ಕೆಪಿಸಿಸಿ ಅಧ್ಯಕ್ಷರ ಪಕ್ಕದ ಸೀಟ್ಗಾಗಿ ಕೈ ನಾಯಕರ ಬಹಿರಂಗ ಕಿತ್ತಾಟ
Team Udayavani, Aug 26, 2018, 1:41 PM IST
ಬೆಳಗಾವಿ: ಇಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರ ಸಮ್ಮುಖದಲ್ಲೇ ಇಬ್ಬರು ಪ್ರಮುಖ ನಾಯಕರು ಕಿತ್ತಾಡಿಕೊಂಡ ಘಟನೆ ನಡೆದಿದೆ.
ದಿನೇಶ್ ಗುಂಡುರಾವ್ ಅವರ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವ ಸಲುವಾಗಿ ಜಿಲ್ಲಾ ಉಸ್ತುವಾರಿ ಮೋಹನ್ ಮತ್ತು ಮಾಜಿ ಶಾಸಕ ಫಿರೋಜ್ ಸೇಠ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಧ್ಯ ಪ್ರವೇಶಿಸಿದ ದಿನೇಶ್ ಅವರು ಇಬ್ಬರನ್ನೂ ಸಮಧಾನ ಪಡಿಸಿದ್ದಾರೆ.
ನಾವು ಈ ಬಾರಿ ಅಭಿವೃದ್ಧಿ ಮಾಡದ ಕಾರಣಕ್ಕೆ ಸೋತದ್ದಲ್ಲ, ನಮ್ಮ ಸೋಲಿಗೆ ಬೇರೆಯದ್ದೆ ಆದ ಕಾರಣ ಇದೆ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ. ನಮಗೆ ಈ ಬಾರಿ ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲೇ ಬೇಕಿದೆ ಎಂದರು.