ಮೇಕೆದಾಟು ವಿಚಾರದಲ್ಲಿ ಬಿಜೆಪಿ ಸಂಸದರು ಒಂದಾಗಿದ್ದೇವೆ: ಡಿ.ವಿ.ಸದಾನಂದ ಗೌಡ
Team Udayavani, Aug 7, 2021, 12:47 PM IST
ಬೆಂಗಳೂರು: ಮೇಕದಾಟು ಯೋಜನೆ ವಿಚಾರದಲ್ಲಿ ರಾಜ್ಯದ 25 ಸಂಸದರು ಒಂದಾಗಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ಹೇಳಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ಕುಡಿಯುವ ನೀರಿನ ಹಕ್ಕು ನಮ್ಮದು ಅದನ್ನು ಪಡೆದೇ ಪಡೆಯುತ್ತೇವೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅವರಿಗೆ ಹಂಚಿಕೆಯಾಗುವ ನೀರಿನಲ್ಲೂ ವ್ಯತ್ಯಾಸವಾಗುವುದಿಲ್ಲ. ಈ ವಿಚಾರವಾಗಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಮನವೊಲಿಸುವ ಕಾರ್ಯ ಮಾಡುತ್ತೇವೆ. ಸದ್ಯ ಪ್ರಕರಣವು ಕಾವೇರಿ ನದಿನೀರು ನಿರ್ವಹಣಾ ಮಂಡಳಿ ಮುಂದಿರುವುದರಿಂದ ಅಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸಲಿದ್ದೆವೆ ಎಂದು ಹೇಳಿದರು.
ಇದನ್ನೂ ಓದಿ:‘ಜನತಾ ಪರಿವಾರ ಸರ್ಕಾರ’ದ ಛಾಯೆ ಕಳೆಯಲು ಸಂಘ ಹಿನ್ನೆಲೆಯವರಿಗೆ ಬಂಪರ್: ಏನಿದು ಲೆಕ್ಕಾಚಾರ?
ಕಾಂಗ್ರೆಸ್ ಅಡ್ಡಪಡಿಸುತ್ತಿದೆ: ಕಾಂಗ್ರೆಸ್ ವಿನಾಕಾರಣ ಸಂಸತ್ ಕಲಾಪಕ್ಕೆ ಅಡ್ಡಿ ಪಡಿಸುತ್ತಿದೆ. ದೇಶದ ಅಭಿವೃದ್ಧಿ ಸಮಗ್ರತೆಗೆ ಪೂರಕವಾದ ಯೋಜನೆ ಹಾಗೂ ಕಾಯ್ದೆಗಳ ಅನುಷ್ಠಾನ ಕಾಂಗ್ರೆಸ್ ಇಷ್ಟವಿಲ್ಲ. ಹೀಗಾಗಿ ಕಲಾಪ ನಡೆಯದಂತೆ ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಮುಂದೆ ಇನ್ನಷ್ಟು ದೊಡ್ಡ ನಷ್ಟ ಅನುಭವಿಸಲಿದೆ ಎಂದರು.
ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಇದ್ದರು.