ಆನಂದ ಸಿಂಗ್-ಭೀಮಾ ನಾಯ್ಕ್ ನಡುವಿನ ಆಂತರಿಕ ತಿಕ್ಕಾಟ ಬಹಿರಂಗ
Team Udayavani, Jan 21, 2019, 12:53 AM IST
ಬಳ್ಳಾರಿ: ಆನಂದ ಸಿಂಗ್ ಮತ್ತು ಭೀಮಾ ನಾಯ್ಕ ನಡುವಿನ ತಿಕ್ಕಾಟ ಶನಿವಾರ ತಡರಾತ್ರಿ ನಡೆದ ಜಗಳದಿಂದ ಬಹಿರಂಗಗೊಂಡಿದೆ. ಜೆ.ಎನ್. ಗಣೇಶ್ ಮಧ್ಯಪ್ರವೇಶ ಪ್ರಕರಣಕ್ಕೆ ರಾಜಕೀಯ ಲೇಪ ನೀಡಿದೆ.
ಹಗರಿಬೊಮ್ಮನಹಳ್ಳಿ ವ್ಯಾಪ್ತಿಯ ಖಾಸಗಿ ಕೈಗಾರಿಕೆ ಯೊಂದರ ವಿಷಯಕ್ಕೆ ಸಂಬಂಧಿ ಸಿದಂತೆ ಭೀಮಾ ನಾಯ್ಕ ಮತ್ತು ಆನಂದ ಸಿಂಗ್ ನಡುವಿನ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಈ ಕಂಪೆನಿಯವರ ವಿದ್ಯುತ್ ಸಂಪರ್ಕವನ್ನು ಶಾಸಕ ಭೀಮಾ ನಾಯ್ಕ ಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳ ಮೇಲೆ ಒತ್ತಡ ಹೇರಿ ಕಡಿತಗೊಳಿಸಿ ದ್ದರು. ಆದರೆ ಕಂಪೆನಿ ಪರವಾಗಿ ಶಾಸಕ ಸಿಂಗ್, ಭೀಮಾ ನಾಯ್ಕ ಮನವೊಲಿಸಲು ಯತ್ನಿಸಿದ್ದರು. ಹೊಂದಾಣಿಕೆ ಯಾಗದ ಕಾರಣ ತಿಕ್ಕಾಟ ಮುಂದುವರಿದಿತ್ತು.
ಕೆಲವೇ ದಿನಗಳಲ್ಲಿ ಆನಂದ ಸಿಂಗ್, ಹಗರಿಬೊಮ್ಮನ ಹಳ್ಳಿಯಲ್ಲಿ “ಆನಂದ ಸಿಂಗ್ ಅಭಿಮಾನಿಗಳ ಬಳಗ’ ಹುಟ್ಟು ಹಾಕಿದ್ದರು. ಅದರ ಕಚೇರಿಯನ್ನು ಸ್ವತಃ ಉದ್ಘಾಟಿಸಿದ್ದರು. ಭೀಮಾ ನಾಯ್ಕ ವಿರೋಧಕ್ಕೆ ಕ್ಯಾರೇ ಎಂದಿರಲಿಲ್ಲ. ಹೀಗಾಗಿ ಇಬ್ಬರ ನಡುವಿನ ಬಿರುಕು ಮತ್ತೂಂದು ಮಜಲು ಪಡೆದಿತ್ತು. ಅದರ ಮುಂದುವರಿದ ಭಾಗವೇ ಈಗಲ್ಟನ್ ರೆಸಾರ್ಟ್ನಲ್ಲಿ ಜಗಳ. ರಾಜ್ಯದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನೆಪವೊಡ್ಡಿ ಮಧ್ಯಪ್ರವೇಶಿಸಿದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಆನಂದ ಸಿಂಗ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಭೀಮಾ ನಾಯ್ಕ ಬೆಂಬಲವಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಮಾಹಿತಿ ಬಹಿರಂಗಕ್ಕೆ ಗಣೇಶ್ ಅಸಮಾಧಾನ?
ಗಣೇಶ್ ಬಿಜೆಪಿ ಸೇರುವ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಸಿಂಗ್ ಮಾಹಿತಿ ನೀಡಿದ್ದರು. ಇದರಿಂದ ಗಣೇಶ್ ಮುನಿಸಿ ಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆನಂದ ಸಿಂಗ್-ಭೀಮಾ ನಾಯ್ಕ ನಡುವೆ ಜಗಳ ನಡೆಯುತ್ತಿದ್ದಾಗ ಮಧ್ಯಪ್ರವೇಶಿಸಿ, “ಬಿಜೆಪಿ ಸೇರಬೇಕಿದ್ದ ನನ್ನ ಯೋಜನೆ ನಿನ್ನಿಂದ ವಿಫಲವಾಗಿದೆ. ಬಿಜೆಪಿ ಸೇರಿದ್ದರೆ ನಾನು ಸಚಿವ ನಾಗುತ್ತಿದ್ದೆ. ನಿನ್ನ ಮಾತು ಕೇಳಿ ಕೆಟ್ಟಿದ್ದೇನೆ’ ಎಂದು
ಆರೋಪಿಸಿ ಆನಂದ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…