ಬಾಹ್ಯ ಆಡಳಿತ ಸಹಿಸೆವು: ಚುನಾವಣಾ ಆಯುಕ್ತ ರಾವತ್ ಎಚ್ಚರಿಕೆ
Team Udayavani, Apr 7, 2018, 6:00 AM IST
ಬೆಂಗಳೂರು: “ಸಂವಿಧಾನೇತರ ವ್ಯಕ್ತಿಗಳನ್ನು’ ಚುನಾವಣಾ ಆಡಳಿತ ಯಂತ್ರದಿಂದ ದೂರ ಇಡುವಂತೆ ರಾಜ್ಯ ಆಡಳಿತಕ್ಕೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಅಲ್ಲದೇ, ಚುನಾವಣಾ ಕರ್ತವ್ಯದಲ್ಲಿರುವ
ಇಲಾಖೆ ಅಥವಾ ಅಧಿಕಾರಿಗಳು ಅಂತಹ “ಸಂವಿಧಾನೇತರ ವ್ಯಕ್ತಿಗಳೊಂದಿಗೆ’ ಸಂಬಂಧವಿಟ್ಟು ಕೊಂಡರೆ ಅಥವಾ ಸಂಪರ್ಕದಲ್ಲಿದ್ದರೆ
ಆಯೋಗ ಸಹಿಸುವುದಿಲ್ಲ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದೂ ರಾವತ್ ಎಚ್ಚರಿಕೆ ನೀಡಿದರು.
3 ದಿನಗಳ ಚುನಾವಣಾ ಪೂರ್ವ ಸಿದ್ಧತಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಮೂಲಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ನಿಯಂತ್ರಿಸುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಕೇಳಿದ್ದಕ್ಕೆ, “ದೇವೇಗೌಡರು ಅರೋಪ ಮಾಡಿದ್ದು ನಿಜ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಸತ್ಯಾಂಶ ಸಂಗ್ರಹಿಸಲಾಗುತ್ತಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಹುರುಳಿಲ್ಲದ ಆರೋಪ: ರಾಜ್ಯದಲ್ಲಿ 15ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ರಾವತ್, ಆಯೋಗದ ಮಾರ್ಗಸೂಚಿ ಪ್ರಕಾರ ಹೆಸರುಗಳನ್ನು ತೆಗೆದು ಹಾಕಲು ಅವಕಾಶವಿಲ್ಲ. ಅರ್ಜಿ ನಮೂನೆ 7 ಸಲ್ಲಿಕೆಯಾದರೆ, ಅದನ್ನು ಪರಿಶೀಲಿಸಿ ತೆಗೆದು ಹಾಕಲಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಸ್ಥಳಾಂತರಗೊಂಡ 4.88 ಲಕ್ಷ, ಮೃತಪಟ್ಟ 3.67 ಲಕ್ಷ ಎರಡು ಬಾರಿ ಸೇರಿಸಲ್ಪಟ್ಟ 61 ಸಾವಿರ ಸೇರಿ ಅಂತಿಮ ಪಟ್ಟಿಯಿಂದ
ಕೈಬಿಟ್ಟಿದ್ದೇ 9.17 ಲಕ್ಷ ಹೆಸರುಗಳು. ಹೀಗಿರುವಾಗ ಅಲ್ಪಸಂಖ್ಯಾತರನ್ನು ಕೈಬಿಡಲಾಗಿದೆ ಅನ್ನುವುದರಲ್ಲಿ ಅರ್ಥವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ
Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ
IPL 2024; ಲಕ್ನೋ, ಹೈದ್ರಾಬಾದ್ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ
ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ
ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ