ರಾಣಿ ಅಂದು ನೆಟ್ಟಿದ್ದ ಗಿಡವೀಗ ನೂರಡಿ ಎತ್ತರ !


Team Udayavani, Sep 10, 2022, 7:00 AM IST

thumb-4

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿಗೆ 1961ರಲ್ಲಿ ಆಗಮಿಸಿದ್ದ ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಅವರು ಲಾಲ್‌ಬಾಗ್‌ ಸಸ್ಯತೋಟದಲ್ಲಿ ಗಿಡ ನೆಟ್ಟಿದ್ದರು. ಅದೀಗ ಬರೋಬ್ಬರಿ 100 ಅಡಿ ಎತ್ತರಕ್ಕೆ ಬೆಳೆದಿದೆ !

ಹೌದು, ಬೆಂಗಳೂರಿಗೆ ಆಗಮಿಸಿದ್ದ ರಾಣಿಯನ್ನು ವಿಮಾನ ನಿಲ್ದಾಣದಲ್ಲಿ ಮೈಸೂರಿನ ಮಹಾರಾಜ ಹಾಗೂ ಆಗಿನ ಕರ್ನಾಟಕದ ಮೊದಲ ಗವರ್ನರ್‌ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರು ಸ್ವಾಗತಿಸಿ, ಸಸ್ಯತೋಟ ಲಾಲ್‌ಬಾಗ್‌ಗೂ ಕರೆತಂದಿದ್ದರು. ಆಗ ರಾಣಿ ಗಾಜಿನ ಮನೆ ಮುಂಭಾಗದ ಸಂಕನ್‌ ಗಾರ್ಡನ್‌ ಬಳಿ ಅರಕೇರಿಯಾ ಕುಕ್‌ಪೈನ್‌ ಎಂಬ ಸಸಿಯನ್ನು ನೆಟ್ಟಿದ್ದರು. ಇದಕ್ಕೆ ಕ್ರಿಸ್ಮಸ್‌ ಮರ ಎಂದೂ ಹೆಸರಿದೆ.

ಎಲಿಜಬೆತ್‌ ನೆಟ್ಟಿದ್ದ ಗಿಡ ಈಗ ಸುಮಾರು 100 ಅಡಿ ಎತ್ತರ ಬೆಳೆದಿದ್ದು, 5 ಅಡಿ ಸುತ್ತಳತೆ ಹೊಂದಿದೆ. ಇನ್ನೂ 50 ವರ್ಷಗಳ ಕಾಲ ಬದುಕಬಹುದು 100 ಅಡಿ ಎತ್ತರ ಬೆಳೆಯಬಹುದಂತೆ. ಯುಗೋಸ್ಲೇವಿಯಾ ಅಧ್ಯಕ್ಷ ಮಾರ್ಷಲ್‌ ಟಿಟೋ, ಯುಎನ್‌ ಸೆಕ್ರೆಟರಿ ಜನರಲ್‌ ಡ್ಯಾಗ್‌ ಯಮರ್ಸ್‌ಜೋನ್‌, ನೇಪಾಲದ ಕಿಂಗ್‌ ಬೀರೇಂದ್ರ ಮತ್ತಿತರರೂ ಇಲ್ಲಿ ಸಸಿ ನೆಟ್ಟಿದ್ದರು. ಗಡಿನಾಡ ಗಾಂಧಿ ಖಾನ್‌ ಅಬ್ದುಲ್‌ ಗಫಾರ್‌ ಖಾನ್‌ ಅವರು ರಾಣಿ ನೆಟ್ಟ ಗಿಡದ ಪಕ್ಕದಲ್ಲೇ, ಅದೇ ಜಾತಿಯ ಸಸಿ ನೆಟ್ಟಿದ್ದರು. ಪಂಡಿತ್‌ ಜವಾಹರಲಾಲ್‌ ನೆಹರೂ ಸಹ ಗಾಜಿನ ಮನೆಯ ಮುಂಭಾಗ ಪ್ರೈಡ್‌ ಆಫ್ ಇಂಡಿಯಾ ಎಂಬ ಸಸಿ ನೆಟ್ಟಿದ್ದರು. ಮೊದಲ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ್‌ ಸಂಪಿಗೆ ಸಸಿ, ಇಂದಿರಾ ಗಾಂಧಿ ಅವರು ಅಶೋಕ ಸಸಿಯನ್ನು ನೆಟ್ಟಿದ್ದರು.

ಕೊಹಿನೂರು ವಜ್ರದ ಒಡತಿ
ಅತ್ಯದ್ಭುತ “ಬೆಳಕಿನ ಶಿಖರ’ ಎನಿಸಿಕೊಳ್ಳುವ ವಿಶ್ವವಿಖ್ಯಾತ ವಜ್ರ “ಕೊಹಿನೂರ್‌’ನ ಒಡತಿಯಾಗಿದ್ದವರು 2 ನೇ ಎಲಿಜಬೆತ್‌. ಈ ಕಿರೀಟ ಮುಂದಿನ ರಾಜ 3ನೇ ಚಾರ್ಲ್ಸ್‌ ಅವರ ಪತ್ನಿ ಕ್ಯಾಮಿಲ್ಲಾ ಅವರ ಮುಡಿಗೇರಲಿದೆ. ಈ ಕಿರೀಟದಲ್ಲಿ ಕೊಹಿನೂರ್‌ ಸೇರಿ 2,800 ವಜ್ರಗಳಿವೆ. ಕ್ಯಾಮಿಲ್ಲಾ ಅವರು ಚಾರ್ಲ್ಸ್‌ನ 2ನೇ ಪತ್ನಿಯಾಗಿರುವ ಕಾರಣ, ಅವರಿಗೆ ಕಿರೀಟ ದಕ್ಕುತ್ತದೆಯೇ ಎಂಬ ಸಂಶಯವಿತ್ತು. ಆದರೆ, “ನನ್ನ ಬಳಿಕ ಕ್ಯಾಮಿಲ್ಲಾ ಅದರ ಒಡತಿ’ ಎಂದು ರಾಣಿ ಎಲಿಜಬೆತ್‌ ಘೋಷಿಸಿ ವಿವಾದಕ್ಕೆ ತೆರೆಎಳೆದಿದ್ದರು. ಕೊಹಿನೂರ್‌ ವಜ್ರವು 14ನೇ ಶತಮಾನದಲ್ಲಿ ಭಾರತದ ಗೋಲ್ಕೊಂಡಾ ಗಣಿಯಲ್ಲಿ ಸಿಕ್ಕಿತ್ತು. 1849ರಲ್ಲಿ ಆಂಗ್ಲೋ ಸಿಖ್‌ ಯುದ್ಧದಲ್ಲಿ ಸೋತ ಮಹಾರಾಜ ದುಲೀಪ್‌ ಸಿಂಗ್‌ ಇದನ್ನು ಬ್ರಿಟಿಷರಿಗೆ ಒಪ್ಪಿಸಿದ್ದರು. ಈ ವಜ್ರವು 186 ಕ್ಯಾರೆಟ್‌ನಷ್ಟು ಶುದ್ಧತೆ ಹೊಂದಿತ್ತು.

ನಾಳೆ ಶೋಕಾಚರಣೆ
ಎಲಿಜಬೆತ್‌ ಅವರ ಗೌರವಾರ್ಥ ಭಾರತವು ರವಿವಾರ (ಸೆ.11) ಒಂದು ದಿನದ ಶೋಕಾಚರಣೆ ಘೋಷಿಸಿದೆ. ಎಲ್ಲ ಸರಕಾರಿ ಕಚೇರಿಗಳು ಸೇರಿದಂತೆ ರಾಷ್ಟ್ರಧ್ವಜ ಹಾರುತ್ತಿರುವಂಥ ಕಟ್ಟಡಗಳಲ್ಲಿ ಅರ್ಧಕ್ಕೆ ಧ್ವಜವನ್ನು ಹಾರಿಸ ಲಾಗುವುದು’ ಎಂದು ಸರಕಾರ ಹೇಳಿದೆ.

ಚಾರ್ಲ್ಸ್‌ “ರಾಜ’;ಇಂದು ಅಧಿಕೃತ ಘೋಷಣೆ
ಬ್ರಿಟನ್‌ನ ಹೊಸ ರಾಜ 3ನೇ ಚಾರ್ಲ್ಸ್‌ ಅವರು ಶುಕ್ರವಾರ ಸ್ಕಾಟ್ಲೆಂಡ್‌ನಿಂದ ಲಂಡನ್‌ಗೆ ವಾಪಸಾಗಿದ್ದಾರೆ. ಶನಿವಾರ ಯು.ಕೆ.ಯ ಆ್ಯಕ್ಸೆಷನ್‌ ಕೌನ್ಸಿಲ್‌ ಸಭೆ ಸೇರಿ 3ನೇ ಚಾರ್ಲ್ಸ್‌ರನ್ನು ಅಧಿಕೃತವಾಗಿ ರಾಜ ಎಂದು ಘೋಷಿಸಲಿದೆ.

 

 

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.