ದಿನೇಶ್ ವಿರುದ್ಧ ಕ್ರಮಕ್ಕೆ ಆಗ್ರಹ
Team Udayavani, Jan 7, 2019, 4:55 AM IST
ಬೆಂಗಳೂರು: ಸಚಿವರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬಂದಿ ಬಳಿ ಸಿಕ್ಕಿರುವ 25.76 ಲ. ರೂ. ಚಿಕ್ಕ ವಿಷಯ ಎಂದು ಹೇಳಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ನಾಚಿಕೆ ಆಗಬೇಕು. ನೀವು ಭ್ರಷ್ಟರನ್ನು ಬಚಾವ್ ಮಾಡಲು ಹೊರಟಿದ್ದೀರಾ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಶ್ನಿಸಿದರು.
ಬಿಜೆಪಿ ಕಚೇರಿಯಲ್ಲಿ ರವಿವಾರ ನಡೆದ ಯುವ ಮೋರ್ಚಾದ “ವಿಜಯ್ ಲಕ್ಷ್ಯ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, 25.76 ಲಕ್ಷ ರೂಪಾಯಿಗಳನ್ನು ಪುಟೊYàಸಿ ಎಂದು ಹೇಳುವ ದಿನೇಶ್ ಗುಂಡೂರಾವ್ ಅವರು ಯುವಕರಿಗೆ ಏನು ಆದರ್ಶ ನೀಡಲು ಸಾಧ್ಯ. ರಾಜ್ಯದ ಕಾಂಗ್ರೆಸ್ ಶಾಸಕರಿಗೆ, ಸಂಸದರಿಗೆ ಕೆಪಿಸಿಸಿ ಅಧ್ಯಕ್ಷರಾಗಿ ನೀವೇನು ಮಾರ್ಗದರ್ಶನ ನೀಡುವಿರಿ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸ್ವಾಭಿಮಾನ ಇದ್ದರೆ ದಿನೇಶ್ ಹೇಳಿಕೆಯನ್ನು ಖಂಡಿಸಬೇಕು ಎಂದರು.