2022 ಫೆಬ್ರವರಿಯಲ್ಲಿ “ಇನ್ವೆಸ್ಟ್ ಕರ್ನಾಟಕ’
Team Udayavani, Jul 16, 2021, 6:20 AM IST
ಬೆಂಗಳೂರು: ರಾಜ್ಯ ಸರಕಾರ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ವಿಶ್ವ ಬಂಡವಾಳ ಹೂಡಿಕೆ “ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮವನ್ನು 2022ರ ಫೆಬ್ರವರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
2022ರ ಫೆಬ್ರವರಿ 9ರಿಂದ 11ರ ವರೆಗೆ ಬೆಂಗಳೂರಿನ ಅರ ಮನೆ ಮೈದಾನದಲ್ಲಿ “ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗುವುದು. ವಿಶ್ವ ಮಟ್ಟದಲ್ಲಿ ಬಂಡವಾಳದಾರರನ್ನು ಸೆಳೆಯಲು ಕೈಗಾರಿಕಾ ಇಲಾಖೆ ರೋಡ್ ಮ್ಯಾಪ್ ಹಾಕಿ ಕೊಂಡಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಬಂಡವಾಳ ಹೂಡುವ ಉದ್ಯಮಿಗಳಿಗೆ ರಾಜ್ಯ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ನೂತನ ಕೈಗಾರಿಕಾ ನೀತಿ 2020- 25ರ ಅನ್ವಯ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಸೌಲಭ್ಯ ಹಾಗೂ ರಿಯಾಯಿತಿಗಳನ್ನು ನೀಡಲಾಗು ವುದು ಎಂದು ಅವರು ಹೇಳಿದರು. ಮಳೆಗಾಲದ ಅಧಿವೇಶನ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು ಎಂದರು.
ಸಂಪುಟದ ಪ್ರಮುಖ ನಿರ್ಧಾರಗಳು :
- ಕೌಶಲ ಅಭಿವೃದ್ಧಿ ಅಡಿಯಲ್ಲಿ ಜರ್ಮನ್ ಟೆಕ್ನಾಲಜಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ಗೆ ಕಟ್ಟಡ ನಿರ್ಮಾಣಕ್ಕೆ ಮಂಗಳೂರಿನಲ್ಲಿ23 ಕೋಟಿ ಮತ್ತು ಬೆಳಗಾವಿಯಲ್ಲಿ 16 ಕೋ.ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ.
- ನೇತ್ರಾವತಿಗೆ ಅಡ್ಡಲಾಗಿ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 66 ಕೋ. ರೂ.ಗೆ ಅನುಮೋದನೆ.
- ಗದಗ ಪಶು ಸಂಗೋಪನ ಕಾಲೇಜಿನ ಎರಡನೇ ಹಂತ ಕಾಮಗಾರಿಗೆ 30 ಕೋ.ರೂ. ಹೆಚ್ಚುವರಿ ಅನುದಾನಕ್ಕೆ ಒಪ್ಪಿಗೆ.
- ದೇವದುರ್ಗ ಎಂಜನಿಯರಿಂಗ್ ಕಾಲೇಜಿಗೆ 58 ಕೋ. ರೂ. ಬಿಡುಗಡೆಗೆ ತೀರ್ಮಾನ.
- ಕೆ.ಎಸ್.ಎಫ್.ಸಿ. ಕಟ್ ಬಾಕಿ ಆಗಿರುವವರಿಗೆ ಅನುಕೂಲ ಕಲ್ಪಿಸಲು ಕ್ರಮ.
- ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ತೀರ್ಮಾನ.
- 139 ಕೈದಿಗಳನ್ನು ಸನ್ನಡತೆ ಅಧಾರದ ಮೇಲೆ ಬಿಡುಗಡೆಗೆ ಶಿಫಾರಸು ಮಾಡಲು ಒಪ್ಪಿಗೆ.
- 2019ರಲ್ಲಿ ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಪರಿ ಹಾರ ನೀಡಲು ಅನುಮೋದನೆ.
- ಕಂದಾಯ ಇಲಾಖೆಯಲ್ಲಿ ವಿವಿಧ ವೃಂದದ ಸಿಬಂದಿಗೆ ಸಾಮಾನ್ಯ ಹಿರಿತನ ಆಧಾರದಲ್ಲಿ ಭಡ್ತಿ ನೀಡಲು ಅನುಮತಿ. 3,059 ಎಸ್ಡಿಎ, 9,843 ವಿಎ ಹಾಗೂ 2,450 ಎಫ್ಡಿಎ ಹುದ್ದೆಗಳಿವೆ.
- ಬಳ್ಳಾರಿಯ ಶಿರಗುಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು46 ಕೋ.ರೂ. ಬಿಡುಗಡೆ.
- ರಾಣೆಬೆನ್ನೂರಿನ 18 ಕೆರೆಗಳನ್ನು ತುಂಬಿಸಲು 206 ಕೋ.ರೂ. ಯೋಜನೆಗೆ ಒಪ್ಪಿಗೆ.
ಜೆಒಸಿ-ಪಿಯುಸಿ ತತ್ಸಮಾನ ಕೋರ್ಸ್:
ಜೆಒಸಿ ಕೋರ್ಸ್ ಅನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಬೇಕೆಂಬ ದೀರ್ಘ ಕಾಲದ ಆಗ್ರಹಕ್ಕೆ ಸರಕಾರ ಒಪ್ಪಿಗೆ ಸೂಚಿಸಿದೆ. ಇನ್ನು ಮುಂದೆ ಜೆಒಸಿ ಕೋರ್ಸ್ ಪೂರೈಸಿದವರು ಸರಕಾರಿ ಉದ್ಯೋಗಕ್ಕೆ ಅರ್ಜಿ
ಸಲ್ಲಿಸಲು ಅವಕಾಶ ಸಿಗಲಿದೆ. ವೃತ್ತಿ ಶಿಕ್ಷಣ (ಜಾಬ್ ಓರಿಯೆಂಟೆಡ್ ಕೋರ್ಸ್- ಜೆಒಸಿ) ಎಸೆಸೆಲ್ಸಿ ಬಳಿಕ 2 ವರ್ಷಗಳ ಕೋರ್ಸ್ ಆಗಿತ್ತು. 2010ರಲ್ಲಿ ಸರಕಾರ ಜೆಒಸಿಯನ್ನು ರದ್ದು ಮಾಡಿತ್ತು. ಅದರಂತೆ 2011ರಲ್ಲಿ ಜೆಒಸಿ ಕೋರ್ಸ್ ರಾಜ್ಯದಲ್ಲಿ ಸಂಪೂರ್ಣ ರದ್ದಾ ಗಿತ್ತು. ಪಿಯುಸಿಗೆ ತತ್ಸಮಾನ ಕೋರ್ಸ್ ಎಂದೇ ಕರೆಯಲಾಗುತ್ತಿತ್ತು. ಆದರೂ ಸರಕಾರಿ ಉದ್ಯೋಗಕ್ಕೆ ಜೆಒಸಿ ಅಭ್ಯರ್ಥಿಗಳನ್ನು ಪರಿಗಣಿಸುತ್ತಿರಲಿಲ್ಲ.
ಯೋಜನೆಗಳಿಗೆ ಹಣಕಾಸಿನ ಕೊರತೆ ಇಲ್ಲ :
ಪ್ರತಿ ಸಂಪುಟ ಸಭೆಯಲ್ಲೂ ಸಾವಿರಾರು ಕೋ. ರೂ. ಯೋಜನೆ ಗಳಿಗೆ ಅನುಮತಿ ದೊರೆ ಯುತ್ತಿದೆ. ಸರಕಾರದಲ್ಲಿ ಅಷ್ಟೊಂದು ಹಣ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ಯೊಂದು ಯೋಜನೆಯೂ ಸಂಪುಟಕ್ಕೆ ಬರುವ ಮೊದಲು ಹಣಕಾಸು ಇಲಾಖೆಯ ಅನುಮತಿ ಪಡೆದಿರುತ್ತವೆ. ಅಲ್ಲದೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿದ ಕೂಡಲೇ ಹಣ ಬಿಡುಗಡೆ ಮಾಡುತ್ತಿಲ್ಲ. ಕಾಮಗಾರಿ ಪೂರ್ಣಗೊಂಡ ಬಳಿಕ ಹಣ ಬಿಡುಗಡೆ ಮಾಡ ಲಾಗುವುದು. ಹೀಗಾಗಿ ಹಣಕಾಸಿನ ಲಭ್ಯತೆ ಆಧಾರದಲ್ಲೇ ಯೋಜನೆಗಳಿಗೆ ಅನುಮತಿ ನೀಡಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ