BJP; ಮನದಲ್ಲಿ ಬಹಳ ಭಾವನೆಗಳಿವೆ, ಹೇಳಲು ಇದು ಸಮಯವಲ್ಲ: ಸಿ.ಟಿ.ರವಿ
ಹೇಳುತ್ತೇನೆ, ಹೇಳಲೇಬೇಕು.... ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ
Team Udayavani, Mar 7, 2024, 7:10 PM IST
ಚಿಕ್ಕಗಳೂರು: ಮನದಲ್ಲಿ ಬಹಳ ಭಾವನೆಗಳಿವೆ ಆದರೆ ಹೇಳಲು ಇದು ಸಮಯವಲ್ಲ.ಪಕ್ಷ-ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ ಎಂದು ಮಾಜಿ ಸಚಿವ ಸಿ.ಟಿ.ರವಿ ಅಸಮಧಾನವನ್ನು ಮತ್ತೆ ಹೊರ ಹಾಕಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಯಾರು ಯಾರು ಹೇಗೆ ನಡೆದುಕೊಂಡರು ಎನ್ನುವುದೂ ಸೇರಿ ಬಹಳ ವಿಷಯ ಹೇಳಲು ಇದೆ, ಹೇಳುತ್ತೇನೆ, ಹೇಳಲೇಬೇಕು.ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ. ಸಮಯ ಬರಲಿ ಎಲ್ಲಾ ಹೇಳುತ್ತೇನೆ. ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡೋದಾದರೂ ಲೋಕಸಭಾ ಚುನಾವಣೆ ನಂತರ ಎಂದು ಹೇಳಿದ್ದಾರೆ.
‘ಈಗ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅದೊಂದೆ ಗುರಿ ಇರುವುದು. ರಾಜ್ಯದ 28 ಸ್ಥಾನವನ್ನೂ ಬಿಜೆಪಿ ಗೆಲ್ಲಬೇಕು, ಅದಕ್ಕೆ ಅಳಿಲು ಸೇವೆ ಮಾಡೋದಷ್ಟೆ ನಮ್ಮ ಕೆಲಸ’ ಎಂದರು.
‘ರಾಮ ದೇವರಲ್ಲ, ಭಾರತ ದೇಶವಲ್ಲ’ ಎಂಬ ಡಿಎಂಕೆ ನಾಯಕ ಎ. ರಾಜ ಹೇಳಿಕೆಗೆ ಕಿಡಿ ಕಾರಿ, ನಾಯಿ ಕೂಗಿದರೆ ಭೂಲೋಕ ಕೆಟ್ಟಿ ಹೋಗುತ್ತಾ? ಇವರು ಭಾರತದ ಜನರ ಶ್ರದ್ಧೆಯನ್ನ ನಾಶ ಮಾಡಬೇಕು ಎಂದು ಬಯಸುವವರು. ಹೀಗೇ ಬಯಸುವವರೆಲ್ಲ ನಾಶವಾಗಿ ಹೋಗಿದ್ದಾರೆ. ಎಲ್ಲಿ ನಿನ್ನ ಹರಿ ಎಂದ ಹಿರಣ್ಯ ಕಶ್ಯಪುವಿನ ಮನೆಯಲ್ಲೇ ಪ್ರಹ್ಲಾದ ಹುಟ್ಟಿದ. ಎ.ರಾಜನ ಮನೆಯಲ್ಲೇ ರಾಮಭಕ್ತ ಹುಟ್ಟುತ್ತಾನೆ. ತಮಿಳುನಾಡಲ್ಲಿ ಸಾವಿರಾರು ರಾಮನ ದೇವಾಲಯಗಳಿವೆ, ತಾಕತ್ತಿದ್ದರೆ ಮುಟ್ಟಲಿ. ರಾಮೇಶ್ವರ, ರಾಮನೇ ಪೂಜೆ ಮಾಡಿದ ಈಶ್ವರನಿದ್ದಾನೆ. ಇವರಿಗೆ ರಾಮನ ದೇವಾಲಯದ ಹುಂಡಿ ಬೇಕು, ರಾಮ ಬೇಡ. ಹುಂಡಿ ಇಟ್ಟು ಹಣ ತಿನ್ನುವ ಇವರಿಗೆ ನಾಚಿಕೆಯಾಗಬೇಕು ಎಂದರು.
ಆಕಾಶಕ್ಕೆ ಉಗಿದು, ಮೈಮೇಲೆ ಬೀಳಿಸಿಕೊಂಡವರಿದ್ದಾರೆ. ರಾಮನನ್ನ ಟೀಕೆ ಮಾಡೋದು ಆಕಾಶಕ್ಕೆ ಉಗಿದಂತೆ, ಅವರ ಮುಖಕ್ಕೇ ಬೀಳೋದು ಎಂದು ಕಿಡಿ ಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!