ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಬಹುಮಾನ ಪ್ರಕಟ
Team Udayavani, Feb 26, 2020, 3:03 AM IST
ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಮಂಗಳವಾರ 2019ರ ಸಾಲಿನ ವಿವಿಧ ಭಾಷೆಯ “ಅನುವಾದ ಬಹುಮಾನ’ ಪ್ರಕಟಿಸಿದೆ. ಕನ್ನಡ ಹೊರತು ಪಡಿಸಿ ಉಳಿದ ಭಾಷೆಯ ಕೃತಿ ಮತ್ತು ಅನುವಾದಕರ ಹೆಸರನ್ನು ಘೋಷಿಸಿದೆ. ಅನುವಾದಕಿ ಜಯಶ್ರೀ ಶಾನಭೋಗ್ ಕೊಂಕಣಿ ಭಾಷೆಗೆ ಅನುವಾದ ಮಾಡಿರುವ ಗೋಪಾಲ ಕೃಷ್ಣ ಪೈ ಅವರ ಕನ್ನಡ ಕಾದಂಬರಿ “ಸ್ವಪ್ನ ಸಾರಸ್ವತ’ ಕಾದಂಬರಿ.
ಸುನೇತ್ರಾ ಜೋಗ್ ಅವರು ಕಾದಂಬರಿಗಾರ್ತಿ ಸುಧಾಮೂರ್ತಿ ಅವರ “ದಿ ಮ್ಯಾಜಿಕ್ ಆಫ್ ಲಾಸ್ಟ್ ಟೆಂಪಲ್ ‘ಎಂಬ ಆಂಗ್ಲ ಕಾದಂಬರಿಯನ್ನು ಕೊಂಕಣಿ ಭಾಷೆಗೆ ಅನುವಾದ ಮಾಡಿದ್ದ ಈ ಪುಸ್ತಕವೂ ಬಹುಮಾನಕ್ಕೆ ಆಯ್ಕೆಯಾಗಿದೆ. ಹಾಗೆಯೇ ನಿರ್ಮಲ್ಕಂಠಿ ಭಟ್ಟಾಚಾರ್ಯ ಅವರು ಬಂಗಾಳಿ ಭಾಷೆಗೆ ಭಾಷಾಂತರಿಸಿದ ಯು.ಆರ್.ಅನಂತಮೂರ್ತಿ ಅವರ “ಸಂಗ್ರಹ ಕಥನಗಳು’ ಪುಸ್ತಕಕ್ಕೆ ಬಹುಮಾನ ದೊರೆತಿದೆ.
ಆಂಗ್ಲ ಭಾಷೆಯ ಲೇಖಕ ಸಸಾನ್ ಡ್ಯಾನಿಲ್ ಅವರು ಕನ್ನಡದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ “ಕುಸುಮ ಬಾಲೆ’ ಕಾದಂಬರಿಯನ್ನು ಇಂಗ್ಲಿಷ್ಗೆ ಭಾಷಾಂತರಿಸಿದ್ದು, ಈ ಕೃತಿಗೂ ಬಹುಮಾನ ದೊರೆತಿದೆ. ವಿವೇಕ್ಶಾನ್ಭೋಗ್ ಅವರ ಕನ್ನಡದ “ಗಾಚರ್ ಗೋಚರ್’ ಕಾದಂಬರಿಯನ್ನು ಶ್ರೀನಾಥ್ ಪೇರೂರ್ ಅವರು ಇಂಗ್ಲಿಷ್ಗೆ ಅನುವಾದ ಮಾಡಿದ್ದು, ಅದಕ್ಕೂ ಬಹುಮಾನ ದೊರೆತಿದೆ. ಅನುವಾದ ಬಹುಮಾನ 50 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ