ಗಣೇಶ ಮೂರ್ತಿ ಸಾಗಿಸುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ
Team Udayavani, Sep 2, 2019, 3:00 AM IST
ಬೆಳಗಾವಿ: ಗಣೇಶೋತ್ಸವ ಸಂಭ್ರಮದ ನಡುವೆಯೇ ಇಲ್ಲಿಯ ಭಾಗ್ಯ ನಗರದ ಮಾರ್ಗದಿಂದ ಸಾರ್ವಜನಿಕ ಗಣಪತಿ ಮೂರ್ತಿ ತೆಗೆದುಕೊಂಡು ಹೋಗುತ್ತಿದ್ದಾಗ ಹೈವೋಲ್ಟೆಜ್ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಬೆಳಗಾವಿ ನಗರದಿಂದ ಬೇರೆ ಊರಿಗೆ ಭಾನುವಾರ ಬೆಳಗ್ಗೆ ಅತಿ ಎತ್ತರದ ಗಣಪತಿ ಮೂರ್ತಿ ತೆಗೆದುಕೊಂಡು ಹೋಗಲಾಗುತ್ತಿತ್ತು.
ಮೂರ್ತಿ ಎತ್ತರದಲ್ಲಿ ಇದ್ದಿದ್ದರಿಂದ ಹೈ ವೋಲ್ಟೆಜ್ ವಿದ್ಯುತ್ ತಂತಿಗೆ ಮೂರ್ತಿಯ ತಲೆಯ ಭಾಗಕ್ಕೆ ತಗುಲಿದ್ದು, ಟ್ರಾಕ್ಟರ್ನಲ್ಲಿ ಸಾಗಿಸುತ್ತಿದ್ದ ಮೂರ್ತಿಗೆ ಪ್ಲಾಸ್ಟಿಕ್ ಹಾಕಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಆಗ ಟ್ರಾಕ್ಟರ್ನಲ್ಲಿದ್ದ ಮಂಡಳದ ಕಾರ್ಯಕರ್ತರು ಮೂರ್ತಿಗೆ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಆಗಮಿಸಿ ವಿದ್ಯುತ್ ಕಡಿತಗೊಳಿಸಿ ಅನಾಹುತ ತಪ್ಪಿಸಿದ್ದಾರೆ.