ಪಾಲಿಕೆಯ ನೂತನ ಕಾಯ್ದೆ ಅನುಷ್ಠಾನಕ್ಕೆ ಸರ್ಕಾರದಿಂದ ಚಾಲನೆ
Team Udayavani, Mar 31, 2021, 9:25 PM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ -2020ರ ಅನ್ವಯ ಬಿಬಿಎಂಪಿ ಆಯುಕ್ತರ ಹುದ್ದೆಯನ್ನು ಮುಖ್ಯ ಆಯುಕ್ತರ ಹುದ್ದೆಯನ್ನಾಗಿ ಮತ್ತು ಜಂಟಿ ಆಯುಕ್ತರ ಹುದ್ದೆಯನ್ನು ವಲಯ ಜಂಟಿ ಆಯುಕ್ತರ ಹುದ್ದೆಯನ್ನಾಾಗಿ ಬದಲಾಯಿಸಿ ಸರ್ಕಾರ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ.
ಈ ಮೂಲಕ ಹೊಸ ಕಾಯ್ದೆೆಯಲ್ಲಿರುವ ಅಂಶಗಳನ್ನು ಅನುಷ್ಠಾಾನ ಪ್ರಾರಂಭವಾದಂತಾಗಿದೆ. ಪರಿಷ್ಕೃತ ಆದೇಶ ಏ.1ರಿಂದ (ಇಂದಿನಿಂದಲೇ) ಜಾರಿಗೆ ಬರಲಿದೆ. ಈಗಾಗಲೇ ಪಾಲಿಕೆಯ ಎಂಟು ವಲಯಗಳಿಗೆ ವಿಶೇಷ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನೇ ವಲಯ ಆಯುಕ್ತರ ಹುದ್ದೆಗೆ ನಿಯೋಜಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಹಾಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿಿರುವ ಅಧಿಕಾರಿಗಳು ವಲಯ ಜಂಟಿ ಆಯುಕ್ತರ ಅಧೀನರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಯುಕ್ತರ ಅಧಿಕಾರ ಮತ್ತು ಜವಾಬ್ದಾರಿಯನ್ನು ಮುಖ್ಯ ಆಯುಕ್ತರಿಗೆ ನೀಡಲಾಗಿದ್ದು, ನಿರ್ಣಯ, ಸುತ್ತೋಲೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸರ್ಕಾರಕ್ಕೆ ವರದಿ ಮಾಡಲು ಸೂಚಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವ ಕ್ರಮಗಳು ಪಾಲಿಕೆಯ ನೂತನ ಕಾಯ್ದೆೆಯ 375ರ ಅಡಿ ಹಾಗೂ ಪರವಾನಗಿ, ಪ್ರಮಾಣ ಪತ್ರ ಸೇರಿದಂತೆ ಎಲ್ಲ ಆದೇಶಗಳು ಹೊಸ ಕಾಯ್ದೆೆಯ 376 ಅಡಿಯಲ್ಲಿ ಮುಂದುವರಿಯಲಿದೆ ಎಂದು ಸರ್ಕಾರ ಉಲ್ಲೇಖಿಸಿದೆ.
ವಲಯ ಆಯುಕ್ತರು :
ಪೂರ್ವ : ಮನೋಜ್ ಜೈನ್ (ಯೋಜನೆ)
ಪಶ್ಚಿಮ : ಬಸವರಾಜು ಎಸ್. (ಕಂದಾಯ)
ದಕ್ಷಿಣ : ತುಳಸಿ ಮದ್ದಿನೇನಿ (ಹಣಕಾಸು)
ದಾಸರಹಳ್ಳಿ : ರವೀಂದ್ರ (ಕಲ್ಯಾಾಣ)
ಆರ್.ಆರ್. ನಗರ : ಬಿ.ರೆಡ್ಡಿ ಶಂಕರಬಾಬು (ಆಸ್ತಿ, ಶಿಕ್ಷಣ, ಮಾರುಕಟ್ಟೆ)
ಬೊಮ್ಮನಹಳ್ಳಿ : ರಾಜೇಂದ್ರ ಚೋಳನ್(ಆರೋಗ್ಯ ಮತ್ತು ಮಾಹಿತಿ)
ಮಹದೇವಪುರ : ಡಿ. ರಂದೀಪ್ (ಘನತ್ಯಾಾಜ್ಯ ನಿರ್ವಹಣೆ)
ಯಲಹಂಕ : ಡಿ. ರಂದೀಪ್ (ಆಡಳಿತ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ