ಅಧಿವೇಶನಕ್ಕೆ ಸವಾಲು
Team Udayavani, Jan 27, 2021, 6:40 AM IST
ಬೆಂಗಳೂರು: ರೈತರ ಪ್ರತಿಭಟನೆ, ಹುಣಸೋಡು ಸ್ಫೋಟ, ಕೆಪಿಎಸ್ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಸಂಪುಟ ವಿಸ್ತರಣೆ ಮತ್ತು ಖಾತೆಗಾಗಿ ಹಗ್ಗ ಜಗ್ಗಾಟಗಳ ನಡುವೆ ಗುರುವಾರ ರಾಜ್ಯ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ಸರಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗುತ್ತಿದ್ದರೆ, ತಿರುಗೇಟು ನೀಡಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.
7 ದಿನ ನಡೆಯಲಿರುವ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿ ಅನುಮೋದನೆ ಪಡೆಯಬೇಕಿದೆ. ಲವ್ ಜೆಹಾದ್ ಕಾನೂನು ಪ್ರಸ್ತಾವದ ಸಾಧ್ಯತೆಯೂ ಇದೆ. ಹೀಗಾಗಿ ವರ್ಷದ ಮೊದಲ ಅಧಿವೇಶನ ವಾಕ್ಸಮರ – ಕೋಲಾಹಲಕ್ಕೆ ಸಾಕ್ಷಿಯಾಗಬಹುದು.
ವಿಧಾನಪರಿಷತ್ನ ಉಪ ಸಭಾಪತಿ ಚುನಾವಣೆಯೂ ನಿಗದಿಯಾಗಿದೆ. ವಿಧಾನಪರಿಷತ್ನಲ್ಲಿ ನಡೆದ ಕಹಿ ವಿದ್ಯಮಾನಗಳ ಕುರಿತು ಸದನ ಸಮಿತಿ ವರದಿ ಸಲ್ಲಿಸಿದೆ. ವರದಿ ಮಂಡನೆಯಾದರೆ ಪರಿಷತ್ನಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಬಹುದು.
60 ದಿನ ಕಲಾಪ? :
ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿದ್ದರೂ 2002ರಿಂದ ಇದು ವರೆಗೆ ಅಷ್ಟು ದಿನ ನಡೆದೇ ಇಲ್ಲ. ಈ ವರ್ಷವಾದರೂ 60 ದಿನ ಅಧಿವೇಶನ ನಡೆಯುತ್ತದೆಯೇ ಎಂಬ ಪ್ರಶ್ನೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೈಸೂರು ಮೇಯರ್ ಸ್ಥಾನ ‘ಕೈ’ತಪ್ಪಲು ನಮ್ಮ ಪಕ್ಷದವರ ಹುನ್ನಾರವೇ ಕಾರಣ: ಯತೀಂದ್ರ ಆರೋಪ
ಆರೋಪಿಗಳ ಐಶಾರಾಮಿ ಕಾರು ಮಾರಾಟ ಪ್ರಕರಣ, ಕಬ್ಬಳ್ ರಾಜ್ ಸೇರಿ ಇಬ್ಬರು ಪೊಲೀಸರು ಅಮಾನತು
ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್
ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ
ಇಂದು ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ: ಶುಭಾಶಯ ಕೋರಿದ ನರೇಂದ್ರ ಮೋದಿ, ನಡ್ಡಾ, ಶಾ