ವಿದ್ಯುತ್ ಪ್ರವಹಿಸಿ ವಿವಿಧೆಡೆ ಬಾಲಕರಿಬ್ಬರ ದುರ್ಮರಣ
Team Udayavani, Sep 28, 2019, 3:00 AM IST
ಕವಿತಾಳ/ದಾವಣಗೆರೆ: ವಿದ್ಯುತ್ ಪ್ರವಹಿಸಿ ಬಾಲಕರಿಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾಜ್ಯದ ವಿವಿಧೆಡೆ ನಡೆದಿದೆ. ರಾಯಚೂರು ತಾಲೂಕಿನ ಬಸಾಪುರದಲ್ಲಿ ಶಾಲೆ ಮೇಲೆ ಹಾಯ್ದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಅನಿಲ್ಕುಮಾರ ತಿಮ್ಮಪ್ಪ (11) ಮೃತಪಟ್ಟಿದ್ದಾನೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಅನಿಲ್ಕುಮಾರ ಶಾಲೆಯ ಛಾವಣಿ ಮೇಲೆ ಸಂಗ್ರಹ ಗೊಂಡಿದ್ದ ಮಳೆ ನೀರು ತೆರವುಗೊಳಿಸಲು ಹೋದಾಗ ಶಾಲಾ ಕಟ್ಟಡದ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿ ತಗುಲಿ ಅಪಘಾತ ಸಂಭವಿಸಿದೆ. ಬಾಲಕನನ್ನು ಕವಿತಾಳದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರುವಾಗ ದಾರಿ ಮಧ್ಯೆ ಅಸುನೀಗಿದ್ದಾನೆ. ಮತ್ತೂಂದೆಡೆ ದಾವಣಗೆರೆಯ ಬಾಷಾನಗರದ ಆರನೇ ಕ್ರಾಸ್ನಲ್ಲಿ ವಿದ್ಯುತ್ ಪ್ರವಹಿಸಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.
ಬಾಷಾನಗರದ ಐದನೇ ಕ್ರಾಸ್ ನಿವಾಸಿ ನಯಾಜ್ ಅಹಮ್ಮದ್ ಪುತ್ರ ಸೈಯದ್ (7) ಮೃತಪಟ್ಟ ಬಾಲಕ. ಎರಡನೇ ತರಗತಿಯಲ್ಲಿ ಓದುತ್ತಿದ್ದ ಸೈಯದ್ ಮಧ್ಯಾಹ್ನ 2.30ರ ಸುಮಾರಿಗೆ ಗೆಳೆಯರೊಂದಿಗೆ ವಿದ್ಯುತ್ ಪರಿವರ್ತಕದ ಬಳಿ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ. ವಿಷಯ ತಿಳಿದ ತಂದೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿ ದ್ದಾನೆ.