ನನ್ ಯಕ್ಡಾ ಕೂಡಾ ಕುಮಾರಸ್ವಾಮಿ ಮನೆ ಕಡೆ ಬರಲ್ಲ:ಹುಚ್ಚ ವೆಂಕಟ್ ಕಿಡಿ
Team Udayavani, May 30, 2018, 1:52 PM IST
ಬೆಂಗಳೂರು: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುವ ನಟ ಹುಚ್ಚ ವೆಂಕಟ್ ಬುಧವಾರ ರೈತರ ಸಾಲ ಮನ್ನಾ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ನಿವಾಸಕ್ಕೆ ಆಗಮಿಸಿ, ಭೇಟಿ ಸಾಧ್ಯವಾಗದೆ ನಿರಾಶರಾಗಿ ಕಿಡಿ ಕಾರಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮನೆ ಬಳಿ ಬಂದ ವೆಂಕಟ್ಗೆ ಭದ್ರತಾ ಸಿಬಂದಿಗಳು ಭೇಟಿ ನಿರಾಕರಿಸಿದ್ದು, ಅವರು ಹೊರಗೆ ಕೆಲ ಹೊತ್ತು ಕಾಯಬೇಕಾಯಿತು. ಮುಖ್ಯಮಂತ್ರಿಗಳ ಪಿಎ ಸಹಿತ ಭೇಟಿಗೆ ಸಿಗಲಿಲ್ಲ.
ನನ್ ಯಕ್ಡಾ …!
ಭೇಟಿ ಸಾಧ್ಯವಾಗದಾಗ ಕಿಡಿ ಕಾರಿದ ಹುಚ್ಚ ವೆಂಕಟ್ ‘ನನ್ ಯಕ್ಡಾ…ನಾನು ಸಿಎಂ ಜೊತೆ ಮಾತಾಡಲು ಬಂದ್ರೆ ಅವರ ಪಿಎನೂ ಸಿಗ್ತಾ ಇಲ್ಲಾ…ಸಮಾಜದ ಪರ ಇರುವ ನನಗೇ ಸಿಗ್ತಾ ಇಲ್ಲಾ ಅಂದ್ರೆ ಇನ್ನು ಜನಸಾಮಾನ್ಯರಿಗೆ ಈ ಸಿಎಂ ಸಿಕ್ತಾರಾ.. ನನಗೆ ಪ್ರೀತಿ ಮುಖ್ಯ ..ನನ್ ಯಕ್ಡಾ ಕೂಡಾ ಇನ್ನು ಈ ಕಡೆ ಬರಲ್ಲಾ’ ಎಂದರು.
ನನಗೆ ಪಿಎಂ,ಸಿಎಂ ಯಾರೂ ಕೂಡ ದೊಡ್ಡವರಲ್ಲ.ನನಗೆ ಜನ ಮುಖ್ಯ. ಪಿಎಂ ಅವರೇ ನನ್ನ ಮನೆಗೆ ಬರ್ಬೇಕ್..ನಾನು ದುರಾಹಂಕಾರದಿಂದ ಹೇಳ್ತಾ ಇಲ್ಲ. ಇದು ಹುಚ್ಚ ವೆಂಕಟ್ ಸ್ಟೈಲ್ ಎಂದರು.
ಸಾಲ ಮನ್ನಾ ಮಾಡ್ಬೇಕ್..!
ಕುಮಾರಸ್ವಾಮಿ ಅವರು ಹೇಳಿದಂತೆ ರೈತರ ಸಾಲ ಮನ್ನಾ ಮಾಡ್ಲೇ ಬೇಕು ಎಂದರು. ಮಾಡಕೇ ಆಗಿಲ್ಲಾ ಅಂದ್ರೇ..ಯಾಕ್ರೀ ಘೋಷಣೆ ಮಾಡ್ತೀರಾ.. ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್