ದಂಗೆಗೆ ಕರೆ ಕೊಡೋರು ನಕ್ಸಲರು; ಬಿಜೆಪಿ ಬೃಹತ್ ಪ್ರತಿಭಟನೆ
Team Udayavani, Sep 21, 2018, 2:01 PM IST
ಬೆಂಗಳೂರು: ಬಿಜೆಪಿ ವಿರುದ್ಧ ದಂಗೆ ಏಳಲು ಕರೆ ನೀಡುತ್ತೇನೆ ಎಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಶುಕ್ರವಾರ ರಾಜ್ಯಾಧ್ಯಂತ ಬೀದಿಗಳಿದು ಪ್ರತಿಭಟನೆ ನಡೆಸಿದೆ.
ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆರ್ ಅಶೋಕ್ ನೇತೃತ್ವ ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ದಂಗೆ ಏಳಿ ಎಂದು ಕರೆ ಕೊಡುವವರು ನಕ್ಸಲರು. ನಾವು ಯಾರನ್ನು ಕಾಪಾಡಿ ಎಂದು ಹೇಳಿ ಅಧಿಕಾರ ಕೊಟ್ಟೆವೋ ಅವರೇ ಇಂದು ಸಮಾಜ ಕಂಟಕರಾಗಿದ್ದಾರೆ ಎಂದು ಆರ್.ಅಶೋಕ್ ಕಿಡಿ ಕಾರಿದರು.
ಅವರಿಗೆ ದಿಕ್ಕು ದೆಸೆ ಏನಿಲ್ಲ. ಸರ್ಕಾರ ಉಳಿಯುತ್ತೋ ಇಲ್ವೋ ಅವರಿಗೇ ಗೊತ್ತಿಲ್ಲ. 18ಜನ ಹೋಗ್ತಾರೆ 20 ಜನ ಹೋಗ್ತಾರೆ ಎಂದು ಇವರೇ ಹೇಳಿಕೆ ಕೊಡ್ತಾರೆ. ಮಂತ್ರಿಗಳೇ ದಮಕಿ ಹಾಕುತ್ತಾರೆ.ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಶಾಸಕರು ಪಕ್ಷ ಬಿಟ್ಟು ಹೋಗ್ತೀವಿ ಎನ್ನುತ್ತಾರೆ. ನಿಮಗೆ ತಾಕತ್ತಿದ್ರೆ ಭಿನ್ನಮತೀಯ ಚಟುವಟಿಕೆ ಮಾಡಿದ್ರಲ್ಲಾ ಅವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು ಎಂದರು.
ಬಿಜೆಪಿ ಮೇಲೆ ಗೂಬೆ ಕೂರಿಸ್ತಾರೆ.ಸರ್ಕಾರ ಬಿದ್ರೆ ಅದು ಅವರ ದುರಾಡಳಿತದಿಂದ ಹೊರತು ನಮ್ಮಿಂದಲ್ಲ ಎಂದರು.
ಎರಡು ದಿನದಲ್ಲೋ,ಐದು ದಿನದೊಳಗೋ ಇಲ್ಲಾ ವಾರದೊಳಗೋ ಈ ಸರ್ಕಾರ ಬಿದ್ದು ಹೋಗುವುದು ಖಚಿತ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ತೀವ್ರ ವಾಗಾœಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್