರೆ.
ನಗರದ ಸೈಯದ್ ಮುಕ್ತಾರ ಮೊಹ್ಮದ್ ಜಾಗೀರದಾರ ಎಂಬುವರು 8 ಲಕ್ಷ ರೂ.ಹಾಗೂ ಅವರ ಪತ್ನಿ ಸಯೀದಾಸಲ್ಮಾ ಎಂಬುವರು 6 ಲಕ್ಷ ರೂ.ಹಣ ಹೂಡಿಕೆ ಮಾಡಿದ್ದು, ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…