‘ಜೈಲು ಹಕ್ಕಿ’ ಇಂದು ‘ಖಳನಾಯಕ’ನಾಗಿರುವುದು ಕಾಂಗ್ರೆಸ್ ನೈತಿಕ ದಿವಾಳಿಗೆ ಸಾಕ್ಷಿ : ಬಿಜೆಪಿ
Team Udayavani, Mar 29, 2021, 5:42 PM IST
ಬೆಂಗಳೂರು : ಒಬ್ಬ ಅಮಾಯಕ ಹೆಣ್ಣು ಮಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡು ರಾಜ್ಯದ “ಮಹಾ ನಾಯಕ” ಆಗಲು ಹೊರಟ “ಜೈಲು ಹಕ್ಕಿ” ಇಂದು “ಖಳನಾಯಕ” ಆಗಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಸೋಮವಾರ ಬಿಜೆಪಿ ಟ್ವೀಟ್ ಮಾಡಿದೆ.
ಒಬ್ಬ ಅಮಾಯಕ ಹೆಣ್ಣು ಮಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡು ರಾಜ್ಯದ “ಮಹಾ ನಾಯಕ” ಆಗಲು ಹೊರಟ “ಜೈಲು ಹಕ್ಕಿ” ಇಂದು “ಖಳನಾಯಕ” ಆಗಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ.
— BJP Karnataka (@BJP4Karnataka) March 29, 2021
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಂತ್ರಸ್ಥೆಯನ್ನು ಒತ್ತಾಯಪೂರ್ವವಾಗಿ ಕೂಡಿ ಹಾಕಿದ್ದಾರೆ ಎಂದು ಸಂತ್ರಸ್ಥೆಯ ಪೋಷಕರು ಎರಡನೆಯ ಬಾರಿಗೆ ಮಹಾನಾಯಕನ ಮೇಲೆ ಆರೋಪಿಸಿದ್ದಾರೆ. ಇಷ್ಟು ದೊಡ್ಡ ಕಳಂಕ ಹೊತ್ತುಕೊಂಡು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿ ಮುಂದುವರೆಯಲು ಮಹಾನಾಯಕನಿಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನೆ ಮಾಡಿದೆ.
ಸಂತ್ರಸ್ಥೆಯನ್ನು ಒತ್ತಾಯಪೂರ್ವವಾಗಿ ಕೂಡಿ ಹಾಕಿದ್ದಾರೆ ಎಂದು ಸಂತ್ರಸ್ಥೆಯ ಪೋಷಕರು ಎರಡನೆಯ ಬಾರಿಗೆ ಮಹಾನಾಯಕನ ಮೇಲೆ ಆರೋಪಿಸಿದ್ದಾರೆ.
ಇಷ್ಟು ದೊಡ್ಡ ಕಳಂಕಹೊತ್ತುಕೊಂಡು @INCKarnataka ಪಕ್ಷದ ರಾಜ್ಯ ಅಧ್ಯಕ್ಷನಾಗಿ ಮುಂದುವರೆಯಲು ಮಹಾನಾಯಕನಿಗೆ ಯಾವ ನೈತಿಕತೆ ಇದೆ?#DKShiMustResign pic.twitter.com/VMvzFhrgEd
— BJP Karnataka (@BJP4Karnataka) March 29, 2021
ಇನ್ನು ಸಿದ್ದರಾಮಯ್ಯಗೆ ಸೂಚನೆ ನೀಡುರುವ ಬಿಜೆಪಿಯು, ನಿಮ್ಮ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆಯಾದರೆ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಕೆಡವಲು ಸಾಧ್ಯವಿದೆ. ಒಂದು, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುತ್ತದೆ. ಇನ್ನೊಂದು, ಡಿಕೆಶಿ ನಡೆಸಿದ ಷಡ್ಯಂತ್ರವನ್ನು ಸಾಬೀತುಪಡಿಸಬಹುದು ಎಂದು ಟ್ವೀಟ್ ಮಾಡಿದೆ.