ಮತ್ತೋರ್ವನಿಗೆ ಮಂಗನ ಕಾಯಿಲೆ
Team Udayavani, Apr 26, 2020, 5:39 AM IST
ಸಾಂದರ್ಭಿಕ ಚಿತ್ರ.
ಸಾಗರ: ತಾಲೂಕಿನ ತುಮರಿಯ ಹೆಸ್ಸಿಗೆಯ ಗಣಪತಿ ನಾಯ್ಕ(35) ಅವರಿಗೆ ಮಂಗನ ಕಾಯಿಲೆಯ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಈ ನಡುವೆ ಒಡಂಬೈಲು ಹೆನ್ನಿಯ ಮಾರುತಿ ಎಂಬುವವರನ್ನು ಕೂಡ ಶಂಕಿತ ಕೆಎಫ್ಡಿ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರ ರಕ್ತ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ತಾಲೂಕು ವೈದ್ಯಾ ಧಿಕಾರಿ ಡಾ| ಮೋಹನ್ ಕೆ.ಎಸ್. ತಿಳಿಸಿದ್ದಾರೆ.
ಶಿವಮೊಗ್ಗದ ಪರಿಮಾಣ ಕ್ರಿಮಿ ಪರಿಶೋಧನಾ ಪ್ರಯೋಗಾಲಯ ಗುರುವಾರ ನಡೆಸಿದ 40 ಪರೀಕ್ಷೆಯಲ್ಲಿ ಇನ್ನೂ ನಾಲ್ಕು ಪ್ರಕರಣಗಳಲ್ಲಿ ಮಂಗನ ಕಾಯಿಲೆ ಖಚಿತಗೊಂಡಿದೆ. ಚಿಕ್ಕಮಗಳೂರಿನ ಎನ್.ಆರ್. ಪುರದ ದಬಗಣಿಯ ಸುನಿತಾ ಮಂಜುನಾಥ್ (31), ತೀರ್ಥಹಳ್ಳಿಯ ಮಾಳೂರು ಬೆಳುವೆಯ ಪವಿತ್ರಾ ಮಂಜುನಾಥ್ (25), ಉತ್ತರ ಕನ್ನಡ ಸಿದ್ದಾಪುರದ ಕಾನ್ಸೂರಿನ ಸಮೀಪದ ನಾಣಿಕಟ್ಟಾದ ಶೇಖರ್ ಗಣಪತಿ ನಾಯ್ಕ (40), ಕ್ಯಾದಗಿಯ ಸನ್ನೆಕೊಪ್ಪದ ಪುನೀತ್ ವೀರಭದ್ರ ನಾಯ್ಕ (8) ಅವರಿಗೆ ಕೆಎಫ್ಡಿ ಸೋಂಕು ತಗಲಿರುವುದು ಖಚಿತಪಟ್ಟಿದೆ. ಸಾಗರ ತಾಲೂಕಿನ ಕಾರ್ಗಲ್ನ 5, ತುಮರಿಯ 4 ಮತ್ತು ಅರಳಗೋಡಿನ ಒಂದು ಶಂಕಿತ ಜ್ವರದ ಪ್ರಕರಣಗಳ ರಕ್ತದ ಸ್ಯಾಂಪಲ್ನ್ನು ವಿಡಿಎಲ್ಗೆ ರವಾನಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್