ಸಿನಿ ದಿಗ್ಗಜರ ನಿವಾಸಗಳಲ್ಲಿ ಇಂದೂ ಮುಂದುವರಿದ ಐಟಿ ಶೋಧ
Team Udayavani, Jan 4, 2019, 4:55 AM IST
ಬೆಂಗಳೂರು: ಗುರುವಾರ ಬೆಳ್ಳಂಬೆಳಗ್ಗೆ ಸ್ಯಾಂಡಲ್ವುಡ್ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರವೂ ದಾಖಲಾತಿಗಳ ಪರಿಶೀಲನೆ ಮುಂದುವರಿಸಿದ್ದಾರೆ.
ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಸಮೀಪ ಇರುವ ನಟ ಶಿವರಾಜ್ಕುಮಾರ್ ಮನೆ, ಸದಾಶಿವನಗರದಲ್ಲಿರುವ ನಟ ಪುನೀತ್ ರಾಜ್ಕುಮಾರ್ ಮನೆ,ಜೆ.ಪಿ.ನಗರದಲ್ಲಿರುವ ಸುದೀಪ್ ಮನೆ, ಕತ್ರಿಗುಪ್ಪೆಯಲ್ಲಿರುವ ಯಶ್ ಮನೆ ಹಾಗೂ ಮಲ್ಲೇಶ್ವರದಲ್ಲಿರುವ ರಾಧಿಕಾ ಪಂಡಿತ್ ಮನೆ, ಮಹಾಲಕ್ಷ್ಮೀ ಲೇಔಟ್ನಲ್ಲಿರುವ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯಲ್ಲಿರುವ ವಿಜಯ್ ಕಿರಗಂದೂರು ಮನೆ ಹಾಗೂ ಜಯಣ್ಣ ಮನೆ, ಎಚ್ಎಸ್ ಆರ್ ಲೇಔಟ್ನಲ್ಲಿರುವ ವಿಧಾನಪರಿಷತ್ ಸದಸ್ಯ, ನಿರ್ಮಾಪಕ ಸಿ.ಆರ್.ಮನೋಹರ್ ಮನೆ, ಕಚೇರಿಗಳಲ್ಲಿ ಶೋಧ ಮುಂದುವರಿದಿದೆ.
ಸುದೀಪ್ ಅವರು ಮನೆಯಲ್ಲಿದ್ದು ಹೊಟೇಲ್ನಿಂದ ಉಪಹಾರವನ್ನು ಆಪ್ತರು ತಂದುಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಯಶ್ ಅವರ ನಿವಾಸದಲ್ಲೂ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಇಬ್ಬರು ಮಹಿಳಾ ಅಧಿಕಾರಿಗಳು ಆಗಮಿಸಿರುವ ಬಗ್ಗೆ ವರದಿಯಾಗಿದೆ.