ಆನ್‌ಲೈನ್‌ ಶಿಕ್ಷಣದಲ್ಲೂ ಕ್ರಿಯಾತ್ಮಕ, ಸೃಜನಶೀಲ ಬೋಧನೆ ಸಾಧ್ಯ

ಒತ್ತಡ ನಿರ್ವಹಣೆ ಹೇಗೆ? ಪರಿಣತರ ಸಲಹೆ

Team Udayavani, Oct 23, 2020, 5:30 AM IST

OnlineClass

ಸಾಂದರ್ಭಿಕ ಚಿತ್ರ

ಆನ್‌ಲೈನ್‌ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು. ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್‌ಲೈನ್‌ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಶೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತುಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್‌ ಮಾಡಿ. 7618774529

ಆನ್‌ಲೈನ್‌ ಶಿಕ್ಷಣವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದೇವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಒಪ್ಪುತ್ತಿಲ್ಲ, ಒಂದು ವೇಳೆ ಶಾಲೆ ತೆರೆದರೂ ಸೋಂಕು ಹರಡುವಿಕೆಯ ವೇಗ ನೋಡಿದಾಗ ಮಕ್ಕಳ ಭವಿಷ್ಯದ ಬಗ್ಗೆ ಆತಂಕವಾಗುವುದು ಸಹಜ. ಈ ನಡುವೆ ಮಕ್ಕಳ ಶಾಲಾ ಚಟುವಟಿಕೆ ಸ್ಥಗಿತಗೊಳ್ಳಬಾರದು ಎಂಬ ಕಾರಣದಿಂದ ಶಿಕ್ಷಣವನ್ನು ಸರಿದೂಗಿಸಿಕೊಳ್ಳುವ ದಾರಿಯಾಗಿ ಆನ್‌ಲೈನ್‌ ಶಿಕ್ಷಣವನ್ನು ಉಪಕ್ರಮವಾಗಿಸಿಕೊಳ್ಳಲಾಗಿದೆ. ಹೆಚ್ಚೆಂದರೆ ಒಂದೆರಡು ತಿಂಗಳು ಮುಂದುವರಿಯಬೇಕಿದ್ದ ಆನ್‌ಲೈನ್‌ ಶಿಕ್ಷಣ ಐದಾರು ತಿಂಗಳುಗಳಿಂದ ನಡೆದುಕೊಂಡು ಬರುತ್ತಿದೆ. ಹಾಗಾದರೆ ಶಿಕ್ಷಣದ ನಿರಂತರತೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಆನ್‌ಲೈನ್‌ ಶಿಕ್ಷಣ
ತೊಡಕಾಗಬಲ್ಲದೇ? ಈ ಕುರಿತು ಶಿಕ್ಷಣ ತಜ್ಞ ಪ್ರೊ| ಎ. ಎಂ. ನರಹರಿ ವಿವರಿಸಿದ್ದಾರೆ.

ಹೆತ್ತವರು, ಶಿಕ್ಷಕರು ಏನು ಮಾಡಬಹುದು?
ಮಕ್ಕಳಿಗೆ ಬರೀ ಪಾಠ ಮಾತ್ರವಲ್ಲ, ಕೇಳುವಂತಹ ಪಾಠ ಬೇಕು. ಅದಕ್ಕಾಗಿ ಆ್ಯಕ್ಟಿವಿಟಿ ಆಧಾರಿತ ಬೋಧನೆ, ಸೃಜನಶೀಲ ಬೋಧನೆ ಮತ್ತು ಪ್ರಾಯೋಗಿಕ ಬೋಧನೆ ಅಗತ್ಯ. ಲಭ್ಯ ತಾಂತ್ರಿಕತೆಯಡಿ ಈ ಮಾದರಿಯ ಶಿಕ್ಷಣಕ್ಕೆ ಕೆಲವು ಕಡೆ ಒತ್ತು ನೀಡುತ್ತಿದ್ದಾರೆ. ಪ್ರತಿ ಮಗುವಿಗೂ ಈ ಮಾದರಿಯ ಶಿಕ್ಷಣ ತಲುಪಲು ಸಾಧ್ಯವೇ ಎಂಬ ಬಗ್ಗೆ ಶಿಕ್ಷಕರು ಪ್ರಯತ್ನಿಸಬಹುದು.

ಮಕ್ಕಳಿಗೆ ಆನ್‌ಲೈನ್‌ನಲ್ಲೇ ಪಿಪಿಟಿ, ವರ್ಚುವಲ್‌ ಲ್ಯಾಬ್‌ಗಳನ್ನು ತೋರಿಸಿ ಅಲ್ಲಿಯ ಪ್ರಾಯೋಗಿಕ ಕಲಿಕೆಗಳ ಬಗ್ಗೆ ವಿವರಿಸಬಹುದು. ಆನ್‌ಲೈನ್‌ನಲ್ಲಿ ಕೇವಲ ಹೇಳುವುದಕ್ಕಿಂತ ಈ ರೀತಿಯ ಪ್ರಯೋಗಗಳು ಸ್ವಲ್ಪವಾದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು.

ಪುಟಾಣಿ ಮಕ್ಕಳಿಗೆ ಆನ್‌ಲೈನ್‌ ಹೊರತಾಗಿಯೂ ಶಿಕ್ಷಣದ ನಿರಂತರತೆ ಕಾಯ್ದುಕೊಳ್ಳಲು ಮನೆಯಲ್ಲೇ ಚಟುವಟಿಕೆಗಳನ್ನು ನೀಡುವುದು, ಚಿತ್ರ ಬಿಡಿಸಲು ಹೇಳುವುದು ಮೊದಲಾದವುಗಳನ್ನು ಪೋಷಕರು ಮಾಡುತ್ತಿರಬೇಕು. ಕೆಲವೆಡೆ ಈ ರೀತಿಯ ಚಟುವಟಿಕೆಗಳು ಮಕ್ಕಳನ್ನು ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡಿದೆ.

ನಿರಂತರತೆಗೆ ತೊಡಕು
ಮಕ್ಕಳ ಶೈಕ್ಷಣಿಕ ಚಟುವಟಿಕೆ ಮುಂದುವರಿಸಲು ಬೇರೆ ಯಾವ ಮಾರ್ಗವೂ ಇಲ್ಲದಿದ್ದಾಗ ಆನ್‌ಲೈನ್‌ ಶಿಕ್ಷಣ ಅನಿವಾರ್ಯವಾಯಿತು. ಇಲ್ಲಿ ಯಾರನ್ನೂ ದೂರುವ ಹಾಗಿಲ್ಲ, ಏಕೆಂದರೆ ಇದು ಸಂದರ್ಭದ ಅನಿವಾರ್ಯತೆ. ಆದರೆ ಖಂಡಿತವಾಗಿಯೂ ಆನ್‌ಲೈನ್‌ ಶಿಕ್ಷಣದಿಂದ ಶಿಕ್ಷಣದ ನಿರಂತರತೆ ಹೋಗುತ್ತದೆ. ಏಕೆಂದರೆ ಒಂದು ಶಿಕ್ಷಣ ವ್ಯವಸ್ಥೆಯಿಂದ ಇನ್ನೊಂದಕ್ಕೆ ಅದರಲ್ಲೂ ತಾಂತ್ರಿಕವಾಗಿರುವ ಶಿಕ್ಷಣಕ್ಕೆ ಒಗ್ಗಿಕೊಳ್ಳುವ ಮುನ್ನ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಇಲ್ಲಿ ತತ್‌ಕ್ಷಣದ ಅಗತ್ಯಕ್ಕಾಗಿ ಅಂತಹ ತಯಾರಿ ಸಾಧ್ಯವಾಗಿಲ್ಲ. ತಾಂತ್ರಿಕತೆ, ಉಪಕರಣಗಳೂ ಸರಿಯಾಗಿಲ್ಲ ಎಂದಾಗ ಶಿಕ್ಷಣದ ಮೇಲೆ ತೊಡಕು ಸಾಮಾನ್ಯ.

ಗ್ರಾಮೀಣ ಭಾಗದಲ್ಲಿ ಇವತ್ತಿಗೂ ನೆಟ್‌ವರ್ಕ್‌
ಇಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿನ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಯಾಂತ್ರಿಕವಾಗಿದೆ. ಆದರೆ ಗ್ರಾಮ್ಯ ಮಕ್ಕಳಿಗೆ ಇನ್ನೂ ಈ ರೀತಿಯ ಶಿಕ್ಷಣ ತಲುಪಿಲ್ಲ. ಹೀಗಾಗಿ ಅವರು ಶಿಕ್ಷಣದ ನಿರಂತರ ಪ್ರಕ್ರಿಯೆಯಿಂದ ಹಿಂದುಳಿಯುವಂತಾಗಿದೆ.

ಆನ್‌ಲೈನ್‌ ಶಿಕ್ಷಣ ಉಪಯೋಗವಾಗುವುದು ಅಡ್ವಾನ್ಸ್‌ಡ್‌ ಹಂತದಲ್ಲಿ ಮಾತ್ರ. ಅಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿರುವುದರಿಂದ ಅವರನ್ನು ತಲುಪುವುದಕ್ಕೆ ಅಷ್ಟೇನು ಪ್ರಯಾಸ ಇಲ್ಲ. ಆದರೆ ಪ್ರಾಥಮಿಕದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗೆ ಸಮೂಹ ಶಿಕ್ಷಣ. ಇಲ್ಲಿ ಮಕ್ಕಳ ಶಿಕ್ಷಣ ಬದುಕಿಗೆ ಆನ್‌ಲೈನ್‌ ಅನಿವಾರ್ಯದ ಬೆಸುಗೆಯಾಗಿಬಿಟ್ಟಿದೆಯಷ್ಟೇ.

ಪಾಠಕ್ಕೆ ಭಾವ ತುಂಬಲಾಗುವುದಿಲ್ಲ
ಆನ್‌ಲೈನ್‌ ಶಿಕ್ಷಣ ಅನಿವಾರ್ಯವಾಗಿ ಒಪ್ಪಿಕೊಂಡದ್ದಾಗಿದೆ. ಇದರಿಂದ ಶಿಕ್ಷಣದ ನಿರಂತರತೆಗೆ ಖಂಡಿತ ತೊಡಕಾಗುತ್ತದೆ. ಇಲ್ಲಿ ಪಾಠ ಕೇವಲ ಯಾಂತ್ರಿಕವಷ್ಟೇ, ಭಾವ ತುಂಬಲಾಗುವುದಿಲ್ಲ. ಮಕ್ಕಳು-ಶಿಕ್ಷಕರು ಎದುರೆದುರು ಇದ್ದು ಕಲಿತಾಗ ಮಾತ್ರ ಆ ಶಿಕ್ಷಣ ಅರ್ಥಪೂರ್ಣವಾಗುತ್ತದೆ.
– ಪ್ರೊ| ಎ. ಎಂ. ನರಹರಿ, ಶಿಕ್ಷಣ ತಜ್ಞ, ಮಂಗಳೂರು

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.